ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ ಕಾರ್ಯಕ್ರಮ; ಶೆಟ್ಟರ್ಗೆ ಕೊನೆಗೂ ಸಿಕ್ಕಿತು ವೇದಿಕೆ ಅವಕಾಶ
ಹುಬ್ಬಳ್ಳಿ, ಸೆಪ್ಟೆಂಬರ್, 26: ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಕೊನೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ವೇದಿಕೆ ಭಾಗ್ಯ ಲಭಿಸಿದೆ. ತೀವ್ರ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ, ವೇದಿಕೆಯ ಮೇಲೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಅವಕಾಶ ದೊರೆತಿದೆ.
ಹುಬ್ಬಳ್ಳಿಯ ಜಿಮ್ಖಾನ್ ಮೈದಾನದಲ್ಲಿ ನಡೆಯುತ್ತಿರುವ ಪೌರಸನ್ಮಾನ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಶೆಟ್ಟರ್ ಹೆಸರನ್ನು ಕೈ ಬಿಟ್ಟಿದ್ದರು. ಆದರೆ ಬದಲಾದ ವಿದ್ಯಮಾನಗಳ ಮೂಲಕ ಈಗ ಹೆಸರು ಸೇರ್ಪಡೆಯಾಗಿದೆ. ಇನ್ನು ಶೆಟ್ಟರ್ ಬಣದಿಂದ ತೀವ್ರ ಅತೃಪ್ತಿ ವ್ಯಕ್ತವಾಗಿತ್ತು. ಇದರಿಂದಾಗಿ ರಾತ್ರೋರಾತ್ರಿ ಗಣ್ಯರ ಪಟ್ಟಿ ಬದಲಾಗಿದ್ದು, ಕೊನೆ ಕ್ಷಣದಲ್ಲಿ ವೇದಿಕೆಯ ಮೇಲೆ ಜಗದೀಶ್ ಶೆಟ್ಟರ್ಗೆ ಅವಕಾಶ ನೀಡಿದ್ದು, ಈ ಮೂಲಕ ಶೆಟ್ಟರ್ಗೆ ಅತೃಪ್ತಿ ಶಮನಗೊಳಿಸುವ ಯತ್ನ ನಡೆದಿದೆ.
ಸೆ. 26ರಂದು ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ; ಶೆಟ್ಟರ್ ಬೆಂಬಲಿಗರಿಂದ ಅಸಮಾಧಾನ ಏಕೆ?
ಹುಬ್ಬಳ್ಳಿಗೆ
ಭೇಟಿ
ನೀಡಲಿರುವ
ರಾಷ್ಟ್ರಪತಿ
ವಾಣಿಜ್ಯನಗರಿ
ಹುಬ್ಬಳ್ಳಿಗೆ
ಇಂದು
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಭೇಟಿ
ನೀಡಲಿದ್ದಾರೆ.
ಈ
ಹಿನ್ನೆಲೆಯಲ್ಲಿ
ಅವರ
ಸ್ವಾಗತಕ್ಕೆ
ಅವಳಿನಗರದಲ್ಲಿ
ಸಕಲ
ಸಿದ್ಧತೆಯನ್ನು
ಮಾಡಿಕೊಳ್ಳಲಾಗಿದೆ.
ರಾಷ್ಟ್ರಪತಿ
ದ್ರೌಪದಿ
ಮುರ್ಮು
ಅವರಿಗೆ
ಸ್ವಾಗತ
ಕೋರಿ
ನಗರದಾದ್ಯಂತ
ಪ್ಲೆಕ್ಸ್,
ಬ್ಯಾನರ್
ರಾರಾಜಿಸುತ್ತಿವೆ.
ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಆಗಮಿಸ್ತಿರುವ ಮುರ್ಮು ಅವರು, ಮಧ್ಯಾಹ್ನ 12.45ಕ್ಕೆ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಹುಬ್ಬಳ್ಳಿಯ ಜಿಮ್ಖಾನಾ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ
ಭಾಗಿಯಾಗುವ
ಗಣ್ಯರು
ಇನ್ನೂ
ರಾಜ್ಯಪಾಲ
ಥಾವರ್ಚಂದ್
ಗೆಹ್ಲೋಟ್,
ಸಿಎಂ
ಬಸವರಾಜ
ಬೊಮ್ಮಾಯಿ,
ಕೇಂದ್ರ
ಸಚಿವ
ಪ್ರಹ್ಲಾದ್
ಜೋಶಿ,
ಸಚಿವರಾದ
ಅಶ್ವತ್ಥ್ನಾರಾಯಣ,
ಭೈರತಿ
ಬಸವರಾಜ,
ಹಾಲಪ್ಪ
ಆಚಾರ್,
ಶಂಕರ
ಪಾಟೀಲ
ಮುನೇನಕೊಪ್ಪ,
ಮೇಯರ್
ಈರೇಶ
ಅಂಚಟಗೇರಿ
ಭಾಗಿಯಾಗಲಿದ್ದಾರೆ.
