ಹುಟ್ಟು ಹೋರಾಟಗಾರ ಜಾರ್ಜ್ ನಡೆದು ಬಂದ ದಾರಿ, ಸಾಧನೆ
ಮಂಗಳೂರು, ಜನವರಿ 29: ಬೆಂಕಿಯಂತಹ ಮಾತುಗಾರಿಕೆಯ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ. ಬೆಂಕಿ ಚೆಂಡು ತಣ್ಣಗಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಇಂದು ಮುಂಜಾನೆ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಅಲ್ಝಮೈರ್ ಕಾಯಿಲೆಯಿಂದ ಬಳಲುತ್ತಿದ್ದರು.
ಕರಾವಳಿಯ ಮಣ್ಣಿನ ಮಗ ಜಾರ್ಜ್ ಫರ್ನಾಂಡಿಸ್ ಮಂಗಳೂರಿನ ಬಿಜೈ ಕಾಪಿಕಾಡ್ ನಲ್ಲಿ ಹುಟ್ಟಿ ಬೆಳೆದರು. ಸೈಂಟ್ ಅಲೋಶಿಯಸ್ ನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ ಬಳಿಕ ಜಾರ್ಜ್ ಅವರನ್ನು ಅವರ ಹೆತ್ತವರು ಧಾರ್ಮಿಕ ಶಿಕ್ಷಣ ಪಡೆಯಲು ಬೆಂಗಳೂರಿನ ಸೈಂಟ್ ಪೀಟರ್ಸ್ ಸೆಮಿನರಿಗೆ ಸೇರಿಸಿದ್ದರು. ಆದರೆ ಹುಟ್ಟು ಹೋರಾಟಗಾರ ಜಾರ್ಜ್ ತುಳಿದ ಹಾದಿಯೇ ಬೇರೆ.
Breaking News: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ
ಸೆಮಿನರಿಗೆ ಗುಡ್ ಬೈ ಹೇಳಿ ಕಾರ್ಮಿಕ ಚಳುವಳಿಗೆ ಧುಮುಕಿದರು. ಕರಾವಳಿಯ ನಾಯಕರು ಸ್ವಕ್ಷೇತ್ರದಲ್ಲೇ ಮಿಂಚಿದರೆ ಜಾರ್ಜ್ ದೂರದ ಮುಂಬೈ , ಬಿಹಾರದಲ್ಲಿ ತನ್ನ ಸಾಮರ್ಥ್ಯ ಮೆರೆದರು. 9 ಬಾರಿ ಸಂಸತ್ ಪ್ರವೇಶಿಸಿ , ರೈಲ್ವೆ , ರಕ್ಷಣಾ ಸಚಿವರಾಗಿ ಮೆರೆದ ಜಾರ್ಜ್ ಹುಟ್ಟೂರನ್ನು ಮರೆಯಲಿಲ್ಲ. ಕೊಂಕಣ್ ರೈಲ್ವೆ ಯೋಜನೆ ಅವರು ಕರಾವಳಿಗೆ ನೀಡಿದ ಶಾಸ್ವತ ಕೊಡುಗೆ.

ಜಾರ್ಜ್ ಒಬ್ಬ ಅದ್ಭುತ ಸಂಸದೀಯ ಪಟು. ಸಮಾಜವಾದದ ನಾನಾ ನಮೂನೆಗಳನ್ನು ಕೂಡಿ ಕಳೆದು ಜನಮುಖಿಯಾಗಿ ಯೋಚಿಸುವ ಸ್ವತಂತ್ರಜೀವಿ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ನೇತೃತ್ವದ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ ನಂತರ ಜೈಲುವಾಸಿಯಾಗಿ ಅಲ್ಲಿಂದಲೇ ಚುನಾವಣೆಯನ್ನು ಗೆದ್ದು ಲೋಕಸಭೆಗೆ ಆರಿಸಿ ಬಂದ ಕೀರ್ತಿ ಅವರದ್ದು.

ಯುದ್ಧವಿಮಾನದಲ್ಲಿ ಪ್ರಯಾಣ ಮಾಡಿದ ಮೊದಲ ರಕ್ಷಣಾ ಸಚಿವ ಎಂಬ ಕೀರ್ತಿಯೂ ಅವರದು. ಇದೆಲ್ಲಕ್ಕಿಂತ ಮಿಗಲಾಗಿ ವೈಚಾರಿಕತೆಗೆ ಕುರುಡಾಗದೆ ರಾಜಕೀಯ ಅಸ್ಪೃಶ್ಯತೆಗೆ ಶರಣಾಗದೇ 1998 ರಲ್ಲಿ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ಡಿಎ ಸರ್ಕಾರ ರಚನೆಗೆ ಪರಿಣಾಮಗಳನ್ನು ಲೆಕ್ಕಿಸದೆ ಜನತಾದಳ ಬೇಷರತ್ ಬೆಂಬಲಿಸುವಂತೆ ನೋಡಿಕೊಂಡ ಮುಕ್ತ ಚಿಂತನೆಯ ರಾಜಕಾರಣಿಯ ಗುಣ ಈಗಿನ ಕಾಲಕ್ಕೆ ಮಾದರಿ. ಆದರೆ, ಈಗ ಅವರದು ಮಹಾಮೌನದ ಮೂಲಕವೇ ಮಾತು.
-
Asha Bhosle: ಆಶಾ ಭೋಸ್ಲೆಗೆ 16ನೇ ವರ್ಷದಲ್ಲೇ ಮದುವೆ, 2ನೇ ಮದುವೆಯಲ್ಲೂ ಸಂಕಷ್ಟ - ಕಾರಣವೇನು -
Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ












Click it and Unblock the Notifications