ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಹಬ್ಬಕ್ಕೆ ಬೆಂಗಳೂರು-ಉಡುಪಿ-ಕಾರವಾರಕ್ಕೆ ವಿಶೇಷ ರೈಲು

|
Google Oneindia Kannada News

ಬೆಂಗಳೂರು, ಸೆ 29: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಕಾರವಾರದವರೆಗೆ ವಿಸ್ತರಿಸಲಾಗಿದೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರ ಜನರಿಗೆ ಸಹಾಯಕವಾಗುವಂತೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ

ದಸರಾ ಹಬ್ಬದ ಸಮಯದಲ್ಲಿ ಬಸ್ ದರಗಳಲ್ಲಿ ಅತೀವ ಏರಿಕೆಯಾಗಿರುವುದರಿಂದ, ಉಡುಪಿ-ಕುಂದಾಪುರ ಭಾಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು.

Dasara Special Train From Bengaluru - Mangaluru, Extended Upto Karwar

ಸಂಸದರ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.

ಬೆಂಗಳೂರು-ಕಾರವಾರ:
ದಿನಾಂಕ: 04.10.19, ರಾತ್ರಿ 10:20ಕ್ಕೆ
ದಿನಾಂಕ: 07.10.19, ರಾತ್ರಿ 11:55ಕ್ಕೆ

ಕಾರವಾರ-ಬೆಂಗಳೂರು:
ದಿನಾಂಕ: 05:10:19 ಸಂಜೆ 5:00ಕ್ಕೆ
ದಿನಾಂಕ: 08:10:19 ಸಂಜೆ 5:00ಕ್ಕೆ

ಕ್ಷೇತ್ರದ ಜನತೆ ಈ ಎರಡೂ ರೈಲಿನ ಸೇವೆಯ ಸದುಪಯೋಗ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.

English summary
Dasara Special Train From Bengaluru - Mangaluru, Extended Upto Udupi, Karwar. Thanks to MP Shobha Karandlaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X