ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಭಕ್ತರು
ರಾಮನಗರ, ಡಿಸೆಂಬರ್, 16: ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರ ನೇತೃತ್ವದಲ್ಲಿ 150 ಯಾತ್ರಾರ್ಥಿಗಳ ತಂಡ ಅಯೋಧ್ಯೆಗೆ ತೆರಳಿದ್ದಾರೆ. ಉತ್ತರಪ್ರದೇಶದ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರಕ್ಕೆ 1.50 ಕೆ.ಜಿ. ತೂಕದ ಬೆಳ್ಳಿ ಇಟ್ಟಿಗೆ, ಸೀತಾ ಮಾತೆಗೆ ಸ್ಥಳೀಯ ರೇಷ್ಮೆ ಸೀರೆ, ರಾಮ-ಲಕ್ಷ್ಮಣರಿಗೆ ಶಲ್ಯಗಳನ್ನು ಸಮರ್ಪಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಜಿಲ್ಲೆಯ ಭಕ್ತರ ತಂಡವು ರಾಮ ಮಂದಿರ ಆವರಣಕ್ಕೆ ತೆರಳಿದ್ದಾರೆ.
ವಿಧಿಬದ್ಧವಾಗಿ
ಪೂಜೆ
ಸಲ್ಲಿಕೆ
ರಾಮಮಂದಿರದ
ಕನ್ನಡಿಗ
ಅರ್ಚಕರಾದ
ಗೋಪಾಲ್
ಭಟ್
ಭಕ್ತರು
ಕೊಂಡೊಯ್ಯದಿದ್ದ
ಕಾಣಿಕೆಗಳಿಗೆ
ವಿಧಿಬದ್ಧವಾಗಿ
ಪೂಜೆ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಯೋಧ್ಯೆಯ ಪವಿತ್ರ ಮೃತ್ತಿಕೆಯನ್ನು ಕೂಡ ಶಾಸ್ತ್ರೋಕ್ತವಾಗಿ ಪೂಜಿಸಿ, ಸಚಿವರು ಮತ್ತು ಅವರ ಸಹ ಯಾತ್ರಾರ್ಥಿಗಳಿಗೆ ನೀಡಲಾಗಿದೆ. ಅಯೋಧ್ಯೆ ಮೃತ್ತಿಕೆಯನ್ನು ಜಿಲ್ಲೆಯ ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು. ಬಳಿಕ, ಮಂದಿರದ ಆವರಣದಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ಮತ್ತು ನ್ಯಾಸದ ಪದಾಧಿಕಾರಿಗಳಿಗೆ ಈ ಕಾಣಿಕೆಗಳನ್ನು ರಾಮನಗರ ಜಿಲ್ಲೆಯ ಪರವಾಗಿ ಸಚಿವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅವರ ಜೊತೆಗಿದ್ದ ಭಕ್ತಗಣವು "ಭಾರತ್ ಮಾತಾ ಕೀ ಜೈ, ಗಂಗಾ ಮಾತಾ ಕೀ ಜೈ, ಸರಯೂ ಮಾತಾ ಕೀ ಜೈ, ಜೈ ಶ್ರೀ ರಾಮ್" ಹೀಗೆ ಮುಂತಾದ ಘೋಷಣೆಗಳನ್ನು ಮೊಳಗಿಸಿದರು.
ರಾಮದೇವರ
ಬೆಟ್ಟದ
ಬಗ್ಗೆ
ಸಚಿವರು
ಹೇಳಿದ್ದೇನು?
ಜಿಲ್ಲೆಯಿಂದ
ತೆಗೆದುಕೊಂಡು
ಹೋಗಿದ್ದ
ಕಾಣಿಕೆಗಳನ್ನು
ಸಮರ್ಪಿಸಿ
ಮಾತನಾಡಿದ
ಸಚಿವ
ಅಶ್ವತ್ಥ್
ನಾರಾಯಣ್,
ರಾಮದೇವರ
ಬೆಟ್ಟದ
ತಾಣವಾದ
ರಾಮನಗರವು
ಪರಮಾತ್ಮನಾದ
ಶ್ರೀರಾಮನ
ಹೆಸರನ್ನೇ
ಹೊತ್ತಿದೆ.
ಜೊತೆಗೆ
ಈ
ಬೆಟ್ಟದಲ್ಲಿ
ದೇಶದಲ್ಲೇ
ಅಪರೂಪವಾಗಿರುವ
ರಣಹದ್ದಿನ
ಸಂತತಿ
ಉಳಿದುಕೊಂಡಿದೆ.
ರಾಮಾಯಣದಲ್ಲೂ
ಈ
ಸಂತತಿಗೆ
ಸೇರಿದ
ಜಟಾಯು,
ಸಂಪಾತಿಗಳ
ಪಾತ್ರವಿದೆ.
ಹೀಗೆ
ರಾಮನಗರ,
ರಾಮ
ಮತ್ತು
ರಾಮಾಯಣಗಳ
ನಡುವೆ
ಮಧುರ
ಬಾಂಧವ್ಯವಿದೆ
ಎಂದು
ಸ್ಮರಿಸಿದರು.
ಶ್ರೀರಾಮ
ನಮ್ಮೆಲ್ಲರ
ಪಾಲಿನ
ಆದರ್ಶ
ಮೂರ್ತಿ
ಶ್ರೀರಾಮನು
ನಮ್ಮ
ಪರಂಪರೆ,
ಸಂಸ್ಕೃತಿ
ಮತ್ತು
ಭಾರತೀಯತೆಯ
ಪ್ರತೀಕವಾಗಿದ್ದಾನೆ.
ನಮ್ಮೆಲ್ಲರ
ಪಾಲಿನ
ಆದರ್ಶಮೂರ್ತಿ
ಆಗಿರುವ
ಶ್ರೀರಾಮನಿಗೆ
ಪ್ರಧಾನಿ
ನರೇಂದ್ರ
ಮೋದಿ
ಅವರ
ನಾಯಕತ್ವದಲ್ಲಿ
ಭವ್ಯವಾದ
ರಾಮ
ಮಂದಿರ
ನಿರ್ಮಾಣವಾಗುತ್ತಿರುವುದು
ಹೆಮ್ಮೆಯ
ಸಂಗತಿಯಾಗಿದೆ.
2024ರ
ಜನವರಿಯ
ಹೊತ್ತಿಗೆ
ಮಂದಿರದ
ಕಾಮಗಾರಿಗಳು
ಮುಗಿದು,
ಜನರ
ದರ್ಶನಕ್ಕೆ
ಮುಕ್ತಗೊಳಿಸಲಾಗುವುದು
ಎಂದರು.
ರಾಮನಿಂದ
ನಮ್ಮಲ್ಲಿ
ರಾಮ
ರಾಜ್ಯದ
ಪರಿಕಲ್ಪನೆ
ಬಂದಿದೆ.
ತ್ರೇತಾಯುಗದಿಂದಲೂ
ರಾಮನು
ಭಾರತೀಯರನ್ನು
ಒಗ್ಗೂಡಿಸುವ
ಶಕ್ತಿಯಾಗಿ
ಉಳಿದುಕೊಂಡು
ಬಂದಿದ್ದಾನೆ.
ಇಲ್ಲಿ
ನಿರ್ಮಿಸಲಾಗುತ್ತಿರುವ
ರಾಮ
ಮಂದಿರಕ್ಕೆ
ತಮ್ಮ
ಕಾಣಿಕೆಯೂ
ಇರಬೇಕೆಂದು
ಇಲ್ಲಿನ
ಭಕ್ತರು
ಅಪೇಕ್ಷೆ
ವ್ಯಕ್ತಪಡಿಸಿದರು.
ಈ
ಮೂಲಕ
ರಾಮನಗರದ
ಜನತೆಗೆ
ಪರಮಾತ್ಮನ
ಆಶೀರ್ವಾದ
ಸಿಕ್ಕಿದೆ
ಎಂದು
ಸಚಿವರು
ಬಣ್ಣಿಸಿದರು.
ಪೂಜೆಯ ಬಳಿಕ ಸಚಿವರು ಮತ್ತು ಯಾತ್ರಾರ್ಥಿಗಳು ಪ್ರಗತಿಯಲ್ಲಿರುವ ಮಂದಿರವನ್ನು ವೀಕ್ಷಿಸಿ, ದೇಗುಲದಲ್ಲಿ ದರ್ಶನ ಪಡೆದರು. ಸಚಿವರ ಜೊತೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜು, ರಾಜ್ಯ ರೇಷ್ಮೆ ಕೈಗಾರಿಕೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್ ಗೌಡ ಸೇರಿದಂತೆ ಹಲವರು ಇದ್ದರು.