ಮಂಗಳೂರು : ಎಂಆರ್ಪಿಎಲ್ ಮುಂದೆ ಶವವಾದ ಗ್ರಾಮಸ್ಥರು!
ಮಂಗಳೂರು, ಫೆ. 10 : ಮಂಗಳೂರಿನ ಎಂಆರ್ಪಿಎಲ್ ವಿರುದ್ಧ ಜೋಕಟ್ಟೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಸ್ಥಳೀಯ ಜನರ ಸಮಸ್ಯೆಯನ್ನು ಕೇಳದ ಕಂಪನಿ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮಸ್ಥರು ಶವಗಳಂತೆ ಮಲಗಿ ಕಂಪನಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಜೋಕಟ್ಟೆ
ಸುತ್ತಮುತ್ತಲಿನ
ಗ್ರಾಮದ
ಜನರು
ಎಂಆರ್ಪಿಎಲ್,
ಎಸ್ಇಜೆಡ್
ವಿರುದ್ಧ
ಪ್ರತಿಭಟನೆ
ಮಾಡಿದ್ದರು.
ಆದರೂ
ಜನಪ್ರತಿನಿಧಿಗಳು
ಈ
ಬಗ್ಗೆ
ಗಮನಹರಿಸಿಲ್ಲ.
ಆದ್ದರಿಂದ
ಸೋಮವಾರ
ವಿಶಿಷ್ಟವಾಗಿ
ಪ್ರತಿಭಟನೆ
ಮಾಡಿದರು.
[ಕಾಸರಗೋಡು-ಬೈಂದೂರು
ರೈಲಿನ
ವೇಳಾಪಟ್ಟಿ]
ಎಂಆರ್ಪಿಎಲ್ನಿಂದ ಜನರು ಸಾಕಷ್ಟು ಆರೋಗ್ಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸಬೇಕಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಮಾತ್ರ ಬಂಡವಾಳಶಾಹಿಗಳ ಲಾಬಿಗೆ ಮಣಿದು, ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿಲ್ಲ. [ಮಂಗಳೂರು : ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ವೇಗ]
ಈ
ಎಲ್ಲಾ
ಬೆಳವಣಿಗೆಗಳ
ನಡುವೆ
ಜನರ
ಒತ್ತಡಕ್ಕೆ
ಮಣಿದು
ಉಪ
ಆಯುಕ್ತರು
ಈ
ಪ್ರದೇಶಕ್ಕೆ
ತೆರಳಿ
ಸಮೀಕ್ಷೆ
ನಡೆಸಿ
ಜಿಲ್ಲಾಡಳಿತಕ್ಕೆ
ವರದಿಯನ್ನೂ
ನೀಡಿದ್ದಾರೆ.
ವರದಿಯಲ್ಲಿ
ಎಂಆರ್ಪಿಎಲ್ನಿಂದ
ಆಗುತ್ತಿರುವ
ತೊಂದರೆಗಳ
ಬಗ್ಗೆ
ವಿವರಗಳಿಗೆ.
ಆದರೆ,
ಸಂಬಂಧಪಟ್ಟವರ
ವಿರುದ್ಧ
ಕ್ರಮಗಳನ್ನು
ಕೈಗೊಳ್ಳುತ್ತಿಲ್ಲ.
ಜನಪ್ರತಿನಿಧಿಗಳ
ವರ್ತನೆ
ಮತ್ತು
ಕಂಪನಿಯ
ತೊಂದರೆಯಿಂದ
ನೊಂದಿರುವ
ಜನರು
ಪ್ರತಿಭಟನೆಯ
ಹಾದಿ
ಹಿಡಿದಿದ್ದಾರೆ.
ಪರಿಸ್ಥಿತಿ
ಹೀಗೆಯೇ
ಮುಂದುವರೆದರೆ
ಮುಂದಿನ
ದಿನಗಳಲ್ಲಿ
ಎಂತಹ
ಸ್ಥಿತಿ
ನಿರ್ಮಾಣವಾಗಬಹುದು
ಎಂಬುದನ್ನು
ತೋರಿಸಲು
ಶವಗಳ
ರೀತಿ
ಮಲಗಿ
ಗ್ರಾಮಸ್ಥರು
ಪ್ರತಿಭಟನೆ
ನಡೆಸಿದ್ದಾರೆ.
ಎಂಆರ್ಪಿಎಲ್ನ ಕೋಕ್, ಸಲ್ಫರ್ ಘಟಕವನ್ನು ಮುಚ್ಚಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. ಜನಪ್ರತಿನಿಧಿಗಳ ಗಮನ ಸೆಳೆಯಲು ಹಲವು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಾ ಬಂದಿರುವ ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿ ಇದೀಗ ಶವಗಳ ರಾಶಿಯ ಪ್ರತಿಭಟನೆ ನಡೆಸಿದೆ. ಇದರಿಂದಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸುವರೇ ನೋಡಬೇಕು.