ಎಚ್ 1ಎನ್1 ಕುಣಿತ : ಆರೋಗ್ಯ ಮಂತ್ರಿ ನಾಪತ್ತೆ

ಕಳೆದ ಒಂದು ವಾರದಿಂದ ದೇಶದಲ್ಲಿ ಹೆಮ್ಮಾರಿ ಕುಣಿತ ಮೇರೆ ಮೀರಿದೆ. ಪುಣೆಯಿಂದ ಆರಂಭವಾಗಿರುವ ಈ ಪೀಡೆ ದಿನ ಕಳೆದಂತೆ ದೇಶದ ವಿವಿಧ ನಗರಗಳಲ್ಲಿ ವ್ಯಾಪಿಸತೊಡಗಿದೆ. ಬೆಂಗಳೂರು ಮತ್ತು ಉಡುಪಿ ಮತ್ತು ಬೆಳಗಾವಿ ನಗರಗಳಲ್ಲಿ ಎಚ್ ಎನ್ ಸೋಂಕಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲಾಗಿದೆ. ಮರಣಮೃದಂಗ ಬಾರಿಸುತ್ತಿರುವ ಭೀಕರ ಕಾಯಿಲೆಗೆ ರಾಜ್ಯದ ಜನರು ಭಯಭೀತರಾಗಿರುವುದು ಸುಳ್ಳಲ್ಲ. ಆದರೆ, ಆರೋಗ್ಯ ಸಚಿವ ಬಿ ಶ್ರೀರಾಮುಲು ಕಾಣಿಯಾಗಿರುವುದು ಮಾತ್ರ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿರುವುದು ಮುಂದುವರೆದಿದೆ.
ಬೆಂಗಳೂರಿನ ಸರ್ಜಾಪುರದಲ್ಲಿ ಅಮೃತಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಎಚ್ 1ಎನ್ 1 ಪತ್ತೆಯಾಗಿದ್ದರಿಂದ ಕಾಲೇಜಿನ ರಜೆ ಘೋಷಿಸಲಾಗಿದೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧ ಶಾಲೆಗಳು ರಜೆ ನೀಡಿವೆ. ಆದರೆ, ಗೃಹ ಸಚಿವ ವಿ ಎಸ್ ಆಚಾರ್ಯ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಐ ಆರ್ ಪೆರುಮಾಳ್ ಅವರು ಬೇಜಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇವರು, ರಾಜ್ಯ ಈ ಮಾರಿಗೆ ತಡೆಗೆ ಸನ್ನದ್ಧವಾಗಿದೆ ಎಂದು ಒಬ್ಬರು ಹೇಳಿದ್ದರೆ, ಸೋಂಕಿರುವವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಖಂಡನೀಯ. ಅಲ್ಲದೇ. ಆತಂಕಗೊಂಡ ಜನ ರಾಜೀವ ಗಾಂಧಿ ಎದೆರೋಗ ಆಸ್ಪತ್ರೆಗೆ ದೌಡಾಯಿಸಿದರೆ, ಅಲ್ಲಿ ಕಿಟ್ ಇಲ್ಲ, ಇನ್ನೊಂದಿಲ್ಲ ಎಂಬ ಉತ್ತರ ಕೇಳಿದ ಮಂದಿ ಧರೆಗಿಳಿದು ಹೋಗಿದ್ದಾರೆ. ಕಳೆದ ಮೂರು ದಿನಗಳಿಂದ ರಾಜೀವ ಗಾಂಧಿ ಆಸ್ಪತ್ರೆಯ ಮುಂದೆ ಜನರ ದೊಡ್ಡ ಸಾಲು ನೋಡಬಹುದಾಗಿದೆ.
ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಮಾರಿಗೆ ತಡೆದೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ನಿರ್ದೇಶನ ನೀಡುವುದು ಬಿಟ್ಟು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಾಹಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು ಎನ್ನುವ ಏಕೈಕ ಗುರಿಯಾಗಿರಿಸಿಕೊಂಡಿರುವ ಸರಕಾರ ಮನಸ್ಥಿತಿಗೆ ಜನರ ಶಾಪ ತಟ್ಟದೆ ಇರದು. ಆರೋಗ್ಯ ಇಲಾಖೆ ಇದ್ದು ಇಲ್ಲದಂತಾಗಿದೆ. ಸೋಂಕು ಹಬ್ಬಿತ್ತಿದ್ದರೂ ಈವರೆಗೂ ಜನರಿಗೆ ಧೈರ್ಯ ಹೇಳುವ ಕೆಲಸ ಮಾಡದಿರುವ ಆರೋಗ್ಯ ಮಂತ್ರಿ ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ. ಶೀಘ್ರ ಮುಖ್ಯಮಂತ್ರಿಗಳು ಇತ್ತ ಕಡೆ ಗಮನ ಹರಿಸಿಬೇಕಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications