'ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ, ಗೆಲ್ಲುವ ವಿಶ್ವಾಸವಿದೆ'
ಮಂಗಳೂರು, ಡಿಸೆಂಬರ್ 14 : 'ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ಕಾರ್ಯಕರ್ತರು ನನ್ನ ಜೊತೆಗಿದ್ದು ಗೆಲ್ಲುವ ವಿಶ್ವಾಸವಿದೆ' ಎಂದು ಉಡುಪಿ-ದಕ್ಷಿಣ ಕನ್ನಡ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಸೋಮವಾರ
ಮಂಗಳೂರಿನಲ್ಲಿ
ಒನ್
ಇಂಡಿಯಾ
ಕನ್ನಡದ
ಜೊತೆ
ಮಾತನಾಡಿದ
ಅವರು,
'
ತಮ್ಮನ್ನು
ಪಕ್ಷದಿಂದ
ಉಚ್ಚಾಟನೆ
ಮಾಡುವ
ಬಗ್ಗೆ
ಯಾವುದೇ
ನೋಟಿಸ್
ಬಂದಿಲ್ಲ,
ಪಕ್ಷದ
ವರಿಷ್ಠರು
ಯಾವುದೇ
ಮಾತುಕತೆ
ನಡೆಸಿಲ್ಲ.
ತನ್ನನ್ನು
ಉಚ್ಚಾಟನೆಗೆ
ಶಿಫಾರಸು
ಮಾಡಿದರೆ
ತಾನೇನೂ
ಮಾಡುವ
ಹಾಗಿಲ್ಲ'
ಎಂದರು.
[ಕಾಂಗ್ರೆಸ್
ಬಂಡಾಯ
ಅಭ್ಯರ್ಥಿಗಳ
ಉಚ್ಚಾಟನೆ?]
'ಇದುವರೆಗೆ ಕಾಂಗ್ರೆಸ್ನ ಕಟ್ಟಾ ಕಾರ್ಯಕರ್ತನಾಗಿ ದುಡಿದಿದ್ದೇನೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ, ಅನ್ನುವವರಿಗೆ ಪಕ್ಷವೇ ಕರೆದು ಟಿಕೆಟ್ ನೀಡುತ್ತದೆ. ಇದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಪಕ್ಷದ ತಂತ್ರಗಾರಿಕೆಯಲ್ಲವೇ?' ಎಂದು ಪ್ರಶ್ನಿಸಿದರು. [ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]
'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯವಾಗಿ ಚುನಾವಣೆಗೆ ನಿಂತವರನ್ನು ಮತ್ತೆ ಕಾಂಗ್ರೆಸ್ ಕರೆದು ಅವರಿಗೆ ಸ್ಥಾಯಿ ಸಮಿತಿಯಲ್ಲಿ ಸ್ಥಾನಮಾನ ನೀಡಿದ್ದಾದರೂ ಹೇಗೆ?' ಎಂದು ಕೇಳಿದ್ದಾರೆ. [ಕೊರ್ಗಿ ಜಯಪ್ರಕಾಶ್ ಹೆಗ್ಡೆ ವ್ಯಕ್ತಿ ಪರಿಚಯ]
ನಾವೀಗ ಫ್ರೀ ಬರ್ಡ್ : ಉಡುಪಿ-ದಕ್ಷಿಣ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹರಿಕೃಷ್ಣ ಬಂಟ್ವಾಳ್ ಅವರು ನಾವೀಗ ಫ್ರೀ ಬರ್ಡ್ ಎಂದು ಹೇಳಿದ್ದಾರೆ. ಹರಿಕೃಷ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಹೈಕಮಾಂಡ್ಗೆ ಶಿಫಾರಸು ಮಾಡಿದ್ದಾರೆ.
ಒನ್ ಇಂಡಿಯಾ ಜೊತೆ ಮಾತನಾಡಿದ ಹರಿಕೃಷ್ಣ ಅವರು, 'ತಾವೀಗ ಫ್ರೀಬರ್ಡ್, ಹಾಗಾಗಿ ಪಕ್ಷದ ಯಾವುದೇ ನಿಬಂಧನೆಗೊಳಗಾಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದೇ ಗೆಲ್ಲುವುದಕ್ಕಾಗಿ' ಎಂದು ಹೇಳಿದ್ದಾರೆ. 'ಕಾಂಗ್ರೆಸ್ನಲ್ಲಿ ಕೆಲವೇ ಕೆಲವು ನಾಯಕರು ತಾವೇ ಸುಪ್ರೀಂ ಎಂದು ಕೊಂಡಿದ್ದಾರೆ. ಈಗ ನಮ್ಮನ್ನು ಉಚ್ಚಾಟಿಸಲು ಮುಂದಾಗಿದ್ದಾರೆ. ಮುಂದೆ ಇದೇ ನಾಯಕರನ್ನು ಪಕ್ಷದ ಕಾರ್ಯಕರ್ತರು ಉಚ್ಚಾಟಿಸಲಿದ್ದಾರೆ' ಎಂದು ತಿಳಿಸಿದ್ದಾರೆ.