ಇದರ ಕಾಟದಿಂದ ಊರನ್ನೇ ಬಿಟ್ಟು ಹೋಗುತ್ತಿದ್ದಾರೆ ಚಿಲಕನಹಳ್ಳಿ ಗ್ರಾಮಸ್ಥರು
ಬಳ್ಳಾರಿ, ಫೆಬ್ರವರಿ 28: ಕುಡಿಯುವ ನೀರು, ರಸ್ತೆ ಸೌಲಭ್ಯ, ಶೌಚಾಲಯ... ಇಂಥ ಮೂಲ ಸೌಕರ್ಯಗಳ ಕುರಿತು ಸಾಮಾನ್ಯವಾಗಿ ಗ್ರಾಮಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸೌಲಭ್ಯಗಳಿಗಾಗೇ ಎಷ್ಟೋ ಗ್ರಾಮಗಳಲ್ಲಿ ಪ್ರತಿಭಟನೆಗಳೂ ನಡೆಯುತ್ತವೆ. ಆದರೆ ಈ ಗ್ರಾಮದಲ್ಲಿ ಈ ಎಲ್ಲಾ ಸೌಲಭ್ಯವೂ ಇವೆ. ಆದರೂ ಗ್ರಾಮಸ್ಥರು ನೆಮ್ಮದಿಯಿಂದ ಇರಲು ಆಗುತ್ತಿಲ್ಲ.
ಇದಕ್ಕೆಲ್ಲಾ ಕಾರಣ ನೊಣಗಳು. ಈ ಗ್ರಾಮದಲ್ಲಿ ನೊಣಗಳ ಕಾಟ ವಿಪರೀತವಾಗಿದ್ದು, ಇದರಿಂದ ಬೇಸತ್ತಿರುವ ಜನ ಗ್ರಾಮವನ್ನೇ ತೊರೆಯಲು ಮುಂದಾಗಿದ್ದಾರೆ. ಅಷ್ಟಕ್ಕೂ ಆ ಗ್ರಾಮ ಯಾವುದು, ಇಲ್ಲಿ ನೊಣಗಳ ಕಾಟಕ್ಕೆ ಕಾರಣ ಏನಿರಬಹುದು? ಇಲ್ಲಿದೆ ಅದರ ವಿವರ...
ಮದ್ಯದ ಅಂಗಡಿ ತೆರವುಗೊಳಿಸಲು ಹೀಗೆ ಮಾಡಿದ ರಮ್ಮನಹಳ್ಳಿ ಗ್ರಾಮಸ್ಥರು
ಹೊಸಪೇಟೆಯ ಚಿಲಕನಹಟ್ಟಿ ಗ್ರಾಮದಲ್ಲಿ ನೊಣದ ಕಾಟ
ಈ ಗ್ರಾಮದಲ್ಲಿ ನೊಣಗಳು ಜನರಿಗೆ ಸಹಿಸಲಾರದಂಥ ಕಾಟ ಕೊಡುತ್ತಿವೆ. ತಿನ್ನುವ ಊಟ, ಪಾತ್ರೆ ಬಟ್ಟೆ ಎನ್ನದೇ ಎಲ್ಲಂದರಲ್ಲಿ ಅವುಗಳದ್ದೇ ರಾಜ್ಯಭಾರ. ಇದು ಬಳ್ಳಾರಿ ಹೊಸಪೇಟೆ ತಾಲ್ಲೂಕಿನ ಚಿಲಕನಹಟ್ಟಿ ಗ್ರಾಮ. ಈ ಗ್ರಾಮದಲ್ಲಿ ನೊಣಗಳ ಕಾಟ ವಿಪರೀತ ಎನ್ನುವಂತಾಗಿದೆ. ಅದಕ್ಕೆ ಕಾರಣ ಗ್ರಾಮದ ಪಕ್ಕದಲ್ಲಿರುವ ಕೋಳಿ ಫಾರ್ಮ್.
ಕೋಳಿ ಫಾರ್ಮ್ ನಿಂದ ಸಂಕಷ್ಟ
ಈ ಕೋಳಿ ಫಾರ್ಮ್ ನಿಂದಾಗಿ ಇಲ್ಲಿ ಜೀವಿಸುವುದೇ ಕಷ್ಟಕರವಾಗಿದೆ. ಈ ಕೋಳಿ ಫಾರ್ಮ್ ಸುತ್ತಮುತ್ತ ಸತ್ತ ಕೋಳಿಗಳನ್ನು ಮತ್ತು ಅದರ ತ್ಯಾಜ್ಯವನ್ನು ಚೆಲ್ಲುತ್ತಿದ್ದಾರೆ. ಹೀಗಾಗಿ ಇಲ್ಲಿ ನೊಣಗಳು ಮುತ್ತಿಕೊಳ್ಳುತ್ತಿದ್ದು, ಇಡೀ ಗ್ರಾಮಕ್ಕೆ ನೊಣದ ಕಾಟ ಹಬ್ಬಿದೆ. ನೊಣಗಳ ಸಂತತಿಯೂ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಈ ಗ್ರಾಮಸ್ಥರು ಬೇಸತ್ತಿದ್ದಾರೆ
ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್
ನೋಟೀಸ್ ಬಂದರೂ ಎಚ್ಚೆತ್ತುಕೊಂಡಿಲ್ಲ
ಕಳೆದ ಐದು ವರ್ಷಗಳಿಂದ ಇಲ್ಲಿನ ಜನ ಈ ಕೋಳಿ ಫಾರ್ಮ್ ನಿಂದ ಕಷ್ಟ ಎದುರಿಸುತ್ತಿದ್ದಾರೆ. ಕೋಳಿ ಫಾರ್ಮ್ ನವರು ಚಿಲಕನಹಟ್ಟಿ ಗ್ರಾಮ ಪಂಚಾಯತಿಗೆ ಯಾವುದೇ ಬಾಡಿಗೆ ಕಟಿಲ್ಲ. ಹೀಗಾಗಿ ಗ್ರಾಮ ಪಂಚಾಯತಿಯವರು ಸುಮಾರು ಸಾರಿ ನೋಟಿಸ್ ನೀಡಿದವರೂ ಕೋಳಿ ಫಾರ್ಮ್ ನವರು ಕ್ಯಾರೆ ಎನ್ನುತಿಲ್ಲ. ಹೀಗಾಗಿ ಜನ ಈ ಗ್ರಾಮವನ್ನು ಬಿಡುವ ನಿರ್ಧಾರ ಮಾಡಿದ್ದಾರೆ.
ಗ್ರಾಮ ಬಿಡುವ ನಿರ್ಧಾರ ಕೈಗೊಂಡ ಗ್ರಾಮಸ್ಥರು
ನೊಣಗಳ ಕಾಟ ಮಾತ್ರವಲ್ಲ, ಗಬ್ಬುವಾಸನೆಗೆ ಊರ ಜನರು ಉಸಿರಾಡುವುದೂ ಕಷ್ಟವಾಗಿದೆ. ಇವೆಲ್ಲವೂ ಜನರನ್ನು ಇಲ್ಲಿ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಹೀಗಾಗಿ ಈ ಗ್ರಾಮವನ್ನೇ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಗ್ರಾಮಸ್ಥರು. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಮ್ಮಊರನ್ನು ಉಳಿಸಿ. ಇಲ್ಲವಾದರೆ ಇ ಗ್ರಾಮವನ್ನು ತೊರೆಯುವುದೊಂದೇ ನಮಗಿರುವ ದಾರಿ ಎನ್ನುತ್ತಿದ್ದಾರೆ ಈ ಗ್ರಾಮಸ್ಥರು.