ಎಚ್ಜಿ, ಸಿಡಿ ಸಿಬ್ಬಂದಿಗೆ 'ಅಗ್ನಿ ಸೇವಾ ಪದಕ', 'ರಾಷ್ಟ್ರಪತಿ ಪದಕ' ಪ್ರದಾನ
ಬೆಂಗಳೂರು ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಪತಿಗಳ ಕರ್ನಾಟಕದ 55 ಆಗ್ನಿ ಶಾಮಕ ಸಿಬ್ಬಂದಿಗೆ 'ಅಗ್ನಿ ಸೇವಾ ಪದಕ', ಗೃಹ ರಕ್ಷಕದಳ(ಎಚ್ಜಿ) ಮತ್ತು ನಾಗರಿಕ ರಕ್ಷಣಾ (ಸಿಡಿ) ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಯಿತು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರತಿ ವರ್ಷದಂತೆ ಈ ವರ್ಷದ ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಮತ್ತು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶೌರ್ಯ ಪದಕ ಮತ್ತು ಅತ್ಯುತ್ತಮ ಸೇವಾ ಪದಕಗಳನ್ನು ನೀಡಲಾಗಿದೆ.
ಅಗ್ನಿಶಾಮಕ 55 ಸಿಬ್ಬಂದಿ ಪೈಕಿ 'ಅಗ್ನಿಶಾಮಕ ಸೇವಾ ಪದಕ'ವನ್ನು ಶೌರ್ಯ ಮತ್ತು ಸಾಹಸ ಮೆರೆಗೆ 11 ಮಂದಿಗೆ ನೀಡಲಾಗುತ್ತಿದೆ. ವಿಶೇಷ ಸೇವೆ ಪರಿಗಣಿಸಿ 'ರಾಷ್ಟ್ರಪತಿ ಅಗ್ನಿಶಾಮಕ ಸೇವಾ ಪದಕ'ವನ್ನು ಆರ ಸಿಬ್ಬಂದಿಗೆ ನೀಡಿ ಗೌರವಿಸಲಾಗಿದೆ. ಹಾಗೇಯೇ 38 ಸಿಬ್ಬಂದಿಗೆ ಶ್ರೇಷ್ಠ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ಆಯಾ ವಿಶಿಷ್ಟ ಮತ್ತು ಅರ್ಹ ಸೇವಾ ದಾಖಲೆಗಳಿಗಾಗಿ ನೀಡಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

ಅಲ್ಲದೆ, ಹೆಚ್ಚುವರಿಯಾಗಿ, 2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 46 ಸಿಬ್ಬಂದಿಗೆ ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗುತ್ತದೆ. ಇವರಲ್ಲಿ ಗೃಹರಕ್ಷಕರು ಮತ್ತು ಶೌರ್ಯಕ್ಕಾಗಿ ನಾಗರಿಕ ರಕ್ಷಣಾ ಪದಕವನ್ನು ಇಬ್ಬರು ಸಿಬ್ಬಂದಿಗೆ ಅವರ ಶೌರ್ಯ ಮತ್ತು ಸಾಹಸಕ್ಕಾಗಿ ನೀಡಲಾಗುತ್ತದೆ.

ಇದರೊಂದಿಗೆ ವಿಶಿಷ್ಟ ಸೇವೆಗಾಗಿ 7 ಗೃಹರಕ್ಷಕರಿಗೆ ನಾಗರಿಕ ರಕ್ಷಣೆಗಾಗಿ 'ರಾಷ್ಟ್ರಪತಿ ಪದಕ' ಹಾಗೂ 37 ಮಂದಿ ಗೃಹರಕ್ಷಕರ ಶ್ರೇಷ್ಠ ಸೇವೆ ಗುರುತಿಸಿ 'ನಾಗರಿಕ ರಕ್ಷಣಾ ಪದಕ'ಕ್ಕೆ ಅರ್ಹರಾಗಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
-
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications