209673jaalatarangaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg209673jaalatarangaಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg209673jaalatarangaನಾಗಐತಾಳರ ಎರಡು ಪುಸ್ತಕ-ಮಿಮರ್ಶೆ/column/nataraj/2009/0129-naga-aithals-works-book-review-by-msn.htmlಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ' ಮತ್ತು ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಶಿವರಾಮ ಕಾರಂತರ ಊರಿನವರಾದ ನಾಗ ಐತಾಳರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಹಿರಿಯರು. ಜೀವರಸಾಯನಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿ 34351http://kannada.oneindia.com/img/2009/01/29-nagaaithal4.jpg209673jaalatarangaಜಾಲತರಂಗದಿಂದ ಜಾಲತರಂಗಿಣಿಯವರೆಗೆ/column/nataraj/2009/0514-farewell-to-jaalataranga-columnist-ms-nataraj.htmlಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ 36601http://kannada.oneindia.com/img/2009/05/14-ms-nataraj7.jpg192284kannada columnistಜಿಯಾಂಗ್-ಕ್ವಿನ್‌ರ ಅಮರ ಪ್ರೇಮದ ಕತೆ/column/manikanth/2009/0205-a-chinese-immoral-love-story.htmlಹತ್ತು ವರ್ಷ ದೊಡ್ಡವಳಾದ ಪ್ರಿಯತಮೆ ಬೆಟ್ಟ ಇಳಿಯಲು ಅನುವಾಗಲೆಂದು ಸಾವಿರಾರು ಮೆಟ್ಟಿಲುಗಳನ್ನು ಕಡಿದು ಎಲ್ಲ ವೈರುದ್ಧ್ಯಗಳನ್ನು ಮೆಟ್ಟಿನಿಂತ ಸಾಹಸಿಯ ಕಥೆಯಿದು. ಸಮಾಜದಿಂದ ದೂರವೇ ಉಳಿದು ಅರ್ಧ ಶತಮಾನ ಕಾಡಿನ ಗುಹೆಯಲ್ಲೇ ಪ್ರೇಮ ಜೀವನ ನಡೆಸಿದ ಅಮರ ಪ್ರೇಮಿಗಳ ಕಥಾನಕವಿದು. ಈ ಪ್ರೇಮಕ್ಕೆ ಸಾಕ್ಷಿಯಾಗಿ ಕಥಾನಾಯಕಿ ಇಂದಿಗೂ ಚೀನಾದಲ್ಲಿ ಜೀವಂತವಿದ್ದಾಳೆ. ಆಕೆಗೊಂದು ಪ್ರೇಮೋನ್ನಮಃ.* ಎಆರ್ ಮಣಿಕಾಂತ್ಪ್ರೀತಿಸಿದವಳಿಗಾಗಿ ಹೆತ್ತವರನ್ನು ತೊರೆದವರಿದ್ದಾರೆ. 34496http://kannada.oneindia.com/img/2009/02/05-guo-jiang-qu1.jpg192284kannada columnistಜಾಲತರಂಗದಿಂದ ಜಾಲತರಂಗಿಣಿಯವರೆಗೆ/column/nataraj/2009/0514-farewell-to-jaalataranga-columnist-ms-nataraj.htmlಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ 36601http://kannada.oneindia.com/img/2009/05/14-ms-nataraj7.jpg192284kannada columnistಶಾಂತಿಗಾಗಿ ಹಂಬಲಿಸಿದ; ಅಶಾಂತಿಯೇ ಬದುಕಾಯಿತು!/column/manikanth/2009/0618-sad-love-story-of-alfred-nobel.htmlಶ್ರೀಮಂತಿಕೆಯೊಂದಿದ್ದರೆ ಸಾಕು; ಅದರಿಂದ ನಾವು ಬಯಸಿದ್ದನ್ನೆಲ್ಲ ಪಡೆಯಬಹುದು. ಖರೀದಿಸಬಹುದು, ಗೆಲ್ಲಬಹುದು! ಬಯಸಿದ್ದೆಲ್ಲ ಸಿಕ್ಕಿದ ಮೇಲೆ ಇನ್ನೇನಿದೆ? ನಂತರದ ದಿನಗಳಲ್ಲಿ ಸಂತೋಷವೆಂಬುದು ನಮ್ಮ ಬದುಕಾಗುತ್ತದೆ. ಸಂಭ್ರಮ ಜತೆಗಿರುತ್ತದೆ. ನೆಮ್ಮದಿ ಕೈ ಹಿಡಿಯುತ್ತದೆ. ಕೈ ತುಂಬ ಕಾಸಿದೆ ಎಂಬ ಕಾರಣದಿಂದಲೇ ಬಯಸಿದಂಥ ಮನೆ ಮಾತ್ರವಲ್ಲ, ಮನೆಯೊಡತಿ ಕೂಡ ಸಿಗುತ್ತಾಳೆ. ಹಣವಂತ' ಎಂಬ ಕಾರಣದಿಂದಲೇ ಸಮಾಜದಲ್ಲಿ ಗೌರವ ಸಿಗುತ್ತದೆ. ಬಂಧುಗಳ ಸಂಖ್ಯೆ 37443http://kannada.oneindia.com/img/2009/06/18-alfred-nobel1.jpg192284kannada columnistಸನಾತನ ವೇದಪಂಡಿತ ಆರ್.ಕೆ. ಶ್ರೀಕಂಠಕುಮಾರಸ್ವಾಮಿ/column/gv/2009/0620-scientist-veda-expert-rk-srikanthakumarswamy.htmlಮದ್ರಾಸ್ ಐಐಟಿಯಿಂದ ಎಂಎಸ್ ಡಿಗ್ರಿ ಪಡೆದು ಲೋಹಶಾಸ್ತ್ರ ವಿಭಾಗದಲ್ಲಿ ದುಡಿದ ಹೆಮ್ಮೆಯ ಕನ್ನಡಿಗ ಆರ್.ಕೆ. ಶ್ರೀಕಂಠಕುಮಾರಸ್ವಾಮಿಯವರು ನಿವೃತ್ತಿಯ ನಂತರ ಗುರುಕುಲ ನಡೆಸುವ ಮುಖಾಂತರ ವೇದಶಿಕ್ಷಣ ನೀಡುತ್ತಿದ್ದಾರೆ. ಅವರು ಬರೆದಿರುವ 'ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು' ಪುಸ್ತಕದಲ್ಲಿ ಧಾರ್ಮಿಕ ಆಚರಣೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಕರ್ಣಾಟಕವು ಪ್ರತಿಭಾವಂತರ ನಾಡು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇದಕ್ಕೆ 37475http://kannada.oneindia.com/img/2009/06/20-srikanthakumarswamy1.jpg192284kannada columnistಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯ/column/gv/2009/0627-scientist-veda-expert-rk-srikanthakumarswamy.htmlಹದಿನಾರು ಸಂಸ್ಕಾರಗಳ ಬಗ್ಗೆ ಬಹಳ ಜನ ಬರೆದಿದ್ದಾರೆ. ಇಂಟರ್‌ನೆಟ್‌ನಲ್ಲಿ ಸರ್ಫ್ ಮಾಡಿದರೆ ಸಾಕಷ್ಟು ಮಾಹಿತಿ ದೊರೆಯುತ್ತದೆ. ಆದರೆ ಶ್ರೀಕಂಠಕುಮಾರಸ್ವಾಮಿಯವರ 'ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು' ಪುಸ್ತಕದಲ್ಲಿ ದೊರೆಯುವ ವಿವರ ಇನ್ನೆಲ್ಲಿಯೂ ದೊರೆಯುವುದಿಲ್ಲ. ಅವರ ವೈಶಿಷ್ಟ್ಯವೆಂದರೆ ಅವರು ಮಾನವೀಯ ಮೌಲ್ಯಗಳ ಬಗ್ಗೆ ಮಾತಾಡುತ್ತಾರೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಶ್ರೀಕಂಠಕುಮಾರಸ್ವಾಮಿಯವರು ಪೀಠಿಕೆಯಲ್ಲಿ ಒಂದು ಮಹತ್ವದ ಮಾತು ಹೇಳುತ್ತಾರೆ. ಅವರು ವೇದಶಾಸ್ತ್ರಗಳಲ್ಲಿ 37620http://kannada.oneindia.com/img/2009/06/27-srikanthakumarswamy1.jpg493209jaalataranginiಜಾಲತರಂಗದಿಂದ ಜಾಲತರಂಗಿಣಿಯವರೆಗೆ/column/nataraj/2009/0514-farewell-to-jaalataranga-columnist-ms-nataraj.htmlಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ 36601http://kannada.oneindia.com/img/2009/05/14-ms-nataraj7.jpg493209jaalataranginiಚೀನಾದ ಬೀಸಣಿಗೆ/literature/book/2009/0529-foreword-to-jaalatarangini-by-cn-ramachandran.htmlದಟ್ಸ್ ಕನ್ನಡ ಅಂತರ್ಜಾಲ ತಾಣದಲ್ಲಿ 'ಜಾಲತರಂಗ' ಅಂಕಣದಲ್ಲಿ ಪ್ರಕಟವಾದ ಡಾ. ಮೈಶ್ರೀ ನಟರಾಜ್ ಅವರ 55 ವಿಭಿನ್ನ ಲೇಖನಗಳ ಸಂಕಲನವೇ 'ಜಾಲತರಂಗಿಣಿ'. ಈ ಪುಸ್ತಕ ಮೇ 30 ಮತ್ತು 31ರಂದು ಅಮೆರಿಕಾದಲ್ಲಿ ನಡೆಯುತ್ತಿರುವ 4ನೇ ವಸಂತ ಸಾಹಿತ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿರುವ ಪುಸ್ತಕಗಳಲ್ಲೊಂದು. ನಟರಾಜ್ ಅವರನ್ನು ಪ್ರತ್ಯಕ್ಷ ಕಂಡಿರದಿದ್ದರೂ ಖ್ಯಾತ ಲೇಖಕ, ಪ್ರಾಧ್ಯಾಪಕ, ವಿಮರ್ಶಕರಾದ ಡಾ. ಸಿಎನ್ ರಾಮಚಂದ್ರನ್ ಅವರು 36980http://kannada.oneindia.com/img/2009/05/29-jaalatarangini1.jpg493209jaalataranginiಸಾಹಿತ್ಯೋತ್ಸವ : ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು/nri/article/2009/0623-4th-vasanta-sahityotsava-ashtalakshmi.htmlಭಾನುವಾರ ಮಧ್ಯಾಹ್ನ ಊಟದ ನಂತರ ವಸಂತ ಸಾಹಿತ್ಯೋತ್ಸವ ಸಮ್ಮೇಳನಕ್ಕೆ ಕಳೆಕೊಟ್ಟದ್ದು ಚುರುಕು ಮಾತಿನ ಮಹಿಳಾ ಸಮಾವೇಶ. ಕಥೆಗಾರ್ತಿ, ಕವಯಿತ್ರಿ ಶಶಿಕಲಾ ಚಂದ್ರಶೇಖರ್ ಉತ್ಸಾಹದಿಂದ ನಡೆಸಿಕೊಟ್ಟ ಇದರಲ್ಲಿ ಅಮೆರಿಕನ್ನಡತಿಯರಾದ ವಿಮಲಾ ರಾಜಗೋಪಾಲ್, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್, ಮೀರಾ ಪಿ.ಆರ್., ಮತ್ತು ಜ್ಯೋತಿ ಮಹಾದೇವ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ವೀಣಾ ಶಾಂತೇಶ್ವರ-ವೈದೇಹಿ ಅವರುಗಳನ್ನೂ ಸೇರಿಸಿ ವೇದಿಕೆಯ ಮೇಲೆ ಎಂಟು 37517http://kannada.oneindia.com/img/2009/06/23-vasanta-sahityotsava6.jpg493209jaalataranginiಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ/nri/article/2009/0623-4th-vasanta-sahityotsava-kannada-in-computer.htmlಈ ಬಾರಿಯ ವಸಂತ ಸಾಹಿತ್ಯೋತ್ಸವದಲ್ಲಿ ಪ್ರಸ್ತುತಗೊಂಡ ಒಂದು ವಿಶಿಷ್ಟ ಕಾರ್ಯಕ್ರಮವೆಂದರೆ ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ' ಎಂಬ ಒಂದು ಪ್ರಾತ್ಯಕ್ಷಿಕೆ. ಗಣಕಯಂತ್ರದಲ್ಲಿ ಮತ್ತು ಅಂತರಜಾಲದಲ್ಲಿ ಕನ್ನಡ ಲಿಪಿಯನ್ನು ಉಪಯೋಗಿಸಿ ಇಮೇಲ್ ಬರೆಯುವುದು ಹೇಗೆ, ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್‌ಗಳಲ್ಲೂ ಕನ್ನಡದಲ್ಲೇ ಕಡತಗಳನ್ನು ತಯಾರಿಸುವುದು ಹೇಗೆ, ಯುನಿಕೋಡ್ ಕನ್ನಡ ಲಿಪಿ ಎಂದರೇನು, ಅದರ ಪ್ರಯೋಜನಗಳೇನು, ಹರಟೆಕಿಟಕಿ(ಚಾಟಿಂಗ್)ನಲ್ಲೂ ಹೇಗೆ ಕನ್ನಡ 37518http://kannada.oneindia.com/img/2009/06/23-vasanta-sahityotsava4.jpg493209jaalataranginiರಸ ವೃಷ್ಟಿ, ಸರಸತಿಯ ಸರಸ ವೃಷ್ಟಿ!/nri/article/2009/0623-4th-vasanta-sahityotsava-entertainment-galore.htmlಅದೊಂದು ರಸ ವೃಷ್ಟಿ! ಕಾರ್ಯಕ್ರಮದ ಕೈಪಿಡಿಯಲ್ಲಿ ಅದರ ಹೆಸರೇ ಸರಸತಿಯ ಸರಸ ವೃಷ್ಟಿ'! ಅಮೆರಿಕಾದ ನೆಲದಲ್ಲಿ ಕನ್ನಡ ಸಾಹಿತ್ಯ ಗೋಷ್ಠಿ! ಕನ್ನಡ ಸಾಹಿತ್ಯ ರಂಗದ ಆಶ್ರಯದಲ್ಲಿ ನಡೆದ ವಸಂತೋತ್ಸವದ ಒಂದು ಅಂಗವಾದ ಈ ಸಾಹಿತ್ಯ ಗೋಷ್ಠಿಯಲ್ಲಿ ಏನುಂಟು, ಏನಿಲ್ಲ! ಇನಿಯನ ಬಗ್ಗೆ ಬರೆದ ಪ್ರೀತಿಯ ಕವನ ಉಂಟು, ಫೋನಿನ ಬಗ್ಗೆ ಬರೆದ ಹಾಸ್ಯಭರಿತ ನೊಸ್ಟಾಲ್ಜಿಕ್ ಕವನ ಉಂಟು, 37520http://kannada.oneindia.com/img/2009/06/23-vasanta-sahityotsava3.jpgnews"> ಜಾಲತರಂಗದಿಂದ ಜಾಲತರಂಗಿಣಿಯವರೆಗೆ | Dr MS Nataraj | Jaalataranga | Kananda columnist | Farewell - ಜಾಲತರಂಗದಿಂದ ಜಾಲತರಂಗಿಣಿಯವರೆಗೆ - Kannada Oneindia

ಜಾಲತರಂಗದಿಂದ ಜಾಲತರಂಗಿಣಿಯವರೆಗೆ

Dr MS Nataraj
ಅದುವೆಕನ್ನಡ ಬಿಂದು ಕಾಮ್! ಈ ಮುದ್ದಾದ ಹೆಸರನ್ನು ದಟ್ಸ್ ಕನ್ನಡ ಅಂತರ್ಜಾಲ ತಾಣಕ್ಕೆ ದಯಪಾಲಿಸಿದ 'ಜಾಲತರಂಗ' ಅಂಕಣಕಾರರಾದ ಆತ್ಮೀಯ ಡಾ. ಮೈ.ಶ್ರೀ. ನಟರಾಜ್ ಅವರ ಅಕ್ಷರ ಕೊಡುಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಸತತ ಆರು ವರ್ಷಗಳ ಕಾಲ ವೈವಿಧ್ಯಮಯ, ಚಿಂತನಶೀಲ ಬರಹಗಳ ಮುಖಾಂತರ ತಮ್ಮ ಅನುಭವಗಳನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ ಮತ್ತು ದಟ್ಸ್ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಈಗ ದಣಿದಮನಕ್ಕೆ ವಿಶ್ರಾಂತಿ ಬಯಸಿ ಅಂಕಣಬರಹಕ್ಕೆ ಬಿಡುವುತೆಗೆದುಕೊಳ್ಳುತ್ತಿದ್ದಾರೆ. ಮುಂದೆಯೂ ಅವರ ಬರವಣಿಗೆಯ ಪಯಣ ಮುಂದುವರಿಯಲಿ, ಸ್ಫೂರ್ತಿದಾಯಕವಾದ ಸಮೃದ್ಧ ಬರಹಗಳು ನಮಗೆ ದೊರೆಯಲಿ ಎಂಬ ಸ್ವಾರ್ಥದೊಂದಿಗೆ...

ಡಾ|| ಮೈ.ಶ್ರೀ. ನಟರಾಜ, ಪೊಟೋಮೆಕ್, ಮೇರೀಲ್ಯಾಂಡ್

ದಟ್ಸ್‌ಕನ್ನಡ.ಕಾಮ್' ಜಾಲತಾಣ ಪ್ರಾರಂಭವಾದಾಗಿನಿಂದಲೂ ಅಲ್ಲಿ ಪ್ರಕಟವಾಗುತ್ತಿದ್ದ ಅನೇಕ ಲೇಖನಗಳನ್ನು ಮೊದಲಿನಿಂದಲೂ ಓದುತ್ತಾ ಬಂದವರಲ್ಲಿ ನಾನೂ ಒಬ್ಬ. ಈ ತಾಣಕ್ಕೆ ಅದುವೆಕನ್ನಡ' ಎಂಬ ಹೆಸರನ್ನು ಕೊಟ್ಟವನೂ ನಾನೆ. ಅಷ್ಟೇ ಅಲ್ಲ, ಈ ಜಾಲಪತ್ರಿಕೆಯ ಕವನ-ಸಿಂಚನ' ಪ್ರಾರಂಭವಾದದ್ದು ನನ್ನ ಹ್ಯೂಸ್ಟನ್ ಹುಳೀ ಹೆಂಡ' ಎಂಬ ಕವನದಿಂದ. ಹೊಸ ಸಹಸ್ರಮಾನದ ಹ್ಯೂಸ್ಟನ್ ಕನ್ನಡ ಸಮ್ಮೇಳನದ ಕವಿಗೋಷ್ಠಿಯಲ್ಲಿ ನಾನು ಓದಿದ ಕವನ ಅದು. ಆನಂತರ, ಸುಮಾರು ಆರು ವರ್ಷಗಳಿಂದ ಆಗಿಂದಾಗ್ಗೆ ಅನಿಯತಕಾಲಿಕವಾಗಿ ಜಾಲತರಂಗ' ಎಂಬ ಶಿರೋನಾಮೆಯಲ್ಲಿ ಅಂಕಣ ಬರಹಗಳನ್ನು ಬರೆಯುತ್ತಲೇ ಬಂದಿದ್ದೇನೆ.

2003ರಿಂದ 2006ರವರೆಗೆ ಪ್ರಕಟವಾದ ಅಂಕಣ ಬರಹಗಳನ್ನು "ಜಾಲತರಂಗ" ಎಂಬ ಹೆಸರಿನಲ್ಲೇ ಪುಸ್ತಕರೂಪದಲ್ಲಿ ಪ್ರಕಟಿಸಿ ಈಗಾಗಲೇ ಹತ್ತಿರ ಹತ್ತಿರ ಮೂರು ವರ್ಷಗಳೇ ಸಂದಿವೆ. ಅದರನಂತರ ಬಂದ ಅಂಕಣ ಬರಹಗಳನ್ನು "ಜಾಲತರಂಗಿಣಿ" ಎಂಬ ಹೆಸರಿನಲ್ಲಿ ಈಗ ಮತ್ತೊಮ್ಮೆ ಪುಸ್ತಕರೂಪದಲ್ಲಿ ಪ್ರಕಟಿಸಲು ಹೊರಟಿದ್ದೇನೆ. ಬೆಂಗಳೂರಿನಲ್ಲಿರುವ ರವಿ ಕುಮಾರ್ ನಡೆಸುತ್ತಿರುವ ಅಭಿನವ' ಮತ್ತು ಲಾಸ್ ಏಂಜಲೀಸಿನ ಡಾ|| ನಾಗ ಐತಾಳರು ನಡೆಸುತ್ತಿರುವ ಸಾಹಿತ್ಯಾಂಜಲಿ' ಇವರಿಬ್ಬರ ಜಂಟಿ ಪ್ರಕಾಶನದಲ್ಲಿ ಈ ಪುಸ್ತಕ ಪ್ರಕಟವಾಗುತ್ತಿದೆ. ಈ ಪ್ರಕಾಶಕದ್ವಯ ಮಹನೀಯರಿಗೂ ನಾನು ಅತ್ಯಂತ ಋಣಿಯಾಗಿದ್ದೇನೆ. ಕನ್ನಡದ ಹೆಸರಾಂತ ವಿಮರ್ಶಕ ಡಾ|| ಸಿ.ಎನ್. ರಾಮಚಂದ್ರನ್ ಅವರು ನನ್ನ ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಮತ್ತು ನನ್ನ ಹಿರಿಯ ಗೆಳೆಯ ಹಾಗೂ ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರೂ ಆದ ಡಾ|| ಎಚ್. ವೈ. ರಾಜಗೋಪಾಲ್ ಅವರು ಬೆನ್ನುಡಿಯನ್ನು ಬರೆದುಕೊಟ್ಟಿರುವುದು ನನಗೆ ತುಂಬಾ ಹರ್ಷವನ್ನುಂಟುಮಾಡಿದೆ. ಇದೆಲ್ಲಕ್ಕೂ ಕಳಶವಿಟ್ಟಂತೆ, ಮೇ 30-31, 2009ರ ದಿನಾಂಕಗಳಲ್ಲಿ ಮೇರೀಲ್ಯಾಂಡಿನ ರಾಕ್‌ವಿಲ್ ನಗರದಲ್ಲಿ, ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ನಾಲ್ಕನೆಯ ವಸಂತ ಸಾಹಿತ್ಯೋತ್ಸವದ ಶುಭಸಂದರ್ಭದಂದು "ಜಾಲತರಂಗಿಣಿ" ಲೋಕಾರ್ಪಣೆಗೊಳ್ಳುತ್ತಿರುವುದು ನನ್ನ ಸಂತಸವನ್ನು ಇಮ್ಮಡಿಸಿದೆ.

ಈ ಸಂದರ್ಭದಲ್ಲಿ, ಈ ನನ್ನ ಅಂಕಣ ಬರಹದ ಸಾಧನೆಗೆ ಕ್ಷೇತ್ರವನ್ನೊದಗಿಸಿ ಅವಕಾಶ ಮತ್ತು ಉತ್ತೇಜನವನ್ನಿತ್ತ ದಟ್ಸ್‌ಕನ್ನಡದ ಸಂಪಾದಕರಾದ ಶಾಮಸುಂದರ್ ಅವರನ್ನು ಕೃತಜ್ಞತಾಪೂರ್ವಕವಾಗಿ ನೆನೆಸಿಕೊಳ್ಳುವುದು ನನ್ನ ಆದ್ಯಕರ್ತವ್ಯ. ಅವರ ಸಿಬ್ಬಂದಿ ವರ್ಗದ ಪ್ರಸಾದ್ ನಾಯಿಕ್ ಅವರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ, ಅದುವೆಕನ್ನಡದ ಓದುಗ ಮಹನೀಯರೂ ಮಹಿಳೆಯರೂ ನನ್ನಲ್ಲಿ ಕನ್ನಡ ಬರವಣಿಗೆ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಉತ್ತಮ ಬರಹ ಪ್ರಕಟವಾದಾಗ ಭೇಷ್ ಎಂದು ಬೆನ್ನುತಟ್ಟಿ, ಲೇಖನ ಕಳೆಗುಂದಿದಾಗ ಬಡಿದೆಚ್ಚರಿಸಿ, ಸತಾರ್ಕಿಕ ವಾದಕ್ಕೆ ಮಣಿದು ತಲೆದೂಗಿ, ತಮಗೆ ಅಸಮರ್ಪಕವೆನಿಸಿದಾಗ ನಿರ್ದಾಕ್ಷಿಣ್ಯವಾಗಿ ಬರೆದು ತಿಳಿಸಿ, ಒಟ್ಟಿನಲ್ಲಿ ನನ್ನ ಚಿಂತನಶೀಲತೆಯನ್ನು ಯಾವಾಗಲೂ ಹರಿತವಾಗಿರುವಂತೆ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ನಮನಗಳು.