ಕಾರ್ಯಕ್ರಮಕ್ಕೂ
ಮುನ್ನ
ಪಾಲಿಕೆ
ಸದಸ್ಯರ
ಜೊತೆ
ರಾಷ್ಟ್ರಪತಿಗಳ
ಫೋಟೋ
ಸೆಷನ್
ನಡೆಯಲಿದೆ.
ನಂತರ
ಪೌರ
ಸನ್ಮಾನ
ಸ್ವೀಕರಿಸಲಿದ್ದಾರೆ.
ಅಲ್ಲದೇ
900
ಗ್ರಾಂ
ಬೆಳ್ಳಿಯ
ಸಿದ್ಧಾರೂಢ
ಶ್ರೀಗಳ
ಮೂರ್ತಿಯನ್ನು
ನೆನಪಿನ
ಕಾಣಿಕೆಯಾಗಿ
ರಾಷ್ಟ್ರಪತಿ
ಅವರಿಗೆ
ಅರ್ಪಣೆ
ಮಾಡಲಾಗುತ್ತದೆ.
ಇನ್ನು
ವೇದಿಕೆಯ
ಮೇಲೆ
ಕೇವಲ
9
ಗಣ್ಯರಿಗೆ
ಮಾತ್ರ
ಅವಕಾಶ
ನೀಡಲಾಗಿದ್ದು,
ಮಾಜಿ
ಸಿಎಂ
ಜಗದೀಶ್
ಶೆಟ್ಟರ್ಗೂ
ಅವಕಾಶ
ಸಿಕ್ಕಿಲ್ಲ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜಿಮ್ಖಾನಾ ಮೈದಾನದ ಬಳಿ ಪೊಲೀಸ್ ಸರ್ಪಗಾವಲು ಇದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಹುಬ್ಬಳ್ಳಿ ಕಾರ್ಯಕ್ರಮದ ನಂತರ ಧಾರವಾಡ ಐಐಐಟಿ ಉದ್ಘಾಟನೆಗೆ ತೆರಳಲಿದ್ದಾರೆ.
ರಾಷ್ಟ್ರಪತಿಗಳ
ಪೌರ
ಸನ್ಮಾನಕ್ಕೆ
ಸಕಲ
ಸಿದ್ಧತೆ
ರಾಷ್ಟ್ರಪತಿಯಾಗಿ
ಅಧಿಕಾರ
ಸ್ವೀಕರಿಸಿದ
ಬಳಿಕ
ಇದೇ
ಮೊದಲ
ಬಾರಿಗೆ
ದ್ರೌಪದಿ
ಮುರ್ಮು
ಅವರು
ರಾಜ್ಯಕ್ಕೆ
ಆಗಮಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ
ಮಹಾನಗರ
ಪಾಲಿಕೆಯಿಂದ
ಅದ್ಧೂರಿ
ಪೌರ
ಸನ್ಮಾನ
ಕಾರ್ಯಕ್ರಮ
ನೆರವೇರಲಿದೆ.
ಜಿಮ್ಖಾನಾ
ಮೈದಾನದಲ್ಲಿ
ನಡೆಯಲಿರುವ
ಕಾರ್ಯಕ್ರಮದಲ್ಲಿ
ಮಧ್ಯಾಹ್ನ
1
ಗಂಟೆಗೆ
ಸನ್ಮಾನ
ನಡೆಯಲಿದೆ.
ಗಣ್ಯರಿಗೆ
ವೇದಿಕೆ
ಮುಂಭಾಗದಲ್ಲಿ
1
ಸಾವಿರ
ಆಸನಗಳು
ಸೇರಿ
ಒಟ್ಟು
ನಾಲ್ಕು
ಸಾವಿರ
ಆಸನಗಳಿಗೆ
ವ್ಯವಸ್ಥೆ
ಮಾಡಲಾಗಿದೆ.
ಈ ಹಿಂದೆ ಗ್ಯಾನಿಜೈಲ್ಸಿಂಗ್ ರಾಷ್ಟ್ರಪತಿಯಾಗಿದ್ದಾಗ 1986-87ರಲ್ಲಿ ಪಾಲಿಕೆ ವತಿಯಿಂದ ಪೌರಸನ್ಮಾನ ಮಾಡಲಾಗಿತ್ತು. ಇದೀಗ ದ್ರೌಪದಿ ಮುರ್ಮು ಅವರು ಪೌರಸನ್ಮಾನ ಸ್ವೀಕರಿಸುತ್ತಿರುವ ಎರಡನೇ ರಾಷ್ಟ್ರಪತಿಯಾಗಲಿದ್ದಾರೆ. ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಇಸ್ಫೋಸಿಸ್ ಪೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ.