ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಕಿ ಆಕಸ್ಮಿಕ, ಯಾರು ಸತ್ತಿಲ್ಲ: ಗೃಹ ಸಚಿವ
ಬೆಂಕಿ ಅಕಸ್ಮಿಕವಾಗಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡಿರುವವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರ್ಲಟನ್ ಕಟ್ಟಡದಲ್ಲಿ ಹೊತ್ತಿಕೊಂಡಿದ್ದ ಮೂರನೇ ಮಹಡಿಯ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕದಳ ಯಶಸ್ವಿಯಾಗಿದೆ. ಕಟ್ಟಡದಲ್ಲಿ ಸಿಲುಕಿದ್ದ ಅನೇಕರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು.
ಕಾರ್ಲಟನ್ ಕಟ್ಟಡದಲ್ಲಿ ಹೊತ್ತಿಕೊಂಡಿರುವ 50 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ 10 ಮಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಣಿಪಾಲ್ ಅಸ್ಪತ್ರೆಯ ಎಂದು ನಾಗೇಂದ್ರಸ್ವಾಮಿ ತಿಳಿಸಿದ್ದಾರೆ. ಕಟ್ಟಡದಲ್ಲಿ ಬಹುತೇಕ ಜನರನ್ನು ಹೊರಕ್ಕೆ ತರಲಾಗಿದೆ. ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿ ಅಗ್ನಿ ಶಾಮಕ ದಳ ಮತ್ತು ಪೊಲೀಸ್ ಪ್ರಯತ್ನಿದಿಂದ ಬಹುತೇಕ ಬೆಂಕಿಯನ್ನು ನಂದಿಸಲಾಗಿದೆ ಎಂದು ಡಿಜಿಪಿ ಪಿ ಎಸ್ ಸಂದು ತಿಳಿಸಿದ್ದಾರೆ.
Story first published: Tuesday, February 23, 2010, 18:46 [IST]