"ಜಾಲತರಂಗಿಣಿ"ಗೆ ಬರೆದ ಮುನ್ನುಡಿಯಲ್ಲಿ ರಾಮಚಂದ್ರನ್ ಅವರು ನನ್ನ ಅಂಕಣ ಬರಹದ ಬಗ್ಗೆ ತಮ್ಮ ಮೆಚ್ಚುಗೆಯನ್ನು ಈ ಮುಂದಿನ ಮಾತುಗಳಲ್ಲಿ ಬಣ್ಣಿಸಿದ್ದಾರೆ --"ಸಂಸ್ಕೃತ-ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸಂಗೀತ-ಸಾಹಿತ್ಯಗಳಲ್ಲಿ ಆಸ್ಥೆಯನ್ನು ಉಳಿಸಿಕೊಂಡಿರುವ, ಲಲಿತ ಆದರೆ ಸತಾರ್ಕಿಕ ಶೈಲಿಯನ್ನು ಸಾಧಿಸಿಕೊಂಡಿರುವ, ಡಾ|| ನಟರಾಜ್ ಅವರ ಲೇಖನಗಳನ್ನು ಓದಿ, ಮತ್ತೊಮ್ಮೆ ಓದಿ, ನನಗೆ ಸಂತೋಷವಾಗಿದೆ ಮತ್ತು ನನ್ನ ಅರಿವು ಹೆಚ್ಚಿದೆ. ಇದೇ ಅನುಭವ ಇತರ ಓದುಗರಿಗೂ ಆಗುತ್ತದೆಂಬ ವಿಶ್ವಾಸ ನನಗಿದೆ." ಬೆನ್ನುಡಿ ಬರೆದ ರಾಜಗೋಪಾಲರು ಅತ್ಯಂತ ಅಭಿಮಾನದಿಂದ ಬೆನ್ನು ತಟ್ಟುತ್ತಾ ಈ ರೀತಿ ಉದ್ಗಾರವೆತ್ತಿದ್ದಾರೆ--"ನಟರಾಜರ ಅಂಕಣಗಳನ್ನು ಅವು ಬಂದಂತೆಯೇ ಓದಿದವರೂ ಕೂಡ ಈ ಸಂಗ್ರಹವನ್ನು ಬರಮಾಡಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಇನ್ನು ಮೊದಲ ಬಾರಿಗೆ ಓದುತ್ತಿರುವವರಿಗಂತೂ ಇಲ್ಲಿ ಸುಗ್ಗಿಯೇ ಕಾದಿದೆ! ಇಲ್ಲಿನ ವಿಷಯವೈವಿಧ್ಯತೆ, ಅವರ ಸೋಗಿಲ್ಲದ ವಿಚಾರಸರಣಿ, ಅದನ್ನು ಹೊರಗೆಡಹುವ ಭಾಷಾ ಸಾಮರ್ಥ್ಯ ಮತ್ತು ಲಾಲಿತ್ಯ, ತಮ್ಮ ಅಭಿಪ್ರಾಯಗಳಿಗೆ ವಿರುದ್ಧ ಪ್ರತಿಕ್ರಿಯೆಗಳನ್ನೂ ಸಾವಧಾನದಿಂದ ಬರಮಾಡಿಕೊಳ್ಳುವ ಸಮಚಿತ್ತತೆ--ಇವೆಲ್ಲ ಈ ಅಂಕಣಗಳನ್ನು ಒಂದು ವಿಶಿಷ್ಟ ಶ್ರೇಣಿಗೆ ಸೇರಿಸುತ್ತವೆ. ಕನ್ನಡ ಸಾಹಿತ್ಯಕ್ಕೆ ಇದೊಂದು ಉತ್ತಮ ಕಾಣಿಕೆ."

ಈ ಎರಡೂ ಬದಿಯ ಪ್ರೀತಿಯ ಮಾತುಗಳು ನನಗೆ ಮೆತ್ತನೆಯ ಉಪಸ್ತರಣ ಮತ್ತು ಬೆಚ್ಚಗಿನ ಅಪಿಧಾನದಂತೆ ಆಗಿ ಅವೆರಡರ ನಡುವೆ ಒಂದಿಷ್ಟು ಸಮಯ ವಿರಮಿಸುವ ಮನಸ್ಸಾಗಿದೆ. ಮನಸ್ಸಿಗೂ ಬುದ್ಧಿಗೂ ಒಂದಿಷ್ಟು ವಿಶ್ರಾಂತಿ ಬೇಕು ಎನಿಸಿದೆ. ಹಾಗಾಗಿ, ಈ ಲೇಖನದೊಂದಿಗೆ, ನಾನು ಜಾಲತರಂಗ' ಎಂಬ ಶೀರ್ಷಿಕೆಯ ಅಂಕಣ ಮಾಲೆಗೆ ಮಂಗಳ ಹಾಡಬಯಸುತ್ತೇನೆ. ಹಾಗೆಂದ ಮಾತ್ರಕ್ಕೆ ಬರವಣಿಗೆಯನ್ನು ನಿಲ್ಲಿಸುತ್ತಿದ್ದೇನೆಂದಲ್ಲ, ಮನಸ್ಸಿಗೂ ಮಿದಿಳಿಗೂ ಒಂದಷ್ಟು ವಿರಾಮವನ್ನು ಬಯಸುತ್ತಿದ್ದೇನೆ ಎಂದಷ್ಟೇ ಅರ್ಥ. ನಡೆದ ಜಾಡಿನಲ್ಲೇ ನಡೆಯುತ್ತಿದ್ದರೆ ಹೊಸ ಮಾರ್ಗ ತೋಚದೇ ಹೋಗಬಹುದಲ್ಲವೇ? ಬರವಣಿಗೆಯ ಮುಂದಿನ ಮಾರ್ಗವನ್ನು ಕಂಡುಹಿಡಿದುಕೊಳ್ಳಲು ಸಿದ್ಧನಾಗುತ್ತಿದ್ದೇನೆ. ದೂರದ ಪಯಣಕ್ಕೆ ಕಾಲ್ನಡಿಗೆಯಲ್ಲಿ ಹೊರಟಾಗ, ಅಲ್ಲಲ್ಲಿ, ತಂಪಿರುವ ಸ್ಥಳದಲ್ಲಿ, ನೀರಿರುವ ಸ್ಥಳದಲ್ಲಿ, ಕುಳಿತೋ ಮಲಗಿಯೋ ಮುಂದೆ ಸಾಗುವಂತೆ, ಬರವಣಿಗೆಯ ಪಯಣದಲ್ಲೂ ಆಗುತ್ತಿರಬೇಕು. ಸ್ಫೂರ್ತಿಯನ್ನು ಪಡೆದುಕೊಳ್ಳಲು ಆಗಾಗ್ಗೆ ಒಂದಿಷ್ಟು ಹಿನ್ನೋಟವೂ ಬೇಕು ಎನ್ನಿಸಿತು. ಹಲವಾರು ಯೋಜನೆಗಳು ಮನಸ್ಸಿನಲ್ಲಿ ಮನೆಮಾಡಿವೆಯಾದರೂ, ಯಾವುದನ್ನು ಯಾವಾಗ ಕಾರ್ಯರೂಪಕ್ಕೆ ತರುವುದು ಸಾಧ್ಯವೋ ಹೇಳಲಾಗುವುದಿಲ್ಲ. ಆಗಿಂದಾಗ್ಗೆ ಬಿಡುವಾದಾಗ ಒಂದಿಲ್ಲ ಒಂದು ಕಾರಣದಿಂದ ಅದುವೆಕನ್ನಡದಲ್ಲಿ ನಾನು ಪ್ರತ್ಯಕ್ಷನಾಗುವುದು ಖಂಡಿತ! ಸಹೃದಯೀ ಓದುಗರ ಅಭಿಮಾನ ಏಕರೀತಿಯಾಗಿರಲಿ. ಮತ್ತೊಮ್ಮೆ ಭೇಟಿಯಾಗುವವರೆಗೂ ವಿರಮಿಸುವೆ ನಿಮ್ಮೆಲ್ಲರ ಪ್ರೀತಿಯ ನೆಳಲಿನಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+