ಗಿರೀಶ್ ಮುರ್ಮು ಬಳಿಕ ದೇಶದ ಅತ್ಯುನ್ನತ ಹುದ್ದೆ ಮಯೂರ್ ಬಂಜ್ ತೆಕ್ಕೆಗೆ
ನವದೆಹಲಿ ಜೂ. 22: ಓಡಿಶಾ ರಾಜ್ಯದ ಮಯೂರ್ ಬಂಜ್ ಜಿಲ್ಲೆಯ ಗಿರೀಶ್ ಮುರ್ಮು ಅವರು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಆದ ನಂತರ ಮತ್ತದೇ ಜಿಲ್ಲೆಗೆ ಎರಡನೇ ಬಾರಿ ದೇಶದ ಉನ್ನತ ಸ್ಥಾನ ಸಿಕ್ಕಿದೆ.
ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ಮಂಗಳವಾರ ಬಿಜೆಪಿ ನೇತೃತ್ವದ ಎನ್ ಡಿಎ ಘೋಷಿಸಿರುವ ದ್ರೌಪದಿ ಮುರ್ಮು ಅವರು ಸಹ ಇದೇ ರಾಜ್ಯದ ಮಯೂರ್ ಬಂಜ್ ಜಿಲ್ಲೆಯವರೆ ಆಗಿದ್ದಾರೆ. ಝಾರ್ಖಂಡನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರು ಅರ್ಹರೆಂದು ಭಾವಿಸಿರುವ ಬಿಜೆಪಿ ದೇಶದ ಉನ್ನತ ಸಂವಿಧಾನಿಕ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದೆ.
ಗಿರೀಶ್ ಮುರ್ಮು ಮತ್ತು ದ್ರೌಪದಿ ಮುರ್ಮು ಅವರ ಮೂಲಕ ಮಯೂರ್ ಬಂಜ್ ಜಿಲ್ಲೆಯು ರಾಷ್ಟ್ರಮಟ್ಟದ ಎರಡು ಅತ್ಯುತ್ತಮ ಹುದ್ದೆ ತನ್ನದಾಗಿಸಿಕೊಂಡಿದೆ.
ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ದ್ರೌಪದಿ ಮುರ್ಮು ಪಕ್ಷದ ಜಿಲ್ಲಾ ಸಂಘಟನೆಯಿಂದ ಯಿಂದ ಹಿಡಿದು ಶಾಸಕಿ, ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಓಡಿಶಾದ ಮುಖ್ಯಮಂತ್ರಿಯಾಗಿ ನಂತರ ರಾಜ್ಯಪಾಲರಾದ ಕಾರ್ಯ ನಿರ್ವಹಿಸಿದ ಅನುಭವ ಹೋಂದಿದ್ದಾರೆ.

ಆಶ್ಚರ್ಯಗೊಂಡ ದ್ರೌಪದಿ ಮುರ್ಮು
ಬಿಜೆಪಿ ನನ್ನನ್ನು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿರುವುದು ಕೇಳಿ ಆಶ್ಚರ್ಯವಾಯಿತು. ಕೂಡಲೇ ನಂಬಲು ಸಾಧ್ಯವಾಗಲಿಲ್ಲ, ನನ್ನನ್ನು ಆಯ್ಕೆ ಮಾಡಿದ ಪಕ್ಷಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಚುನಾವಣೆ ಮೂಲಕ ಉನ್ನತ ಹುದ್ದೆ ಅಲಂಕರಿಸಿದರೆ ಸಂವಿಧಾನದ ಆಶಯದಂತೆ ದೊರೆತ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ದೇಶಕ್ಕಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಮುರ್ಮು ಸಂತಸ ಹಂಚಿಕೊಂಡರು.

ನಾಯಕರ ಸಹಕಾರ ಕೋರುತ್ತೇನೆ
ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯಾದ ನಂತರ ಸುದ್ದಿಗಾರರ ಜತೆ ಮೊದಲ ಬಾರಿಗೆ ಮಾತನಾಡಿರುವ ಮುರ್ಮು ಅವರು, "ಚುನಾವಣೆ ಎಂದ ಮೇಲೆ ಎಲ್ಲ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ. ಆಡಳಿತ ಪಕ್ಷದ ಅಭಿವೃದ್ಧಿ ಕೆಲಸಗಳು, ಯೋಜನೆಗಳು ಜನರನ್ನು ತಲುಪಿವೆ. ಸಂಸದರು, ಶಾಸಕರ ಬೆಂಬಲ ಸಹಕಾರದ ಜತೆ ಎಲ್ಲ ಪಕ್ಷಗಳ ನಾಯಕರ ಬೆಂಬಲ ಕೋರುತ್ತೇನೆ" ಎಂದು ವಿರೋಧ ಪಕ್ಷವು ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸಿರುವುದರ ಬಗ್ಗೆ ಪ್ರಶ್ನೆಗೆ ಉತ್ತರಿಸಿದರು.

ದೇಶದ ಎರಡನೇ ಮಹಿಳಾ ರಾಷ್ಟ್ರಪತಿ?
ಜುಲೈ 18ರಂದು ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಎನ್ಡಿಎ ಘೋಷಿತ ದ್ರೌಪದಿ ಮುರ್ಮು ಅವರು ವಿಜಯ ಸಾಧಿಸದರೆ ದೇಶದ ಮೊದಲ ಬುಡಕಟ್ಟು ಜನಾಂಗದ ಮತ್ತು ದೇಶದ ಎರಡನೇ ಮಹಿಳಾ ರಾಷ್ಟ್ಟಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಓಡಿಶಾದ ಮೈತ್ರಿ ಕೂಟದ ಮೊದಲ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ದ್ರೌಪತಿ ಮುರ್ಮು ಅವರು, ಝಾರ್ಖಂಡನ ಮೊದಲ ಮಹಿಳಾ ಗೌವರ್ನರ್ ಆಗಿ 2015ರಿಂದ 2021 ಕಾರ್ಯ ನಿರ್ವಹಿಸಿದ್ದಾರೆ.

ಮುರ್ಮು ಹುಟ್ಟು-ರಾಜಕೀಯ:
ದ್ರೌಪದಿ ಮುರ್ಮು ಓಡಿಶಾ ರಾಜ್ಯದ ಮಯೂರ್ ಭಂಜ್ ನ ಹಳ್ಳಿಯಲ್ಲಿ 1958ರ ಲ್ಲಿ ಜೂ.20ರಂದು ಬುಡಕಟ್ಟು ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು. ಬಡಕುಟುಂಬವಾದ್ದರಿಂದ ಅನೇಕ ಸಮಸ್ಯೆಗಳ ಮಧ್ಯೆಯೇ ಶಿಕ್ಷಣ ಪೂರೈಸಿದರು. ಭುವನೇಶ್ವರಿ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದರು. ರಾಯಂಗಪುರದ ಎನ್ ಎಸಿ ಉಪಾಧ್ಯಕ್ಷರಾಗಿ ರಾಜಕೀಯಕ್ಕೆ ಧುಮುಕಿದರು. ನಂತರ 2000ದಿಂದ 2009ರವರೆಗೆ ಎರಡು ಭಾರಿ ಓಡಿಶಾದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಸಾರಿಗೆ-ವಾಣಿಜ್ಯ, ಪಶುಸಂಗೋಪನೆ ಇಲಾಖೆ ಖಾತೆ ನಿರ್ವಹಿಸುವ ಮೂಲಕ ಸಚಿವೆಯಾಗಿ ಅನುಭವ ಪಡೆದರು.

ದ್ರೌಪದಿ ಮುರ್ಮು ಕುರಿತಾದ ಒಂದಷ್ಟು ಅಂಶಗಳು:
*1958ರ ಲ್ಲಿ ಜೂ.20ರಂದು ಬುಡಕಟ್ಟು ಕುಟುಂಬವೊಂದರಲ್ಲಿ ಹುಟ್ಟಿದ ದ್ರೌಪತಿ ಮುರ್ಮು.
* ದ್ರೌಪದಿ ಮುರ್ಮು ಅವರಿಗೆ ಓಡಿಶಾ ವಿಧಾನಸಭೆ ನೀಡುವ ಅತ್ಯತ್ತಮ ಶಾಸಕಿ ಹೆಸರಿನ 'ನೀಲಕಂಠ ಪ್ರಶಸ್ತಿ'ಗೆ ಭಾಜನರಾದರು.
*1979-1983ರ ಅವಧಿಯಲ್ಲಿ ನೀರಾವರಿ ಹಾಗೂ ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕಿ ಆಗಿ ಸೇವೆ ಸಲ್ಲಿಕೆ.
*1997ರಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾಗಿ ಮುರ್ಮು ಆಯ್ಕೆ.
* 2010-2013ರ ಅವಧಿಯಲ್ಲಿ ಮಯೂರ್ ಬಂಜ್ ನಲ್ಲಿ ಬಿಜೆಪಿ ಜಿಲ್ಲಾಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ.
* 2013-2015ರವರೆ ಬಿಜೆಪಿಯ ಎಸ್ ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಾಕಾರಿಣಿ ಸದಸ್ಯೆ ಆಗಿ ಸೇವೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications