ರಾಷ್ಟ್ರಪತಿ ಚುನಾವಣೆಗೆ ಮೈಸೂರಿನ ಮಾರ್ಕರ್ ಪೆನ್!
ನವದೆಹಲಿ, ಜುಲೈ 17: ಇಂದು(ಜುಲೈ 17) ಬೆಳಗ್ಗೆ 10 ಗಂಟೆಯಿಂದ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಗೆ ಮತಪತ್ರದ ಮೇಲೆ ಬರೆಯುವುದಕ್ಕೆ ವಿಶೇಷ ಮಾರ್ಕರ್ ಪೆನ್ ಬಳಸಲಾಗುತ್ತಿದೆ.
ಯಾರೂ ಸಹ ತಮ್ಮ ಸ್ವಂತ ಪೆನ್ನಿನಿಂದ ಮತಪತ್ರದ ಮೇಲೆ ಬರೆಯವಂತಿಲ್ಲ. ಭಾರತೀಯ ಚುನಾವಣಾ ಆಯೋಗವೇ ಈ ವಿಶೇಷ ಪೆನ್ನನ್ನು ನೀಡಿದೆ. ಈ ಪೆನ್ನನ್ನು ಮೈಸೂರು ಪೇಂಟ್ ಮತ್ತು ವಾರ್ನಿಶ್ ಲಿಮಿಟೆಡ್ ತಯಾರಿಸಿ, ರಾಷ್ಟ್ರಪತಿ ಚುನಾವಣೆಗೆಂದು ಪೂರೈಸಿದೆ.
ಮತದಾನದ ಕೋಣೆಗೆ ಸಂಸದರು ಮತ್ತು ಶಾಸಕರು ಪ್ರವೇಶಿಸುತ್ತಿದ್ದಂತೆಯೇ ಅವರ ಬಳಿ ಬೇರೆ ಪೆನ್ನುಗಳಿದ್ದರೆ ಅವನ್ನು ತೆಗೆದುಕೊಂಡು, ಅದರ ಬದಲಿಗೆ ಮಾರ್ಕರ್ ಪೆನ್ನನ್ನು ನೀಡಲಾಗುತ್ತದೆ. ನೇರಳೆ ಬಣ್ಣದ ಶಾಯಿಯ ಈ ಮಾರ್ಕರ್ ಮೂಲಕವೇ ಮತದಾರರು ಮತಚಲಾಯಿಸಬೇಕಾಗುತ್ತದೆ. ಮತಚಲಾಯಿಸಿದ ನಂತರ ಅವರ ಪೆನ್ನುಗಳನ್ನು ವಾಪಸ್ ನೀಡಿ, ಮಾರ್ಕರ್ ಅನ್ನು ಹಿಂಪಡೆಯಲಾಗುತ್ತದೆ.
ಅಕಸ್ಮಾತ್ ಯಾರಾದರೂ ತಮ್ಮ ಸ್ವಂತ ಪೆನ್ನಿನಿಂದ ಮತಚಲಾಯಿಸಿದ್ದರೆ ಆ ಮತ ಅಮಾನ್ಯವಾಗುತ್ತದೆ.

ಹಸಿರು, ಗುಲಾಬಿ ಬಣ್ಣದ ಮತಪತ್ರ
ಒಟ್ಟು 32 ಮತಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಸಂಸತ್ತಿನ ರೂಂ ನಂ. 62 ರಲ್ಲಿ ಮತದಾನ ನಡೆಯುತ್ತಿದೆ. ಬ್ಯಾಲೆಟ್ ಪೇಫರ್ ಗಳು ಹಸಿರು ಹಾಗೂ ಗುಲಾಬಿ ಬಣ್ಣದಲ್ಲಿದ್ದು, ಹಸಿರು ಬಣ್ಣದ ಮತಪತ್ರ ಸಂಸದರಿಗೆ ಮತ್ತು ಗುಲಾಬಿ ಬಣ್ಣದ್ದು ಶಾಸಕರಿಗೆ. ಈ ಮತಪತ್ರದಲ್ಲಿ ಎರಡು ಕಾಲಂ ಇದ್ದು, ಒಂದು ಕಾಲಂ ನಲ್ಲಿ ಅಭ್ಯರ್ಥಿಯ ಹೆಸರು ಮತ್ತು ಇನ್ನೊಂದು ಕಾಲಂ ನಲ್ಲಿ ಮತ ಚಲಾಯಿಸುವುದು ಯಾರಿಗೆ ಎಂಬುದನ್ನು ಗುರುತು ಮಾಡಬೇಕು.

ಮತಪತ್ರದ ಭಾಷೆ
ಸಂಸದರು ಮತಚಲಾಯಿಸುವ ಮತಪತ್ರದಲ್ಲಿರುವ ವಿವರಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿರಲಿದ್ದು, ಶಾಸಕರು ಮತಚಲಾಯಿಸುವ ಮತಪತ್ರದಲ್ಲಿನ ವಿವರಗಳು ಇಂಗ್ಲಿಷ್ ಮತ್ತು ಆಯಾ ರಾಜ್ಯದ ವ್ಯಾವಹಾರಿಕ ಭಾಷೆಯಲ್ಲಿರಲಿವೆ.

ಗೌಪ್ಯತೆ ಕಾಪಾಡಲು
ಒಂದೇ ಶಾಯಿಯಿಂದ ಮತಚಲಾಯಿಸುವುದರಿಂದ ಚುವಾವಣೆಯಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿದೆ. ಮಾತ್ರವಲ್ಲ ಇದರಿಂದ ಮತದಾನ ಏಕರೂಪವಾಗಿರುತ್ತದೆ.

ಯಾರಿಗೆ ಪ್ರಥಮ ಪ್ರಜೆಯ ಪಟ್ಟ?
ಎನ್ ಡಿಎ ಮೈತ್ರಿಕೂಟದಿಂದ ರಾಮ್ ನಾಥ್ ಕೋವಿಂದ್ ಮತ್ತು ಯುಪಿಎ ಮೈತ್ರಿಕೂಟದಿಂದ ಮೀರಾ ಕುಮಾರ್ ಚುನಾವಣೆಯ ಕಣದಲ್ಲಿದ್ದು, ಜುಲೈ 20 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಪ್ರಥಮ ಪ್ರಜೆಯ ಗದ್ದುಗೆ ಯಾರ ಪಾರಾಗಲಿದೆ ಎಂಬುದು ತಿಳಿಯಲಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications