Get Updates
Get notified of breaking news, exclusive insights, and must-see stories!

ಅಮೃತಸರ ಗೋಲ್ಡನ್ ಟೆಂಪಲ್‌ನಲ್ಲಿ ಹತ್ಯಾಕಾಂಡದ ಯತ್ನ: ಸಿಎಂ ತನಿಖೆಗೆ ಆದೇಶ

ಚಂಡೀಗಢ, ಡಿಸೆಂಬರ್ 19: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಹತ್ಯಾಕಾಂಡದ ಯತ್ನವನ್ನು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರು ಖಂಡಿಸಿದ್ದಾರೆ. ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಗುಂಪೊಂದು ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಗೋಲ್ಡನ್ ಟೆಂಪಲ್‌ನಲ್ಲಿ ದೈನಂದಿನ ಸಂಜೆ ಪ್ರಾರ್ಥನೆಯ ಸಮಯದಲ್ಲಿ ವ್ಯಕ್ತಿಯೊಬ್ಬ ಟೆಂಪಲ್ ಒಳಗಿನ ಗರ್ಭಗುಡಿಯ ರೇಲಿಂಗ್ ಮೇಲೆ ಹಾರಿ ಮತ್ತು ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಮುಂದೆ ಇರಿಸಲಾದ ಕತ್ತಿಯನ್ನು ಹಿಡಿಯಲು ಪ್ರಯತ್ನಿಸಿದನು. ಆಗ ಅಲ್ಲಿದ್ದವರು ಆತನನ್ನು ತಡೆದು ಥಳಿಸಿದ್ದಾರೆ. ಬಳಿಕ ವ್ಯಕ್ತಿ ಅಸುನೀಗಿದ್ದಾನೆ. ಘಟನೆ ಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಪ್ರತಿದಿನ ಪ್ರಾರ್ಥನೆಯ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತದೆ. ಕ್ಲಿಪ್‌ನಲ್ಲಿ ಜನರು ವ್ಯಕ್ತಿಯನ್ನು ತಡೆಯಲು ಧಾವಿಸುತ್ತಿರುವುದನ್ನು ಕಾಣಬಹುದು. ಘಟನೆಯ ನಂತರ ವ್ಯಕ್ತಿಯು ಕೊಲ್ಲಲ್ಪಟ್ಟಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅವನು ಎಲ್ಲಿಂದ ಬಂದಿದ್ದಾನೆ? ಯಾವಾಗ ಗೋಲ್ಡನ್ ಟೆಂಪಲ್‌ಗೆ ಪ್ರವೇಶಿಸಿದನು ಮತ್ತು ಅವನೊಂದಿಗೆ ಎಷ್ಟು ಜನರು ಇದ್ದರು ಎಂಬುದನ್ನು ಕಂಡುಹಿಡಿಯಲು ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಮೃತಸರದ ಉಪ ಪೊಲೀಸ್ ಆಯುಕ್ತ ಪರ್ಮಿಂದರ್ ಸಿಂಗ್ ಭಂಡಾಲ್ ಹೇಳಿದ್ದಾರೆ.

"ಇಂದು ಸಂಜೆ ಪ್ರಾರ್ಥನೆಯ ಸಮಯದಲ್ಲಿ, ತಲೆಯ ಮೇಲೆ ಹಳದಿ ಬಟ್ಟೆಯನ್ನು ಕಟ್ಟಿಕೊಂಡಿದ್ದ ಸುಮಾರು 20 ರಿಂದ 25 ವರ್ಷ ವಯಸ್ಸಿನ ವ್ಯಕ್ತಿ ಬೇಲಿ ಹಾರಿ ಸುತ್ತುವರಿದ ಪ್ರದೇಶಕ್ಕೆ ಪ್ರವೇಶಿಸಿದನು. ಈ ವೇಳೆ ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಒಳಗಿದ್ದ ಜನರು ಅವನನ್ನು ಹಿಡಿದು ಕಾರಿಡಾರ್‌ಗೆ ಕರೆದೊಯ್ದರು. ಅಲ್ಲಿ ಹಿಂಸಾತ್ಮಕ ವಾಗ್ವಾದ ನಡೆಯಿತು ಮತ್ತು ಅವನು ಥಳಿತದಿಂದ ಸಾವನ್ನಪ್ಪಿದ್ದಾನೆ" ಎಂದು ಅವರು ಹೇಳಿದರು.

