ಸರ್ಕಾರದ ಉಡುಗೊರೆಯನ್ನೇ ನಿರಾಕರಿಸಿದ್ದ ಪ್ರಾಮಾಣಿಕ ಮಧುಕರ್ ಶೆಟ್ಟಿ
ಬೆಂಗಳೂರು, ಡಿಸೆಂಬರ್, 29: ಸರ್ಕಾರ ಉಡುಗೊರೆಯಾಗಿ ಬಿಡಿಎ ನಿವೇಶನವನ್ನು ನೀಡಲು ಮುಂದಾಗಿದ್ದನ್ನೇ ನಿರಾಕರಿಸಿದ್ದ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ.
ಅಧಿಕಾರಿಗಳ ಪ್ರಾಮಾಣಿಕತೆ ಹಾಗೂ ಧಕ್ಷತೆ ಕುರಿತು ಸಾಕಷ್ಟು ಓದಿರುತ್ತೀರಿ, ಆದರೆ ಹಲವಾರು ಜನ ಮೇಲ್ನೋಟಕ್ಕೆ ಮಾತ್ರ ಎರಡೂ ಅಂಶಗಳನ್ನು ಹೊಂದಿರುತ್ತಾರೆ, ಮಧುಕರ್ ಶೆಟ್ಟಿ ಅವರಿಗೆ ಸಂಬಂಧಿಸಿದಂತೆ ಧಕ್ಷತೆ ಹಾಗೂ ಪ್ರಾಮಾಣೀಕತೆ ಅಕ್ಷರಶಃ ಹೊಂದುವಂತದ್ದಾಗಿತ್ತು.
ತಮ್ಮ ಸೇವಾ ಅವಧಿಯಲ್ಲಿನ ಧಕ್ಷ ಹಾಗೂ ಪ್ರಾಮಾಣಿಕ ನಿಲುವುಗಳಿಂದ ಸಾಕಷ್ಟು ಭ್ರಷ್ಟರಿಗೆ ಕಂಟಕಪ್ರಾಯರಾಗಿದ್ದರು. ಯಾವ ಸರ್ಕಾರ ಸಚಿವರು ಅಥವಾ ಯಾರ ಮುಲಾಜಿಗೂ ಸಿಲುಕದೆ ಕೆಲಸ ಮಾಡುವುದು ಅವರ ಕಾರ್ಯಪ್ರವೃತ್ತಿಯಾಗಿತ್ತು. ಇದಕ್ಕೆ ಪೂರಕವಾಗಿ ಒಂದು ಉದಾಹರಣೆಯನ್ನು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ನೀಡಿದ್ದಾರೆ.

''ಲೋಕಾಯುಕ್ತ ಎಸ್ಪಿಯಾಗಿದ್ದಾಗ ಇವರ ಧಕ್ಷ ಸೇವೆ ಹಾಗೂ ತನಿಖಾ ವೈಖರಿಗಳನ್ನು ಮೆಚ್ಚಿ ರಾಜ್ಯ ಸರ್ಕಾರವು ಬಿಡಿಎನಲ್ಲಿ ನಿವೇಶನ ನೀಡಲು ಮುಂದಾಗಿತ್ತು, ಬೆಂಗಳೂರಿನಲ್ಲಿ ನಿವೇಶನಕ್ಕೆ ಚಿನ್ನದಂತಹ ಬೆಲೆ ಇದೆ. ಆದರೆ ಸರ್ಕಾರದ ಈ ಉಡುಗೊರೆಯನ್ನು ಮಧುಕರ್ ಶೆಟ್ಟಿ ನಯವಾಗಿ ತಿರಸ್ಕರಿಸಿದ್ದರು.
ಒಬ್ಬ ಐಪಿಎಸ್ ಅಧಿಕಾರಿಯಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಇದು ಸರ್ಕಾರ ನನಗೆ ಕೊಡುವ ಸಂಬಳಕ್ಕೆ ಮಾಡುವ ಕೆಲಸ ಈ ಕೆಲಸಕ್ಕಾಗಿ ನನಗೆ ನಿವೇಶನದ ಉಡುಗೊರೆ ಅಥವಾ ಇನ್ಯಾವುದೇ ರೀತಿಯ ಉಡುಗೊರೆಯ ಅಗತ್ಯವಿಲ್ಲ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಿದ್ದರು'' ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ನಾನು ಲೋಕಾಯುಕ್ತನಾಗಿದ್ದಾಗ ಅವರನ್ನು ಹತ್ತಿರದಿಂದ ನೋಡಿದ್ದೇನೆ, ಹೆಚ್ಚು ಮೃದು ಭಾಷಿಯಾಗಿದ್ದ ಇವರು ಯಾವ ವಿಚಾರದಲ್ಲಿಯೂ ರಾಜಿಯಾದವರಲ್ಲ, ಒಬ್ಬ ಸಚಿವ ಹಾಗೂ ಅವರ ಮಗನ ವಿರುದ್ಧ ಭೂಕಬಳಿಕೆ ಆರೋಪ ಬಂದಾಗ ಅದನ್ನು ದಿಟ್ಟವಾಗಿ ತನಿಖೆ ನಡೆಸಿ ಜೈಲಿಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿದ್ದರು. ಇಂತಹ ಐಪಿಎಸ್ ಅಧಿಕಾರಿ ಸಿಗುವುದು ವಿರಳ ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯ ಪಡುತ್ತಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications