ಮಂಗಳೂರು: ಭಾನುವಾರ ನಡೆಯಲಿದೆ 'ಜಯ-ವಿಜಯ' ಕಂಬಳ
ಮಂಗಳೂರು, ಫೆಬ್ರವರಿ 09: ಇದೇ ಭಾನುವಾರ ನೇತ್ರಾವತಿ ನದಿ ತೀರದ ಜಪ್ಪಿನಮೊಗರು ಕಂಬಳ ಗದ್ದೆಯಲ್ಲಿ ಜಯ-ವಿಜಯ ಜೋಡುಕೆರೆ ಕಂಬಳ ಕೂಟ ಆಯೋಜಿಸಲಾಗಿದೆ.
ಜೆ. ಜಯಗಂಗಾಧರ ಶೆಟ್ಟಿ- ಮನ್ಕು ತೋಟ ಗುತ್ತು ಹಾಗೂ ನಾಡಾಜೆ ಗುತ್ತು, ಸ್ಮರಣಾರ್ಥ ಈ ಕಂಬಳ ನಡೆಯುತ್ತಿದ್ದು, ಇದು ಆರನೇ ವರ್ಷದ ಕಂಬಳ ಕೂಟ.
ಮಂಗಳೂರು ನಗರದ ಆಸುಪಾಸು ನಡೆಯುವ ಕೆಲವೇ ಕಂಬಳ ಕೂಟಗಳಲ್ಲಿ ಈ ಕಂಬಳ ಕೂಟವು ಅತ್ಯಂತ ಪ್ರಮುಖ ಎನ್ನಲಾಗುತ್ತದೆ. ತುಳುವರ ಹೆಮ್ಮೆ ಹಾಗೂ ಅವರ ಅಸ್ಮಿತೆಯ ಭಾಗವೂ ಕಂಬಳವನ್ನು ಉಳಿಸಲು ಈ ಪ್ರಯತ್ನವನ್ನು ಬಹಳ ವರ್ಷಗಳಿಂದಲೂ ಮಾಡಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಆಯೋಜಕರು.
ಭಾನುವಾರ ಫೆಬ್ರವರಿ 11ರಂದು ಹೊನಲು ಬೆಳಕಿನಲ್ಲಿ ಕಂಬಳ ನಡೆಯಲಿದೆ.
English summary
On Sunday in Mangaluru Netravati river bank some organizations organizing 6th year 'Jaya-Vijaya Kambala' (Buffalo Race).
Story first published: Friday, February 9, 2018, 13:21 [IST]