ಯಡ್ಡಿ-ಈಶು ಕಿತ್ತಾಟ: ಶಿವಮೊಗ್ಗ ಬಿಜೆಪಿ ಬೆಂಬಲಿಗರ ಕಾದಾಟ
ಶಿವಮೊಗ್ಗ, ಜನವರಿ 17: ಜಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂಪರಪ್ಪ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರ ನಡುವಿನ ಜಿದ್ದಾಜಿದ್ದಿ ಅವರ ಬೆಂಬಲಿಗರಿಗೂ ಅಂಟಿದ್ದು ಶಿವಮೊಗ್ಗದಲ್ಲಿ ಈ ಸಂಬಂಧ ಕೈ-ಕೈ ಮಿಲಾಯಿಸುವ ಹಂತ ತಲುಪಿದ್ದಾರೆ.
ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಭಾರೀ ವಾಗ್ವಾದ ನಡೆದು ತಳ್ಳಾಟ ನೂಕಾಟದ ಹಂತ ತುಲುಪಿದೆ, ಬಳಿಕ ಕಚೇರಿಗೆ ಪೊಲೀಸರನ್ನು ನಿಯೋಜಿಸಲಾಗಿದೆ.[ಕಿತ್ತಾಡುತ್ತಿರುವ ಬಿಜೆಪಿ ನಾಯಕರಿಗೆ ನೊಂದ ಕಾರ್ಯಕರ್ತನ ಮುಕ್ತಪತ್ರ]
ಬಿಜೆಪಿಯ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಮತ್ತು ಮಾಜಿ ಸಂಸದ ಹಾಗೂ ಬಿಜೆಪಿ ವಿಭಾಗೀಯ ಪ್ರಭಾರಿ ಆಯನೂರು ಮಂಜುನಾಥ್ ನಡೆಸಿ ಪ್ರತಿಕಾಗೋಷ್ಠಿಯಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಪರ ಮತ್ತು ವಿರೋಧವಾಗಿ ಜಿಲ್ಲಾ ಮಟ್ಟದ ನಾಯಕರ ನಡುವೆ ವಾದ-ವಿವಾದ ನಡೆದಿದೆ. ಈ ಮಧ್ಯೆ ಈಶ್ವರಪ್ಪ ಬೆಂಬಲಿಗರು ಗೂಂಢಾಗಿರಿ ನಡೆಸಿದ್ದಾರೆ ಎಮದು ಬಿಎಸ್ ವೈ ಬೆಂಬಲಿಗರು ಆರೋಪಿಸಿದ್ದು ಈ ಕಾರಣದಿಂದಲೇ ಬಿಜೆಪಿಯಲ್ಲಿ ಬೆಂಕಿ ಹತ್ತಿ ಉರಿದಿದೆ.[ಬಿಜೆಪಿಯಲ್ಲಿ ಮುಗಿಯದ ರಗಳೆ: ಬಿಎಸ್ವೈ ವಿರುದ್ದ ಹೊಸ ಹೋರಾಟಕ್ಕೆ ನಾಂದಿ]
ಶಿವಮೊಗ್ಗದಲ್ಲಿ ಬಿಜೆಪಿ ಮುಖಂಡರಲ್ಲಿಯೇ ವಾದ-ವಿವಾದಗಳು ಮುಗಿಲು ಮುಟ್ಟಿದ್ದು, ಬಿಜೆಪಿ ಪಾಳಯದಲ್ಲಿ ತೀವ್ರ ಪ್ರಮಾಣದ ಭಿನ್ನಮತ ಸ್ಫೋಟಿಸುವ ಸಾಧ್ಯತೆಯಿದೆ. ಇನ್ನು ಬಿಎಸ್ ವೈ- ಈಶ್ವರಪ್ಪನವರನ್ನು ರಾಷ್ಟ್ರೀಯ ನಾಯಕರು ಬಂದು ಸಮಾಧಾನ ಮಾಡಬೇಕೇನೋ ತಿಳಿಯದಾಗಿದೆ.