484046swine fluಹಂದಿಜ್ವರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೊಸ ಹೆಸರು/news/2009/05/01/swine-flu-renamed-by-who-to-h1n1-influenza.htmlಜೆನೀವಾ, ಮೇ.1: ಮಾಂಸೋದ್ಯಮದ ತೀವ್ರ ಒತ್ತಡಕ್ಕೆ ಮಣಿದಿರುವ ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ವ್ಯಾಧಿ ಹಂದಿ ಜ್ವರಕ್ಕೆ (ಸ್ವೈನ್ ಫ್ಲೂ) ಹೊಸ ಹೆಸರಿಟ್ಟಿದೆ. ಹಂದಿ ಜ್ವರ ಈಗ H1N1 influenza ಎಂದು ಬದಲಾಗಿದೆ.''ಇಂದಿನಿಂದ ಈ ಹೊಸ ಸಾಂಕ್ರಾಮಿಕ ವೈರಸನ್ನು H1N1ಎಂದು ಹೆಸರಿಸಿದ್ದೇವೆ '' ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ(ಏ.30) ಪ್ರಕಟಣೆಯಲ್ಲಿ ತಿಳಿಸಿದೆ. ಈ 36337http://kannada.oneindia.com/img/2009/05/01-swine-outbreak.jpg484046swine fluಹಂದಿ ಜ್ವರಕ್ಕೆ ಬೆಚ್ಚಿದ ಬಿದ್ದ 'ರಾಜ್' ಚಿತ್ರತಂಡ /movies/headlines/2009/05/05-raaj-puneet-movie-shooting-called-off-swine-flu.htmlಹಂದಿ ಜ್ವರ(ಎಚ್ 1 ಎನ್ 1)ಕ್ಕೆ ಹೆದರಿಕೊಂಡ 'ರಾಜ್' ಚಿತ್ರತಂಡ ಕೆನಡಾ ಪ್ರವಾಸವನ್ನು ರದ್ದು ಮಾಡಿಕೊಂಡಿದೆ. ಈ ಕುರಿತು ವಿವರ ನೀಡಿರುವ ನಿರ್ದೇಶಕ ಪ್ರೇಮ್, ರಾಜ್ ಚಿತ್ರಕ್ಕಾಗಿ ಕೆನಡಾದಲ್ಲಿ ಎರಡು ಹಾಡುಗಳನ್ನು ಚಿತ್ರೀಕರಿಸಬೇಕಿತ್ತು. ಇದುವರೆಗೂ ಯಾರೂ ಸೆರೆಹಿಡಿಯದ ಕೆನಡಾದ ರಮಣೀಯ ದೃಶ್ಯಗಳನ್ನು ನಮ್ಮ ಚಿತ್ರದಲ್ಲಿ ತೋರಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ ಕೆನಡಾದಲ್ಲಿ ಹಂದಿಜ್ವರದ ಪ್ರಭಾವ ಜೋರಾಗಿರುವ ಕಾರಣ 36407http://kannada.oneindia.com/img/2009/05/05-raaj-the-showman2.jpg484046swine fluತಮಿಳುನಾಡಿನಲ್ಲಿ ಮತ್ತಿಬ್ಬರಿಗೆ ಹಂದಿಜ್ವರ /news/2009/06/02/swine-flu-india-confirms-two-more-cases.htmlನವದೆಹಲಿ, ಜೂ.02: ಅಮೆರಿಕಾದಿಂದ ವಾಪಸ್ಸಾದ ತಮಿಳುನಾಡಿನ 34 ವರ್ಷದ ಓರ್ವ ಮಹಿಳೆ ಹಾಗೂ ಆಕೆಯ 5 ವರ್ಷದ ಮಗನಿಗೆ ಮಾರಣಾಂತಿಕ ಹಂದಿ ಜ್ವರ ಇರುವುದಾಗಿ ಸೋಮವಾರ ದೃಢಪಟ್ಟಿದೆ. ಇವರು ಮೇ 28ರಂದು ಅಮೆರಿಕಾದಿಂದ ಸ್ವದೇಶಕ್ಕೆ ಹಿಂತಿರುಗಿದ್ದರು. ಈಕೆಯೊಂದಿಗೆ ಹಿಂತಿರುಗಿರುವ ಆರು ವರ್ಷದ ಮಗಳಿಗೆ ಹಂದಿ ಜ್ವರ ಸೋಂಕು ತಟ್ಟಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕೊಯಮತ್ತೂರಿನ ಆಸ್ಪತ್ರೆಯಲ್ಲಿ 37053http://kannada.oneindia.com/img/2009/06/02-swine-flu200.jpg484046swine fluಬೆಂಗಳೂರಿನಲ್ಲಿ ನಾಲ್ವರಿಗೆ ಎಚ್1ಎನ್1 ಶಂಕೆ/news/2009/06/13/h1n1-four-new-cases-in-bengaluru.htmlಬೆಂಗಳೂರು, ಜೂ.13: ಬೆಂಗಳೂರಿನಲ್ಲಿ ನಾಲ್ಕು ಮಂದಿಗೆ ಎಚ್1ಎನ್1ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಸಾಫ್ಟ್ ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ 37317http://kannada.oneindia.com/img/2009/06/13-bial1.jpg484046swine fluದೇಶದಲ್ಲಿಐವತ್ತರ ಗಡಿ ಮುಟ್ಟಿದ ಹಂದಿಜ್ವರದ ಸಂಖ್ಯೆ/news/2009/06/20/six-more-swine-flu-cases-reported-total-50.htmlನವದೆಹಲಿ, ಜೂ.20: ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿಗೆ ಎಚ್ 1ಎನ್1 ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ದೇಶದಲ್ಲಿ ಹಂದಿಜ್ವರದ ಸಂಖ್ಯೆ 50 ಕ್ಕೆ ತಲುಪಿದ್ದು, ಸುಮಾರು 16ರಷ್ಟು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿಅವರನ್ನು ಆಸ್ಪತ್ರೆಯಿಂದ ಬಿಡುಗಡೆಮಾಡಲಾಗಿದೆ.ಹೊಸದಾಗಿ ಆರು ಮಂದಿಗೆ ಹಂದಿಜ್ವರದ ರೋಗಲಕ್ಷಣಗಳು ಕಂಡುಬಂದಿವೆ. ದೆಹಲಿಯ ಮೂವರು, ಬೆಂಗಳೂರಿನಿಂದ ಇಬ್ಬರಿಗೆ ಮತ್ತು ಮುಂಬೈನ ಒಬ್ಬರಿಗೆ ಹಂದಿಜ್ವರದ 37465http://kannada.oneindia.com/img/2009/06/20-swine-flu2.jpg549664influenzaಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು/mixed-bag/health/2009/0810-swine-flu-h1n1-influenza-hits-bengaluru-udupi.htmlಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು 38531http://kannada.oneindia.com/img/2009/08/10-swine-flu-bengaluru1.jpg549664influenzaಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು/mixed-bag/health/2009/0810-swine-flu-dos-and-donts.htmlPrecautions to keep swine flu at bayThe deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a 38536http://kannada.oneindia.com/img/2009/08/10-swine-flu-mask1.jpg549664influenzaಪವಿತ್ರ ತುಳಸಿ ವೈದ್ಯ ತುಳಸಿ ಎಲ್ಲರಿಗೂ ತಿಳಿಸಿ/mixed-bag/health/2009/0812-herbal-medicine-tulsi-to-combat-swine-flu.htmlಲಕ್ನೋ, ಆ. 12 : ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ 38590http://kannada.oneindia.com/img/2009/08/12-tulsi1.jpg549664influenzaಬೆಂಬಿಡದ ಹಂದಿಜ್ವರದ ಭೀತಿ ಮತ್ತು ಆರೋಗ್ಯ ಸಚಿವ/column/ravibelagere/2009/0817-h1n1-virus-swine-flu-and-sriramulu.htmlಆರೋಗ್ಯ ಸಚಿವ ಶ್ರೀರಾಮುಲು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ.* ರವಿ ಬೆಳಗೆರೆಹುಡುಗರು 38670http://kannada.oneindia.com/img/2009/08/17-sriramulu3.jpg549664influenzaಎಚ್1ಎನ್1 ಕುರಿತು ಭಯ ಬೇಡ : ಶ್ರೀರಾಮುಲು ಅಭಯ/news/2009/08/18/h1n1-swine-flu-sriramulu-press-conference-manipal.htmlಬೆಂಗಳೂರು, ಆ. 18 : ಎಚ್1ಎನ್1 (ಹಂದಿಜ್ವರ) ನಿವಾರಣೆಗೆ ರಾಜ್ಯ ಸರ್ಕಾರ ಸರ್ವ ರೀತಿಯಲ್ಲೂ ಶ್ರಮಿಸುತ್ತಿದ್ದು ಜನತೆ ಅಗತ್ಯಕ್ಕಿಂತ ಹೆಚ್ಚಾಗಿ ಈ ರೋಗ ಕುರಿತಂತೆ ಭಯ ಬೀಳದೆ ಅಗತ್ಯ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕರೆ ನೀಡಿದ್ದಾರೆ.ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಅಂತಹ ಬಹಳಷ್ಟು ದೊಡ್ಡ ದೊಡ್ಡ ಖಾಯಿಲೆಗಳನ್ನು 38704http://kannada.oneindia.com/img/2009/08/18-sriramulu3.jpg543171feverಹಂದಿಜ್ವರ ತುರ್ತುನಿಗಾ ಘಟಕ, ಆಸ್ಪತ್ರೆ ವಿಳಾಸ/mixed-bag/health/2009/0805-swine-influenza-critical-care-hospital-info.htmlಬೆಂಗಳೂರು, ಆ.5 : ಪ್ರಸಕ್ತ ಋತುವಿನ ಮಹಾಮಾರಿ ಹಂದಿಜ್ವರವು ಪ್ರಪಂಚ ಹಾಗೂ ಭಾರತದ ನಾನಾ ಪ್ರಾಂತ್ಯಗಳನ್ನು ವೇಗವಾಗಿ ಹಬ್ಬುತ್ತಿದೆ. ಈ ಜ್ವರದ ಕೆಂಗಣ್ಣಿಗೆ ಈಡಾದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು ಜ್ವರ ಹತ್ತಿರ ಸುಳಿಯದಂತೆ ನಾಗರಿಕರು ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಹಾರಾಷ್ಟ್ರದ ಪುಣೆ ನಗರ ಸ್ವೈನ್ ಫಿವರ್ ಹೆಡ್ ಕ್ವಾರ್ಟರ್ಸ್ ನಂತಾಗಿದೆ. ಮೊನ್ನೆ ಅಲ್ಲಿ ಓರ್ವ ಬಾಲಕಿ 38440http://kannada.oneindia.com/img/2009/08/05-pig1.jpg543171feverಬೆಂಗಳೂರಲ್ಲಿ ನಾಲ್ವರಿಗೆ ಎಚ್1ಎನ್ 1 ಸೋಂಕು/mixed-bag/health/2009/0810-swine-flu-h1n1-influenza-hits-bengaluru-udupi.htmlಬೆಂಗಳೂರು, ಆ. 10: ನಗರದಲ್ಲಿ ಶಾಲಾ ಬಾಲಕ ಸೇರಿದಂತೆ, ನಾಲ್ವರಿಗೆ ಎಚ್ 1ಎನ್ 1 ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಸಮೀಕ್ಷೆ ನಡೆಸಿ, ಮುಂಜಾಗರೂಕತಾ ಕ್ರಮ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.ಉಡುಪಿ, ಮಂಗಳೂರಿನಲ್ಲೂ ಹಂದಿಜ್ವರದ ಭೂತ ಆವರಿಸಿದೆ. ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಫ್ರಾಂಕ್ ಅಂಥೋನಿ ಶಾಲೆಯ ಬಾಲಕನೊಬ್ಬನಿಗೆ ಸೋಂಕು ತಗುಲಿರುವುದು 38531http://kannada.oneindia.com/img/2009/08/10-swine-flu-bengaluru1.jpg543171feverಹಂದಿಜ್ವರದಿಂದ ದೂರವಿರಲು ಹತ್ತು ಸೂತ್ರಗಳು/mixed-bag/health/2009/0810-swine-flu-dos-and-donts.htmlPrecautions to keep swine flu at bayThe deadly Swine Flu has reached the Indian shores following the global outbreak and now, claimed six lives. However, Swine Flu is certainly one of those diseased where an ounce of prevention is worth a 38536http://kannada.oneindia.com/img/2009/08/10-swine-flu-mask1.jpg543171feverಹಂದಿಜ್ವರ ಹತೋಟಿಗೆ ಯುಪಿಎ ಏನ್ಮಾಡ್ತಿದೆ?/news/2009/08/10/azad-meets-govt-officials-to-tackle-swine-flu.htmlನವದೆಹಲಿ, ಆ.10: ದೇಶದ ಎಲ್ಲೆಡೆ ಹಂದಿಜ್ವರ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ, ಯುಪಿಎ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಕೊನೆಗೂ ಮನಸ್ಸು ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಗುಲಾಂನಬಿ ಅಜಾದ್ ಅವರು ಇಂದು ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವ ಸಂಪುಟ ಕಾರ್ಯದರ್ಶಿ ಕೆಎಂ ಚಂದ್ರಶೇಖರ್ ಅವರೊಡನೆ ಸಮಾಲೋಚನೆ ನಡೆಸಿದರು. ದೇಶದಲ್ಲಿ ಶೇ. 33 38537http://kannada.oneindia.com/img/2009/08/10-ghulam2.jpg543171feverಹಂದಿಜ್ವರ ಪೀಡೆ ಅಬಾಧಿತ; ಔಷಧ ಕೊರತೆಯ ಬಾಧೆ/news/2009/08/10/h1n1-influenza-tamiflu-drug-scarcity-worries-india.htmlಬೆಂಗಳೂರು, ಆ.10: ದೇಶದ ಜನತೆಯನ್ನು ಹಂದಿಜ್ವರದ ಮಾರಿಯಿಂದ ರಕ್ಷಿಸಲು ಯುಪಿಎ ಸರ್ಕಾರ ಸಿದ್ಧವಾಗಿದೆ ಆದರೂ, ಶೇ. 33 ರಷ್ಟು ಮಂದಿಗೆ ಸೋಂಕು ತಗಲುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಹೇಳಿದ್ದಾರೆ. ಈ ಮಧ್ಯೆ ಸೋಂಕು ಕಂಡುಬಂದಿರುವ ರಾಜ್ಯಗಳಲ್ಲೂ ಆರೋಗ್ಯ ಅಧಿಕಾರಿಗಳು ಸಭೆ ನಡೆಸಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. 38542http://kannada.oneindia.com/img/2009/08/10-swine-flu-girls1.jpgnews"> ಬೆಂಬಿಡದ ಹಂದಿಜ್ವರದ ಭೀತಿ ಮತ್ತು ಆರೋಗ್ಯ ಸಚಿವ | Swine Flu | H1N1 | Virus | Influenza | Sriramulu | Ravi Belagere | ಹಂದಿಜ್ವರ | ಎಚ್1ಎನ್1 | ಶ್ರೀರಾಮುಲು | ಉಪಚುನಾವಣೆ - Kannada Oneindia

ಬೆಂಬಿಡದ ಹಂದಿಜ್ವರದ ಭೀತಿ ಮತ್ತು ಆರೋಗ್ಯ ಸಚಿವ

Sriramulu
ಆರೋಗ್ಯ ಸಚಿವ ಶ್ರೀರಾಮುಲು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ.

* ರವಿ ಬೆಳಗೆರೆ

ಹುಡುಗರು ಬಯ್ಯುತ್ತಾರೆ. ನಿಮಗೆ ನಿಮ್ಮದೇ ಭದ್ರತೆಯ ಬಗ್ಗೆ ಕಾಳಜಿಯಿಲ್ಲ. ಎಲ್ಲೆಂದರಲ್ಲಿಗೆ ಒಬ್ಬೊಬ್ಬರೇ ಹೋಗಿಬಿಡುತ್ತೀರಿ ಎಂದು ಆಕ್ಷೇಪಿಸುತ್ತಾರೆ. ನಕ್ಕು ಸುಮ್ಮನಾಗುತ್ತೇನೆ. ಏಕೆಂದರೆ ನಗೆ ಯಾವತ್ತೂ ದಿಗ್ಭಂದನದಲ್ಲಿ, ಸೆಕ್ಯೂರಿಟಿ ಇಟ್ಟುಕೊಂಡು, ಅಂಗರಕ್ಷಕರ ಹಿಂಡು ಕಟ್ಟಿಕೊಂಡು ಬದುಕಿ ಅಭ್ಯಾಸವಿಲ್ಲ. ಮೈತುಂಬ ಶತ್ರುಗಳನ್ನು ಕಟ್ಟಿಕೊಂಡು ಶರಂಪರ ಬೈದಾಡುತ್ತ ಯುದ್ಧಕ್ಕೆ ಬಿದ್ದಿದ್ದ ಕಾಲದಲ್ಲೇ ನಾನು ಸೆಕ್ಯೂರಿಟಿಯವರನ್ನು ಇಟ್ಟುಕೊಳ್ಳಲಿಲ್ಲ. ಹೆಚ್ಚೆಂದರೆ ಕಿಸೆಯಲ್ಲೊಂದು ರಿವಾಲ್ವರು. ಈ ಮಧ್ಯೆ ಅದನ್ನೂ ಮೂಲೆಗಿಟ್ಟಿದ್ದೇನೆ. ಒಬ್ಬ ಮನುಷ್ಯ, ಅದರಲ್ಲೂ ಪತ್ರಕರ್ತನಾದವನು ಅನುಭವಿಸಬೇಕಾದ ಅತಿ ದೊಡ್ಡ ಸವಲತ್ತು ಅಂದರೆ ಸ್ವಾತಂತ್ರ್ಯ. ಸುಮ್ಮನೆ ಒಮ್ಮೆ ಕಾರಿನಿಂದಿಳಿದು ಗಾಂಧಿ ಬಜಾರ್ ನಗುಂಟ ಬರಿಗಾಲಲ್ಲಿ ಒಬ್ಬನೇ ನದೆದು ಹೋಗಿಬಿಡಬೇಕು, ಪುಸ್ತಕದ ಅಂಗಡಿ ನುಗ್ಗಬೇಕು, ಪಾನಿಪುರಿ ತಿನ್ನಬೇಕು. ರಸ್ತೆಯಲ್ಲಿ ಗೆಳೆಯರು ಸಿಗುತ್ತಾರೆ, ಪರಿಚಿತರು-ಓದುಗರು ಸಿಗುತ್ತಾರೆ. ಸಣ್ಣ ಕುಶಲೋಪರಿ. ಎರಡು ಮಾತು. ಏನೋ ಒಂದು ಸುದ್ದಿ. ಒಂದು ಚಿಕ್ಕ ಸುಳಇವು, ಯಾವುದರ ಬಗ್ಗೆಯೋ ಇನ್ಫರ್ಮೇಷನ್. ಸಾಯಂಕಾಲವೊಂದು ಹಾಗೆ ನಿರುಮ್ಮಳವಾಗಿ ಕಳೆದುಹೋಗಬೇಕು. ಇಂತಹ ಸ್ವಾತಂತ್ರ್ಯ ಕಳೆದುಕೊಂಡ ದಿನ ಪತ್ರಿಕೋದ್ಯಮಕ್ಕೆ ತಿಲಾಂಜಲಿ ಕೊಟ್ಟಂತೆಯೇ.

ಈ ನಡುವೆ ನನ್ನ ಛೇಂಬರಿನಲ್ಲಿ ಕೂಡಲು ಕೂಡ ಮನಸಾಗುವುದಿಲ್ಲ. ಹಾಲ್ ನಲ್ಲಿ ಎಲ್ಲರ ಮಧ್ಯೆ ಮೇಜು ಕುರ್ಚಿ ಹಾಕಿಕೊಂಡು ಬರೆಯಲು ಕೂಡುತ್ತೇನೆ. ತುಂಬ ಹೊತ್ತು ಕೂತು ಬರೆದು ಬೇಸರವಾದಾಗ ಮೆಟ್ಟಿಲಿಳಿದು ಹೋಗಿ ಆಫೀಸಿನ ಮುಂದೆ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಕೂಡುತ್ತೇನೆ. ಇಡೀ ಪದ್ಮನಾಭನಗರವೇ ಕಾಂಕ್ರೀಟ್ ಕಾಡಾಗಿ ಹೋಗಿರುವಾಗ, ನಮ್ಮ ಆಫೀಸಿನೆದುರು ಒಂದು ಅಂಗೈಯಗಲದ ಬಯಲು ಹಾಗೇ ಉಳಿದುಕೊಂಡಿದೆ. ಮೊನ್ನೆ ಬಯಲಿನಲ್ಲಿ ಕುರ್ಚಿ ಹಾಕಿಕೊಂಡು ಕುಳಿತಾಗ ಎದುರು ಮನೆಯಲ್ಲಿ ಯಾರೋ ಕೆಮ್ಮುವುದು ಕೇಳಿಸಿತು. ಎದುರು ಮನೆಯಲ್ಲಿ ನಾಲ್ಕೈದು ಪುಟ್ಟು ಮಕ್ಕಳಿವೆ. ಅದು ಮಾರವಾಡಿ ಸೋದರರಿಬ್ಬರ ಒಟ್ಟು ಕುಟುಂಬ. ನಾನು ಯಾವಾಗ ಆಫೀಸಿನಿಂದ ಹೊರಬಂದರೂ ಆ ಮಕ್ಕಳು ನನ್ನಲ್ಲಿಗೆ ಓಡಿ ಬರುತ್ತವೆ. ಕೈ ಕುಲುಕಿ ಗುಡ್ ಮಾರ್ನಿಂಗ್ ಹೇಳಿ ನಗುತ್ತವೆ. ನಾನು ಪ್ರೀತಿಯಿಂದ ನೆತ್ತಿ ಸವರುತ್ತೇನೆ. ಅಂಥದರಲ್ಲಿ, ಇದ್ಯಾರು ಕೆಮ್ಮುವುದು ಅಂತ ನೋಡಿದರೆ ಅದು ಪೂಜಾ, ಅವೇ ಮಕ್ಕಳ ಪೈಕಿ ಒಂದು. ಅವಳ ಕೆಮ್ಮು ಸಾಮಾನ್ಯವಾಗಿ ಮಕ್ಕಳಿಗೆ ಬರುವಂತಹ ಕೆಮ್ಮಿನಂತಿರಲಿಲ್ಲ. ಕರುಳಿನಿಂದ ಎದ್ದು ಬಿಟ್ಟೂ ಬಿಡದೆ ಬರುತ್ತಿತ್ತು. ಮಲಗಿರಲಾಗದೆ ಜ್ವರದ ತಾಪಕ್ಕೆ ಹೊರಗೆ ಬಂದು ಮೆಟ್ಟಲ ಮೇಲೆ ಕುಳಿತಿದ್ದ ಮಗುವಿಗೆ ಕೂತುಕೊಳ್ಳಲೂ ಆಗುತ್ತಿರಲಿಲ್ಲ. ಮಕ್ಕಳ ಮಾತಿರಲಿ, ದೊಡ್ಡವರಿಗೆ ಕೂಡ ಆ ಪರಿಯ ಕೆಮ್ಮು ಬರುವುದನ್ನು ನಾನು ನೋಡಿಲ್ಲ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಆ ಕುಟುಂಬದ ಹಿರಿಯಲಿಗೆ ಹೇಳಿ ಕಳಿಸಿದ.

ಬೆಂಗಳೂರಿನಲ್ಲಿ ಎಲ್ಲೆಡೆಯೂ ಇದೇ ಪರಿಸ್ಥಿತಿ. ಯಾವ ಮನೆ ನೋಡಿದರೂ ಜ್ವರ. ಇಂಥ ಸಮಯದಲ್ಲಿ ಜನಸಾಮಾನ್ಯರು ದಿಕ್ಕೆಡುತ್ತಾರೆ. ಜ್ವರ ನಿಯಂತ್ರಿಸಲು ನೀವೇನು ಮಾಡುತ್ತಿದ್ದೀರಿ ಎಂಬಂತೆ ಸರ್ಕಾರದೆಡೆದೆ ನೋಡುತ್ತಾರೆ. ನಾನು ತಕ್ಷಣ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪೆರುಮಾಳ್ ಅವರಿಗೆ ಫೋನು ಮಾಡಿದೆ. ಮೊದಲಿದ್ದ ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಮಾನವೀಯ ಅನುಕಂಪದ ಅಧಿಕಾರಿ ಮದನಗೋಪಾಲ್ ಅವರ ಜಾಗಕ್ಕೆ ಬಂದು ಕುಳಿತಿರುವ ಪೆರುಮಾಳ್ ಹಳೇ ಕಳ್ಳ. ಆತನಿಗೆ ಹಂದಿಜ್ವರದ ಬಗ್ಗೆ ಸಣ್ಣದೊಂದು ಕಾಳಜಿಯೂ ಇದ್ದಂತೆ ಕಾಣಲಿಲ್ಲ. ಆತನೊಡನೆ ಮಾತನಾಡುವುದು ವ್ಯರ್ಥವೆನ್ನಿಸಿ ಆರೋಗ್ಯ ಮಂತ್ರಿ ಶ್ರೀರಾಮುಲೂಗೆ ಫೋನ್ ಮಾಡಿದೆ. ಶ್ರೀರಾಮುಲು ನನ್ನ ಹುಡುಗ. ದುಡ್ಡಿನ ವಿಷಯದಲ್ಲಿ ಕಳ್ಳನಲ್ಲ, ಮೈಗಳ್ಳ ಮೊದಲೇ ಅಲ್ಲ. ಅವನ ಮನೆಯ ಮುಂದೆ ಸಾವಿರಾರು ಜನ ಸದಾ ಗುಂಪು ಸೇರಿರುತ್ತಾರೆ. ಗದಗ್ ನಲ್ಲಂತೂ ಶ್ರೀರಾಮುಲು ಅತ್ಯಂತ ಜನಪ್ರಿಯ ನಾಯಕ. ತೀರ ಪರ್ಸನಲ್ ಲೈಫ್ ಎಂಬುದನ್ನೇ ಬಿಟ್ಟು ಸಾರ್ವಜನಿಕ ಜೀವನವನ್ನು ತನ್ನದಾಗಿಸಿಕೊಂಡು ಬಿಟ್ಟಿದ್ದಾನೆ ಶ್ರೀರಾಮುಲು.

"ಅದೆಲ್ಲ ಇರಲಿ. ಹಂದಿಜ್ವರದ ಭೀತಿಗೆ ಸಿಕ್ಕು ಬೆಂಗಳೂರು ನಡುಗಿ ಹೋಗುತ್ತಿದೆ. ನೀನು ಎಲ್ಲಿದ್ದೀಯ" ಅಂತ ಕೇಳಿದೆ.

ನಿಜ ಹೇಳಬೇಕೆಂದರೆ, ಹಂದಿಜ್ವರವೆಂಬುದು ತನ್ನ ಮೊದಲ ಬಲಿ ತೆಗೆದುಕೊಂಡದ್ದು ಬೆಂಗಳೂರಿನ ಬಿಟಿಎಮ್ ಲೇಔಟಿನಲ್ಲಿ. ಇಪ್ಪತ್ತಾರು ವರ್ಷ ವಯಸ್ಸಿನ ರೂಪಾ ಎಂಬ ಶಿಕ್ಷಕಿ ಹಂದಿಜ್ವರದಿಂದ ತೀರಿಕೊಂಡಳು ಎಂಬ ಸುದ್ದಿ ತಿಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವಣರಕ್ಕೆಂದು ತಮ್ಮ ದಂಡಿನ ಸಮೇತ ಹೋಗಿದ್ದರು. ಸುದ್ದಿ ಕೇಳಿದ ತಕ್ಷಣ ಅಲ್ಲೇ ಕೊತ್ತ ಕುದ್ದು ಹೋದ ಅವರು, 'ಈ ಆರೋಗ್ಯ ಮಂತ್ರಿ ಶ್ರೀರಾಮುಲು ಎಲ್ರೀ?' ಅಂತ ಪತ್ರಕರ್ತರ ಮುಂದೆ ಚಿಟಿಚಿಟಿ ಚೀರುವ ನಾಟಕವಾಡಿದರು. ಅವರು ಹಾಗೆ ಚೀರುತ್ತಿದ್ದಾಗ ಆರೋಗ್ಯಮಂತ್ರಿ ಶ್ರೀರಾಮುಲು ಕೊಳ್ಳೇಗಾಲದಲ್ಲಿ ಮನೆಮನೆ ತಿರುಗಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಯಾಚಿಸುತ್ತಿದ್ದ. ಹಾಗೆ ಅವನನ್ನು ಕೊಳ್ಳೇಗಾಲಕ್ಕೆ ಕಳಿಸಿ, 'ಬಿಜೆಪಿ ಕ್ಯಾಂಡಿಡೇಟನ್ನು ನೀನು ಗೆಲ್ಲಿಸಿಕೊಂಡೇ ಬರಬೇಕು' ಎಂದು ಅಪ್ಪಣೆ ಕೊಟ್ಟವರೇ ಯಡಿಯೂರಪ್ಪ. ಆದರೆ ಇಲ್ಲಿ ಪತ್ರಕರ್ತರ ಮುಂದೆ ಆರೋಗ್ಯ ಸಚಿವ ತನ್ನ ಹೊಣೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬಂತೆ ಮೈಕೈ ಪರಚಿಕೊಂಡದ್ದೂ ಅವರೇ. ರಾಜಕಾರಣವೆಂದರೆ ಇದು.

"ನನಗೆ ಅದೆಲ್ಲ ಅರ್ಥವಾಗುತ್ತದೆ ಶ್ರೀರಾಮುಲು. ಆದರೆ ಆರೋಗ್ಯ ಸಚಿವನಾಗಿ ನಿನಗೆ ನಿನ್ನದೇ ಜವಾಬ್ದಾರಿಯಿದೆ. ಯಾವ ರಾಜಕಾರಣವೂ ನಿನ್ನೊಳಗಿನ ಅಂತಃಕರಣವನ್ನು ನುಂಗಿ ಬಿಡಬಾರದು. ನೀನು ಕೊಳ್ಳೇಗಾಲದಲ್ಲೇ ಇರು. ಬಳ್ಳಾರಿಯಲ್ಲೇ ಇರು. ಕೈಲಿರುವ ಕೆಲಸ ಬಿಟ್ಟು ನೆಟ್ಟಗೆ ಬೆಂಗಳೂರಿಗೆ ಬಾ. ನಾಲ್ಕು ಆಸ್ಪತ್ರೆಗಳಿಗೆ ಭೇಟಿ ಕೊಡು. ಗಾಬರಿ ಬಿದ್ದಿರುವ ಜನಕ್ಕೆ ಧೈರ್ಯ ಹೇಳು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಇದೆಯೋ ಇಲ್ಲವೋ ಪರೀಕ್ಷಿಸು. ಪೆರುಮಾಳ್ ರಂತಹ ಮೈಗಳ್ಳ ಅಧಿಕಾರಿಗಳಿಗೆ ಎರಡು ಲಾತಾ ಕೊಟ್ಟು ಕೆಲಸ ಮಾಡಿಸು. ಇವಿಷ್ಟೂ ಆದ ಮೇಲೆ ಕೊಳ್ಳೇಗಾಲಕ್ಕಾದರೂ ಹೋಗು, ಮತ್ತೆಲ್ಲಿಗಾದರೂ ಹೋಗು" ಅಂದೆ.

ಶ್ರೀರಾಮುಲು ನನ್ನ ಮಾತು ತೆಗೆದುಹಾಕಲಿಲ್ಲ. ಮಾರನೆಯ ದಿನವೇ ಬೆಳಿಗ್ಗೆ ಹೆಲಿಕಾಪ್ಟರ್ ಹತ್ತಿಕೊಂಡು ಬಂದವನು ಜಯದೇವ ಆಸ್ಪತ್ರೆ ತಲುಪಿಕೊಂಡು ಅಲ್ಲಿಂದಲೇ ಫೋನು ಮಾಡಿದ. "ಅಣ್ಣಾ ಬಂದಿದೀನಿ" ಅಂತ. ಹಾಗೆ ಬಂದವನು ಮಖ್ಯಮಂತ್ರಿಗಳ ಜೊತೆ ಕುಳಿತು ಅಧಿಕಾರಿಗಳ ಸಭೆ ನಡೆಸಿದ. ಮತ್ತೆರಡು ಮೂರು ಕಡೆ ಭೇಟಿ ನೀಡಿದ. ಗಾಬರಿ ಬಿದ್ದ ಜನರೊಂದಿಗೆ ಮಾತನಾಡಿದ. ಇದೆಲ್ಲ ಒಬ್ಬ ಸಚಿವ ಮಾಡಬೇಕಾದ ಕೆಲಸಗಳೇ. ಶ್ರೀರಾಮುಲು ಭಯಂಕರವಾದದ್ದೇನನ್ನೋ ಕಡೆದು ಕಟ್ಟಿಹಾಕಿದ ಅಂತಾಗಲೀ, ಆತನನ್ನು ಬೆಂಬಲಿಸಬೇಕು ಅಂತಾಗಲೀ ನಾನು ಇಷ್ಟುದ್ದ ಬರೆಯುತ್ತಿಲ್ಲ. ಹಂದಿಜ್ವರದಂಥ ಸಾಂಕ್ರಾಮಿಕ ರೋಗಗಳ ಜನಸಾಮಾನ್ಯರಲ್ಲಿ ಎಂಥ ಪ್ಯಾನಿಕ್ ಸೃಷ್ಟಿಸಿಬಿಡುತ್ತವೆ ಎಂಬ ಮಾತಿಗೆ ಹೇಳಿದೆ. ಇವತ್ತು ಹಂದಿಜ್ವರವೆಂಬುದು ಕೇವಲ ಖಾಯಿಲೆಯಾಗಿ ಉಳಿದಿಲ್ಲ. ಅದಕ್ಕೆ ಅಂತಾರಾಷ್ಟ್ರೀಯ ಆಯಾಮ ದೊರೆಯ ತೊಡಗಿದೆ. ಅದು ಕೂಡ ಭಯೋತ್ಪಾದಕತೆಯ ಒಂದು ಮುಖವಾಡ ಎಂಬ ಅನುಮಾನ ಕೆಲವರನ್ನು ಕಾಡುತ್ತಿದ್ದೆ.

