ವಿಷ್ಣುಸಹಸ್ರನಾಮ- ಮಹಾತ್ಮ್ಯ ಕಥಾಮೃತ

ಜೋಗೇಶ್ವರಿಯ ಶ್ರೀ ರಾಘವೇಂದ್ರಸ್ವಾಮಿ ಮಠದ ಗುರುವಾರ ಅಷ್ಟೋತ್ತರ ಮಂಡಲಿಯ ಸದಸ್ಯರಾದ ವಿಜಯೀಂದ್ರ ದೇಶಪಾಂಡೆ ಅವರ ಚಿಕ್ಕಮ್ಮನ ಮಗ ಬಿ.ಎಚ್.ಪಾಟಿಲರಿಗೆ ಪಾರ್ಶ್ವವಾಯುವಿನ ತೊಂದರೆಯುಂಟಾಗಿತ್ತು. ದೇಹದ ಒಂದು ಭಾಗವು ನಿಷ್ಕ್ರಿಯಗೊಂಡಿತು, ಮಾತಾಡಲು ಬರುತ್ತಿರಲಿಲ್ಲ. ನಾನು ತಯಾರಿಸಿದ ಚಾರ್ಟ್ ಪ್ರಕಾರ ಬಿ.ಎಚ್.ಪಾಟೀಲರ ಜನ್ಮನಾಮಕ್ಕೆ ಅನುಗುಣವಾದ ವಿಷ್ಣುಸಹಸ್ರನಾಮದ 73ನೆಯ ಶ್ಲೋಕವನ್ನು ದಿನಾಲು ಹನ್ನೊಂದು ಸಲ ಪಠಿಸಲು ಅಣ್ಣ ವಿಜಯೀಂದ್ರ ಹೇಳಿದರು. ತಮ್ಮ ಮೂರು ತಿಂಗಳಲ್ಲಿ ನಡೆದಾಡಲು ಮತ್ತು ಮಾತಾಡಲು ಶುರುಮಾಡಿದರು. ಆರು ತಿಂಗಳಲ್ಲಿ ರೋಗಮುಕ್ತರಾದರು.
ಪಾಟೀಲರು ಮೊದಲು ಪುಣೆಯಲ್ಲಿ, ನಂತರ ಮುಂಬೈಯಲ್ಲಿ(ಬೇಲಾಪುರದಲ್ಲಿ) ಅವರ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಸೆಕ್ಟರ್ನಲ್ಲಿ ಪ್ರೊ.ಮನೋಜ ದೇಶಪಾಂಡೆ ಇರುತ್ತಾರೆ. ಅವರ ತಂದೆ ವಿಲಾಸರಾವ ದೇಶಪಾಂಡೆ (ಚಾರಠಾಣಕರ) ಅವರು ತಮ್ಮ ಊರಾದ ಪರಭಣಿಯಲ್ಲಿಯ ಶ್ರೀ ವಿಷ್ಣುಸಹಸ್ರನಾಮ ಸತ್ಸಂಗ ಮಂಡಳದ ಕ್ರಿಯಾಶೀಲ ಸದಸ್ಯರು. ಪಾಟೀಲರು ವಿಷ್ಣುಸಹಸ್ರನಾಮ ಪಾರಾಯಣದಿಂದ ರೋಗಮುಕ್ತವಾದ ಸಂಗತಿ ತಿಳಿದು ವಿಜಯೀಂದ್ರ ದೇಶಪಾಂಡೆಯವರ ಮುಖಾಂತರ ನನ್ನನ್ನು ಸಂಪರ್ಕಿಸಿದರು. ತಾವು ಸಂಪಾದಿಸುತ್ತಿದ್ದ ವಿಷ್ಣುಸಹಸ್ರನಾಮ- ಮಹಾತ್ಮ್ಯ ಕಥಾಮೃತ ಎಂಬ ಮರಾಠಿ ಪುಸ್ತಕಕ್ಕೆ ಒಂದು ಲೇಖನ ಬರೆಯಲು ವಿನಂತಿಸಿದರು. ನನಗೆ ಮರಾಠಿ ಓದಲು ಬರುತ್ತದೆ ಆದರೆ ಲೇಖನ ಬರೆಯುವುದು ಕಷ್ಟಕರ ಎಂದೆ. ನನ್ನಿಂದ ಇಂಗ್ಲಿಷಿನಲ್ಲಿ ಲೇಖನ ಬರೆಸಿ ಅದನ್ನು ಮರಾಠಿಗೆ ಅನುವಾದಿಸಿ ಪ್ರಕಟಿಸಿದರು. ಪುಣೆಯ ಪ್ರಸಿದ್ಧ ಡಾ| ಬಿ.ವಿ.ಜಾಲಗಾಂಕರ್ ಅವರು ನಾನು ಸಿದ್ಧಪಡಿಸಿದ ಚಾರ್ಟ್ ನೋಡಿ ಪ್ರಭಾವಿತರಾಗಿದ್ದರು. ಪಾಟೀಲರು ಗುಣಮುಖವಾದ ಕತೆಯನ್ನು ಉತ್ಸುಕತೆಯಿಂದ ಕೇಳಿದ್ದರು. ಪುಸ್ತಕ ಪ್ರಕಾಶನಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಲು ಡಾ| ಜಾಲಗಾಂವಕರ್ ಸಲಹೆ ನೀಡಿದ್ದರಂತೆ.
ದೇವಗಿರಿ ಎಕ್ಸ್ಪ್ರೆಸ್ ಮುಖಾಂತರ ಪರಭಣಿ ತಲುಪಿದೆ. ವಿಲಾಸರಾವ್ ಅವರ ಮಗ ಪ್ರೊ.ಮನೋಜ ನನ್ನನ್ನು ಸ್ವಾಗತಿಸಲು ಸ್ಟೇಶನ್ನಿಗೆ ಬಂದಿದ್ದರು. ಶ್ರೀಮಂಗಲ ಕಾರ್ಯಾಲಯದಲ್ಲಿ ಮುಂಜಾನೆ ಸುಮಾರು ಆರು ನೂರು ಜನ ಶ್ರೀವಿಷ್ಣುಸಹಸ್ರ ನಾಮದ ಪಾರಾಯಣ 9ರಿಂದ 11ರವರೆಗೆ ನಡೆಸಿದರು. ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಭ.ವಿ.ಜಾಲನಾಪುರಕರ ವಹಿಸಿದ್ದರು. (ಈ ವರ್ಷ ಅವರಿಗೆ ಪುಣೆಯ ಶ್ರೇಷ್ಠ ವೈದ್ಯ ಬಹುಮಾನ ದೊರೆತಿದೆ). ಮುಖ್ಯ ಅತಿಥಿಯಾಗಿ ನಾನು ಮರಾಠಿಯಲ್ಲಿ ಭಾಷಣ ಮಾಡಬೇಕಾಯ್ತು. ಧೈರ್ಯದಿಂದ ಮಾತಾಡಿದೆ. ನನಗೆ ವಿಷ್ಣುಸಹಸ್ರನಾಮದಲ್ಲಿ ಆಸಕ್ತಿಯನ್ನು ಉಂಟುಮಾಡಿದ ಡಾ| ಅರಳುಮಲ್ಲಿಗೆ ಪಾರ್ಥಸಾರಥಿ ಹಾಗೂ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರನ್ನು ನೆನೆಸಿದೆ. ಭಾವನಾತ್ಮಕವಾಗಿ ತಲ್ಲೀನರಾದ ಪ್ರೇಕ್ಷಕರಿಗೆ ನನ್ನ ಮಾತು ಹಿಡಿಸಿತು. ಭಾಷಣದ ನಂತರ ಒಂದು ಪ್ರಶ್ನೋತ್ತರ ಸಭೆಯೂ ನಡೆಯಿತು. ಒಂದು ಸಂತಸದ ಸಂಗತಿ ಎಂದರೆ ಪುಸ್ತಕ ಬಿಡುಗಡೆಯ ನಂತರ ಸಾವಿರ ಪ್ರತಿಗಳೂ ಖರ್ಚಾದವು. ಪುಸ್ತಕ ವಿಕ್ರೇತಾ ಸುಖೀ ಭವ ಎಂದು ಹರಸಿದೆವು.
ಪರಭಣಿಯಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ. ಅಲ್ಲಿಯ ವಿದ್ಯಾನಗರದಲ್ಲಿ ಒಂದು ಪ್ರಸಿದ್ಧವಾದ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನವಿದೆ. ಹೆಚ್ಚಾಗಿ ಕನ್ನಡಿಗರು ಅಲ್ಲಿ ಗುರುವಾರಕ್ಕೊಮ್ಮೆ ಸೇರುತ್ತಾರೆ. ಅದನ್ನು ಪ್ರಾರಂಭಿಸಿದವರು ನಾರಾಯಣರಾವ ಪಾಥ್ರೀಕರ್ ಎಂಬವರು ಕನ್ನಡಿಗರು. ರಾಯರ ಮಂತ್ರ್ರಾಕ್ಷತೆಯ ಬಲದಿಂದ ಅನೇಕ ಪವಾಡ ಸದೃಶ ಕಾರ್ಯ ಅವರು ಸಾಧಿಸಿದ್ದಾರೆ. ಅವರಿಗೆ ಎಂಭತ್ತು ವರ್ಷ. ಅವರು ಪರಭಣಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ಪಾಥ್ರಿ ಎಂಬ ಊರಿನವರು. ಆ ಊರಲ್ಲಿ ಒಂದು ಭವ್ಯವಾದ ಸಾಯಿಬಾಬಾ ಮಂದಿರವಾಗಿದೆ ಎಂದು ಹೇಳಿದರು. ಶಿರಡಿಯ ಸಾಯಿಬಾಬಾ ಎಂದು ಪ್ರಸಿದ್ಧರಾದ ಸಂತರು ಇವರ ಊರವರಂತೆ. ಅವರು ಚಿಕ್ಕವರಿರುವಾಗಲೇ ಪಂಢರಪುರಕ್ಕೆ ಹೋದಾಗ ಅವರ ತಂದೆತಾಯಿ ತೀರಿಹೋದರಂತೆ. ಮುಂದೆ ಅವರನ್ನೊಬ್ಬ ಫಕೀರ ಸಾಕಿದನಂತೆ. ಅವರ ಮೂಲ ಹೆಸರು ಹರಿಭಾವು ಪರಶುರಾಮ ಭಸಾರಿ. ಅವರ ವಂಶಸ್ಥರೆಲ್ಲ ಪರಭಣಿಗೆ ಬಂದಾಗ ನಾರಾಯಣರಾವ ಅವರ ಮನೆಯಲ್ಲೇ ತಂಗುತ್ತಿದ್ದರಂತೆ. ಮುಂದಿನ ಸಲ ಪರಭಣಿಗೆ ಬಂದಾಗ ನನ್ನನ್ನು ಅಲ್ಲಿಗೆ ಕರೆದೊಯ್ಯುವುದಾಗಿ ಹೇಳಿದರು. ಅಲ್ಲಿ ಒಂದು ಬಾಲಾಜಿ ಮಂದಿರವಿದೆ. ಅಮೃತಶಿಲೆಯಲ್ಲಿ ಕಟೆದ ಮಂದಿರ. ಎರಡು ಕೋಟಿ ಖರ್ಚಾಗಿರಬೇಕು. ಅದನ್ನು ಕೂಡ ಅವರ ತಂದೆ ನಾರಾಯಣರಾವ ಪಾಥ್ರೀಕರರೇ ಧನ ಸಂಗ್ರಹಿಸಿ ಕಟ್ಟಿಸಿದ್ದಾರೆ. ಆ ವೃದ್ಧರ ಉತ್ಸಾಹ ನೋಡಿ ನಾನು ಬೆರಗಾದೆ. ವಿಷ್ಣುಸಹಸ್ರನಾಮದ ಹಿರಿಮೆಯ ಬಗ್ಗೆ ಅವರಿಗೆ ಹೇಳಿದೆ. ನಮಗೆ ಒಂದು ಚಾರ್ಟ್ ಕಳಿಸಿಕೊಡಿರಿ ಎಂದು ಕೇಳಿದರು.
ವಿಲಾಸರಾವ ದೇಶಪಾಂಡೆಯವರ ಬಂಧುಬಳಗ ದೊಡ್ದ ಸಂಖ್ಯೆಯಲ್ಲಿ ಅವರ ಮನೆಯಲ್ಲಿ ಸೇರಿದ್ದರು. ಅವರು ನನ್ನನ್ನು ಬೀಳ್ಕೊಡುವ ಮೊದಲು ನನ್ನ ವಿಶೇಷ ಆಸಕ್ತಿಯ ವಿಷಯದ ಬಗ್ಗೆ, ಯೋಗದ ಬಗ್ಗೆ, ಮಾತಾಡಿದೆ. ಮುದ್ರೆಗಳ ಚಾರ್ಟ್ ಹಂಚಿದೆ. ಪ್ರಾಣಾಯಾಮದ ಮಹತ್ವದ ಬಗ್ಗೆ ಹೇಳಿದೆ. ಶುದ್ಧಿಕ್ರಿಯೆಯ ಬಗ್ಗೆ ತಿಳಿಸಿದೆ. ಜಲನೇತಿಯನ್ನು ಉತ್ಸಾಹಿ ತರುಣರಿಗೆ ಪ್ರಾತ್ಯಕ್ಷಿಕೆ ನೀಡಿ ಕಲಿಸಿದೆ. ಪರಭಣಿಯ ಪ್ರವಾಸ ಅವಿಸ್ಮರಣೀಯವಾಗಿತ್ತು. ವಿಷ್ಣುಸಹಸ್ರನಾಮದ ಪೂರ್ಣ ಚಾರ್ಟ್ ಇಲ್ಲಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications