ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಈ ಆತ್ಮನು!

By Mahesh
|
Google Oneindia Kannada News

BS Yeddyurappa
ತುಮಕೂರು/ಬೆಂಗಳೂರು, ಫೆ.27: 'ನನ್ನ ಬಗ್ಗೆ ಸತ್ಯ ಹೇಳಿದವರೆಲ್ಲ ಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅದಕ್ಕೆ ಡಿಬಿ ಚಂದ್ರೇಗೌಡರೇ ಉದಾಹರಣೆ. ನನ್ನ ಆಪ್ತರಿಗೆಲ್ಲ ಕಷ್ಟನಷ್ಟಗಳಾಗಿದೆ. ಜೈಲಿಗೆ ಹೋದರು ವಿಪಕ್ಷಗಳಿಗೆ ಸಮಾಧಾನವಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೇಸರ ವ್ಯಕ್ತಪಡಿಸಿದರು.

ತಮ್ಮ70ನೇ ಹುಟ್ಟುಹಬ್ಬದ ಅಂಗವಾಗಿ ತೋಂಟದಪ್ಪ ಛತ್ರದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ ಅವರು ತಮ್ಮ ಭಾಷಣದುದ್ದಕ್ಕೂ ದೇವೇಗೌಡ ಹಾಗೂ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು.

'ದೇವೇಗೌಡರು ಸೇರಿದಂತೆ ಹಲವರು ನಾನು ಪಕ್ಷ ಬಿಡುವುದನ್ನೇ ಕಾಯುತ್ತಿದ್ದಾರೆ. ಆದರೆ, ನಾನು ಪಕ್ಷ ಬಿಡುವುದು ಕನಸಿನ ಮಾತು. ನಾನು ಎಂದೂ ಬಿಜೆಪಿ ಬಿಟ್ಟು ಹೋಗುವುದಿಲ್ಲ' ಎಂದು ಬಿಎಸ್ ವೈ ಹೇಳಿದರು.

ಕುರ್ಚಿ ನಾನು ಕೇಳಿದ್ದಲ್ಲ: ಸಿಎಂ ಕುರ್ಚಿಗಾಗಿ ನಾನು ದೆಹಲಿಗೆ ಹೋಗುವುದಿಲ್ಲ. ಮತ್ತೆ ಸಿಎಂ ಸ್ಥಾನ ನೀಡುತ್ತೇನೆ ಎಂದು ನಿತಿನ್ ಗಡ್ಕರಿ ಈ ಹಿಂದೆ ಭರವಸೆ ನೀಡಿದ್ದರು. ಅದಕ್ಕಾಗಿ ಗಡ್ಕರಿ ಅವರನ್ನು ಕರೆಸಿ ಕೇಳಲಾಯಿತು. ಇಲ್ಲದಿದ್ದರೆ ಆ ಕಡೆ ತಲೆ ಹಾಕುತ್ತಿರಲಿಲ್ಲ.

ಮತ್ತಷ್ಟು ಕೆಚ್ಚಿನಿಂದ ಮತ್ತೆ ಜನರ ಮುಂದೆ ಬರುವೆ. ನನ್ನ ಸರ್ಕಾರ ಬೀಳಿಸಲು ಮೂರು ಬಾರಿ ಯತ್ನಿಸಲಾಯಿತು. ರಾಜ್ಯಪಾಲರನ್ನು ದಾಳವಾಗಿ ಬಳಸಲಾಯಿತು. ವಿಶ್ವಾಸದ್ರೋಹಿಗಳಿಂದ ಪಾಠ ಕಲಿತ್ತಿದ್ದೇನೆ.

ಉಡುಪಿ- ಚಿಕ್ಕಮಗಳೂರು ಚುನಾವಣೆ ನಮಗೆ ಉತ್ತಮ ಅವಕಾಶ ಒದಗಿಸಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದರು.

ತುಮಕೂರಿನಲ್ಲಿ ಹುಟ್ಟುಹಬ್ಬ ಸಮಾರಂಭ, ಸಂಭ್ರಮ ಮುಗಿಸಿಕೊಂಡ ಯಡಿಯೂರಪ್ಪ ಹಾಗೂ ಅವರ ಪರಿವಾರ ಈಗ ಬೆಂಗಳೂರಿನ ರೇಸ್ ಕೋರ್ಸ್ ನಿವಾಸಕ್ಕೆ ಹಿಂದಿರುಗಿದೆ. ಬೆಂಗಳೂರಿಗೆ ಕಾಲಿಟ್ಟ ಬಳಿಕ, ಸುದ್ದಿಗಾರರೊಂದ್ಗೆ ಮಾತನಾಡಿದ ಅವರು, ಬಜೆಟ್ ಸಿದ್ಧತೆಯಲ್ಲಿರುವ ಸಿಎಂ ಸದಾನಂದ ಗೌಡರಿಗೆ ಕಿವಿಮಾತು ಹೇಳಿದರು. 'ಯಾವುದೇ ಕಾರಣಕ್ಕೂ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬೇಡಿ' ಎಂದು ಯಡಿಯೂರಪ್ಪ ಹೇಳಿದ್ದಾರೆ.

English summary
Nitin Gadkari promised me that he will hand over CM Post to me after few months but he has cheated said 70th Birthday boy former CM BS Yeddyurappa during his speech at Tumkur. BS Yeddyurappa's birthday being celebrated near Tumkur today(Feb.27)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X