ಅದನ್ನು bio terrorism ಅನ್ನುತ್ತಾರೆ. ರೋಗಾಣುಗಳನ್ನು ತಮ್ಮ ಶತ್ರುದೇಶಗಳಿಗೆ ಬೇಕೆಂತಲೇ ರವಾನೆ ಮಾಡುತ್ತಾರೆ. ಇಂತಹ ರೋಗಗಳಿಗೆ unprepared ಆಗಿರುವ ಭಾರತದಂಥ ವಿಶಾಲವಾದ, ಬಡದೇಶಗಳಲ್ಲಿ ರೋಗ ಹರಡುವಂತೆ ಮಾಡುತ್ತಾರೆ. ಇದು ಸದ್ದಿಲ್ಲದೆ ನಡೆದು ಹೋಗುವಂಥ ಪ್ರಕ್ರಿಯೆ. ಭಾರತದೊಳಕ್ಕೆ ಹಂದಿಜ್ವರವನ್ನು ಈ ಉದ್ದೇಶದಿಂದಲೇ ಪಂಪ್ ಮಾಡಲಾಯಿತಾ? ಈ ಬಗ್ಗೆ ತಲೆ ಕೆಡಿಸಿಕೊಂಡವರಿದ್ದಾರೆ. ಆದರೆ ಇದು ಪತ್ತೆಯಾಗುವುದಾದರೂ ಹೇಗೆ?

ಜ್ವರಕ್ಕಿಂತ ಹೆಚ್ಚಾಗಿ ಜ್ವರದ ಭೀತಿ ಎಲ್ಲರನ್ನೂ ಕಾಡುತ್ತಿದೆ. ಸಾರ್ವಜನಿಕ ಮೂತ್ರಿ ಬಳಸುವಂತಿಲ್ಲ. ಸಾರ್ವಜನಿಕರು ಬಳಸುವ ಫೋನು ಮುಟ್ಟುವಂತಿಲ್ಲ. ಮುಖ್ಯವಾಗಿ, ಮೆಟ್ಟಿಲುಗಳ ಪಕ್ಕದಲ್ಲಿ ಕೈಯಿಡಲು ಹಾಕಿರುವ ಕಬ್ಬಿಣದ ಅಥವಾ ಕಟ್ಟಿಗೆಯ ರೇಲಿಂಗ್ ಇರುತ್ತದಲ್ಲ, ಅದನ್ನು ಮುಟ್ಟುವಂತಿಲ್ಲ. ಕೆಮ್ಮುವವರ, ಸೀನುವವರ ಪಕ್ಕದಲ್ಲಿ ಕೂಡುವಂತಿಲ್ಲ. ಜ್ವರ ಅಂತ ಗೊತ್ತಾಗಿಬಿಟ್ಟರೆ ಸಾಕು: ಅದು ಹಂದಿಜ್ವರವಿರಲಿ ಬಿಡಲಿ, ಮನೆಯವರೇ ದೂರವಾಗಿ ಬಿಡುವ ಪರಿಸ್ಥಿತಿ. ಶಾಲೆಗೆ ಹೋದ ಮಗು ಜ್ವರ ತಗುಲಿಸಿಕೊಳ್ಳದೆ ಮನೆಗೆ ಹಿಂದಿರುಗಿದರೆ ಸಾಕು ಎಂದು ನಿಟ್ಟುಸಿರಿಡುವ ದಿನಗಳಿವು. ಇಂಥ ಹಂದಿಜ್ವರದ ಹಾವಳಿಯ ಮಧ್ಯೆ ಚಿಕೂನ್ ಗುನ್ಯಾ, ಡೆಂಗ್ಯೂ, ವೈರಲ್ ಫಿವರ್ ಗಳ ತಾಂಡವ ನೃತ್ಯ ನಡೆದಿದೆ. ನಿಸರ್ಗವೇ ಮುನಿದಿರುವಾಗ ಮನುಷ್ಯತಾನೇ ಎನು ಮಾಡಬಲ್ಲ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+