Get Updates
Get notified of breaking news, exclusive insights, and must-see stories!

Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಲು ವಿಎಚ್‌ಪಿ ಒತ್ತಾಯ

ಮಂಗಳೂರು, ಏಪ್ರಿಲ್. 20: ಹುಬ್ಬಳ್ಳಿಯ ಕಾಲೇಜಿನ ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಭೀಕರ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ವಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಕರ್ನಾಟಕ ದಕ್ಷಿಣ ಪ್ರಾಂತದ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಶನಿವಾರ (ಏಪ್ರಿಲ್ 20) ಒತ್ತಾಯಿಸಿದ್ದಾರೆ.

ಘಟನೆಯನ್ನು ಘಟನೆಯನ್ನು 'ಲವ್ ಜಿಹಾದ್' ಎಂದು ಆರೋಪಿಸಿ ಖಂಡಿಸಿದ ಶರಣ್ ಪಂಪ್‌ವೆಲ್, "ಇದು ಆರೋಪಿ ಫಯಾಜ್ ಖೋಂಡುನಾಯಕ್ ಮತ್ತು ಆತನ ಸ್ನೇಹಿತರನ್ನು ಬೆಂಬಲಿಸುತ್ತಿರುವ ಜಿಹಾದಿ ಶಕ್ತಿಗಳು ಅಥವಾ ಮುಸ್ಲಿಂ ಮೂಲಭೂತವಾದಿಗಳ ಪಿತೂರಿ ಎಂದು ಆರೋಪಿಸಿದ್ದಾರೆ.

Vishwa Hindu Parishad demands NIA probe into Neha Hiremath s murder

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯ ಮತ್ತು ಕೊಲೆಯ ಹಿಂದಿನ ಎಲ್ಲಾ ವ್ಯಕ್ತಿಗಳನ್ನು ಹೊರತರಲು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ, ಹಲ್ಲೆಗಳು ಹೆಚ್ಚಾಗುತ್ತಿದ್ದು, ಹಿಂದುಗಳಲ್ಲಿ ಭಯ ಹುಟ್ಟಿಸುವ ಮೂಲಕ ರಾಜ್ಯದಲ್ಲಿ ಇಸ್ಲಾಮೀಕರಣಕ್ಕೆ ಅಸಂಬದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

"ಕರ್ನಾಟಕ ಕೆಫೆಯಲ್ಲಿ ಬಾಂಬ್, ಅಂಗಡಿಯಲ್ಲಿ ಹನುಮಾನ್ ಚಾಲೀಸಾ ನುಡಿಸಿದ್ದಕ್ಕೆ ಹಿಂದೂಗಳ ಮೇಲೆ ಹಲ್ಲೆ, ರಾಮನವಮಿ ವೇಳೆ ಚನ್ನಗಿರಿಯಲ್ಲಿ ನಡೆದ ಹಲ್ಲೆ, ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಮೇಲೆ ಹಲ್ಲೆಯಂತಹ ಘಟನೆಗಳನ್ನು ಕರ್ನಾಟಕ ಕಂಡಿದೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆಯೇ..?'' ಎಂದು ಶರಣ್ ಪಂಪ್‌ವೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vishwa Hindu Parishad demands NIA probe into Neha Hiremath s murder

"ಕಾಂಗ್ರೆಸ್ ಸರ್ಕಾರ ಈ ವಿಷಯಗಳ ಬಗ್ಗೆ ಮೌನವಾಗಿದೆ. ಸರ್ಕಾರದ ಮೌನವು ಜಿಹಾದಿ ಶಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆಯೇ ಎಂದು ಆಶ್ಚರ್ಯ ಉಂಟು ಮಾಡುತ್ತಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ಸಮುದಾಯಗಳ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ" ಎಂದು ಆರೋಪಿಸಿದ್ದಾರೆ.

ಹಿಂದೂಗಳ ರಕ್ಷಣೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮನವಿ ಸಲ್ಲಿಸಲಿದೆ ಎಂದು ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಆಕ್ರಮಣಗಳ ಹೆಚ್ಚಳ ಕುರಿತು, ಪಂಜಾಬಿ ಮಹಿಳೆಯರು ತಮ್ಮ ಸಂಪ್ರದಾಯದ ಭಾಗವಾಗಿ 'ಕಿರ್ಪಾನ್ ' ಅನ್ನು ಹೊತ್ತೊಯ್ಯುವ ಮಾದರಿಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕಿರ್ಪಾನ್ ಅನ್ನು ಸಾಗಿಸಲು ಅನುಮತಿಸುವ ಕಾನೂನನ್ನು ಸರ್ಕಾರ ತರಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಸರ್ಕಾರ ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣಗಳನ್ನು ಅಲ್ಲಗಳೆದ ಪೊಲೀಸ್ ಆಯುಕ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಜಿಲ್ಲೆಯಲ್ಲಿ ನಮ್ಮ ಮುಂದೆ ಹಲವಾರು ಲವ್ ಜಿಹಾದ್ ಘಟನೆಗಳು ನಡೆಯುತ್ತಿವೆ. ಪ್ರೀತಿಯ ಹೆಸರಿನಲ್ಲಿ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ನಂತರ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. 'ಲವ್ ಜಿಹಾದ್' ಅಡಿಯಲ್ಲಿ ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಲಾಗುತ್ತದೆ" ಎಂದಿದ್ದಾರೆ.

'ಲವ್ ಜಿಹಾದ್' ಪ್ರಕರಣಗಳನ್ನು ನಿಭಾಯಿಸಲು ಇತರ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷತ್ ಆರಂಭಿಸಿದ ಸಹಾಯವಾಣಿಯಲ್ಲಿ, ಸಹಾಯವಾಣಿಗೆ ಬಹುತೇಕ ಪ್ರತಿದಿನ ಕರೆಗಳು ಬರುತ್ತಿವೆ. ಒಂದು ತಿಂಗಳಲ್ಲಿ ಕನಿಷ್ಠ 20 ಕರೆಗಳನ್ನು ಬರುತ್ತದೆ. ಈ ದೂರುಗಳನ್ನು ಪೊಲೀಸರ ಗಮನಕ್ಕೆ ತರಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+