 Massacre attempt at Amritsars Golden Temple: CM orders probe

"ಪ್ರವೇಶದ ವೇಳೆ ಮೃತ ವ್ಯಕ್ತಿ ಒಬ್ಬನೇ ಇದ್ದನು. ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗುವುದು. ನಮ್ಮ ತಂಡಗಳು ಜಾಗರೂಕರಾಗಿದ್ದು, ದೃಶ್ಯಗಳ ಮೂಲಕ ಶೋಧಿಸುತ್ತಿದ್ದಾರೆ. ನಾಳೆ ಪೋಸ್ಟ್‌ಮಾರ್ಟಮ್ ಮಾಡಲಾಗುತ್ತದೆ. ಅವರು ಎಲ್ಲಿಂದ ಬಂದವರು ಎಂಬುದನ್ನು ನಾವು ಪರಿಶೀಲಿಸುತ್ತೇವೆ," ಎಂದು ಭಂಡಾಲ್ ಸೇರಿಸಲಾಗಿದೆ. ಆ ವ್ಯಕ್ತಿ ಉತ್ತರ ಪ್ರದೇಶಕ್ಕೆ ಸೇರಿದವರು ಎಂದು ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

 Massacre attempt at Amritsars Golden Temple: CM orders probe

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಅವರ ಪಕ್ಷ ಹತ್ಯೆ ಪ್ರಕರಣಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಟ್ವಿಟ್ಟರ್‌ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. "ಶ್ರೀ ಹರಿಮಂದಿರ ಸಾಹಿಬ್‌ನ ಗರ್ಭಗುಡಿಯಲ್ಲಿ ದಾಳಿ ಮಾಡಲು ಪ್ರಯತ್ನಿಸಿದ್ದು ಅತ್ಯಂತ ದುರದೃಷ್ಟಕರ ಮತ್ತು ಹೇಯ ಕೃತ್ಯವನ್ನು ಸಿಎಂ ಚರಂಜಿತ್ ಚನ್ನಿ ಬಲವಾಗಿ ಖಂಡಿಸಿದ್ದಾರೆ" ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲು ಮತ್ತು "ನಿಜವಾದ ಪಿತೂರಿಗಾರರನ್ನು" ಪತ್ತೆ ಮಾಡುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದರು.

ಗುರು ಗ್ರಂಥ ಸಾಹಿಬ್ ಮತ್ತು ಸಿಖ್ ದೇವಾಲಯಗಳ ಅಪವಿತ್ರಗೊಳಿಸುವಿಕೆಯು ಪಂಜಾಬ್‌ನಲ್ಲಿ ಮತ್ತು ಸಿಖ್ಖರಲ್ಲಿ ಹೆಚ್ಚು ಭಾವನಾತ್ಮಕ ವಿಷಯವಾಗಿದೆ. ಅವರು ಪವಿತ್ರ ಪುಸ್ತಕವನ್ನು ತಮ್ಮ 11 ನೇ ಗುರು ಎಂದು ನಂಬುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತೀವ್ರ ಆಕ್ರೋಶ ಹಾಗೂ ರಾಜಕೀಯ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿರುವ ಇಂಥಹ ಹಲವಾರು ನಿದರ್ಶನಗಳಿವೆ.

 Massacre attempt at Amritsars Golden Temple: CM orders probe

ಈ ವಿಷಯವು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ವೈಷಮ್ಯದ ಫ್ಲ್ಯಾಶ್ ಪಾಯಿಂಟ್‌ಗಳಲ್ಲಿ ಒಂದಾಗಿತ್ತು. ಇದು ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ರಾಜೀನಾಮೆಗೆ ಕಾರಣವಾಯಿತು. ಶನಿವಾರದ ಘಟನೆಯ ಕುರಿತು ಪ್ರತಿಪಕ್ಷ ಅಕಾಲಿದಳವು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು "ಆಳವಾಗಿ ಬೇರೂರಿರುವ ಪಿತೂರಿ" ಎಂದು ಹೇಳಿದೆ.

"ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಇದು ಅತ್ಯಂತ ನೋವಿನ ಸಂಗತಿ. ಇದು ಭಾರತದ ಕತ್ತಿ ಬಾಹುವಾಗಿರುವ ಪಂಜಾಬ್ ಅನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಕಳೆದ ಐದು ವರ್ಷಗಳಿಂದ ಕೆಲವರು ಇದನ್ನು ರಾಜಕೀಯ ಆಟವಾಗಿಸಿದ್ದಾರೆ" ಎಂದು ಅಕಾಲಿ ದಳ ಸಂಸದ ಬಲ್ವಿಂದರ್ ಭುಂದರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+