‘ಸಂಬಂಧಗಳು’ ಸರಳವಾಗಿದಿದ್ದರೆ ಚೆನ್ನಾಗಿರುತ್ತಿತ್ತು!
ಲೇಖನ ಲೈಟಾದ್ರೆ ಹೇಗೆ? ಅನ್ನೋದು ಒಂದು ವಾದ. ತೀರಾ ಗಂಭೀರವಾದ್ರೆ ಓದೋರ್ ಯಾರು ಅನ್ನೋದು ಇನ್ನೊಂದು ವಾದ. ಅದೇನೆ ಇರಲಿ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಭರತ್ ಎನ್. ಎಸ್. ಶಾಸ್ತ್ರಿ, ನ್ಯೂಯಾರ್ಕ್
ಮಾನ್ಯ ಸಂಪಾದಕರಿಗೆ,
ಜಯರಾಮ ಉಡುಪರ 'ಸಂಬಂಧಗಳು ಅಂದರೆ.." ಓದಿದೆ.
ಕನ್ನಡದಲ್ಲಿ ಇಷ್ಟು ಸಂಕೀರ್ಣ ವಿಷಯದ ಬಗ್ಗೆ ಇಷ್ಟೊಂದು ವಿವರವಾದ ಪ್ರಬಂಧಗಳು ಕಡಿಮೆಯೆನ್ನಬಹುದು. ಅದೂ ಸಾಮಾನ್ಯ ಓದುಗರಿಗೆ ತುಸು ಹೆಚ್ಚೇ ಎನ್ನಿಸಬಹುದಾದ ವಿಶ್ಲೇಷಣೆಗಳನ್ನು ಒಳಗೊಂಡ ಲೇಖನಗಳು ಇನ್ನೂ ಕಡಿಮೆ. ಇಂತಹದರಲ್ಲಿ, ಜಯರಾಮ ಉಡುಪರ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ.
ಲೇಖನದ ಸ್ಫೂರ್ತಿ ಬಹುಶಃ ಒಂದು ಆಂಗ್ಲ ಲೇಖನವಿರಬಹುದೆಂಬ ಅನುಮಾನವಿದೆ. ಕೆಲವೊಂದೆಡೆ ಅನುವಾದದ ಪ್ರಯತ್ನದಲ್ಲಿ ಸೂಕ್ತ ಪದದ ಆಯ್ಕೆಯಲ್ಲಿ ಪ್ರಯಾಸಪಡುವುದು ಅಥವಾ ಸೋತಿರುವುದು ಎದ್ದು ಕಾಣುತ್ತದೆ.
ಕೆಲವೊಂದೆಡೆ ಪದಗಳ ಯಥಾವತ್ ಅನುವಾದ ಪ್ರಬಂಧದ ಜಟಿಲತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, agreement ಎಂಬ ಪದವನ್ನು 'ಸಮತ" ಎಂದು ಭಾಷಾಂತರಿಸಿರುವುದು ಅಷ್ಟು ಸರಿಕಾಣುವುದಿಲ್ಲ. ಸಮ್ಮತಿ ಅಥವಾ ಸಹಮತ ಎಂಬ ಪದ ಹೆಚ್ಚು ಯೋಗ್ಯವೆನ್ನಿಸಿಕೊಳ್ಳುತ್ತಿತ್ತು. ಜಟಿಲತೆ ಎಂಬ ಪದ 'ಜಿಡುಕು" ಎಂಬ ಪ್ರಯೋಗಕ್ಕಿಂತ ಹೆಚ್ಚು ಅರ್ಥಪೂರ್ಣವೆನ್ನಿಸುತ್ತಿತ್ತು.
ಹಾಗೆಯೇ dynamics of relation ಎಂಬ 'ಫ್ರೇಸ್" 'ಸಂಬಂಧದ ಗತಿರೂಪ" ವಾದಲ್ಲಿ ಅನುವಾದದ ಛಾಯೆ ಎದ್ದು ಕಾಣುತ್ತದೆ. ಕನಿಷ್ಠ ಪಕ್ಷ 'ಬಿಬ್ಲಿಯೋಗ್ರಫಿ" ಆಗಿಯಾದರೂ ಪ್ರಬಂಧದ ಮೂಲವನ್ನು ಹೆಸರಿಸಿದ್ದಲ್ಲಿ ಹೆಚ್ಚು ಸಮಂಜಸವಾಗುತ್ತಿತ್ತು.
ಹೀಗಿದ್ದರೂ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಪೂರಕ ಓದಿಗೆ-
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications