ಚಾಮರಾಜನಗರದಲ್ಲೊಂದು ವಿಚಿತ್ರ ಮೇಕೆಮರಿ ಜನನ
ಚಾಮರಾಜನಗರ, ಮೇ 11 : ಇತ್ತೀಚೆಗೆ ಪ್ರಕೃತಿ ವೈಚಿತ್ರ್ಯ ಅಚ್ಚರಿ ಮೂಡಿಸುತ್ತಿದೆ. ಮೇಕೆಗಳು ಮಗುವನ್ನು ಹೋಲುವ ಮರಿ ಸೇರಿದಂತೆ ಚಿತ್ರ ವಿಚಿತ್ರ ಮರಿಗಳಿಗೆ ಜನ್ಮ ನೀಡುತ್ತಿರುವುದು ಮಾಮೂಲಿಯಾಗಿದೆ.
ಆದರೂ ಇಂತಹ ವಿಚಿತ್ರ ಮರಿಗಳು ಜನಿಸಿದಾಗಲೆಲ್ಲಾ ಜನ ಅದರತ್ತ ಅಚ್ಚರಿಯ ನೋಟ ಬೀರುವುದು ಸಾಮಾನ್ಯ. ಇದೀಗ ಚಾಮರಾಜನಗರದ ಕೂಡ್ಲೂರು ಎಂಬ ಗ್ರಾಮದಲ್ಲಿ ರೈತರೊಬ್ಬರು ಸಾಕಿದ ಮೇಕೆ ವಿಚಿತ್ರ ಮರಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.
ಒಂದೇ ತಲೆ, ಒಂದು ದೇಹ, ಎಂಟು ಕಾಲು, ನಾಲ್ಕು ಕಿವಿ ಇರುವ ಮರಿ ಹುಟ್ಟುತ್ತಲೇ ಸಾವನ್ನಪ್ಪಿದೆ. ಈ ಮರಿ ವಿಚಿತ್ರವಾಗಿರುವುದರಿಂದ ಜನ ಇದನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದ್ದಾರೆ. [ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!]

ಕೂಡ್ಲೂರು ಗ್ರಾಮದ ನಂಜುಂಡಶೆಟ್ಟಿ ಎಂಬುವರು ಮೇಕೆಯನ್ನು ಸಾಕಿದ್ದು, ಈ ಮೇಕೆ ಇತರ ಮೇಕೆಗಳಂತೆ ಆರೋಗ್ಯವಾಗಿಯೇ ಇದೆ. ಇದನ್ನು ಬೂದಿತಿಟ್ಟು ಗ್ರಾಮದ ಜಮೀನಿನಲ್ಲಿ ಮೇಯಲು ಹೊಡೆದುಕೊಂಡು ಹೋಗಿದ್ದರು. ಆಗ ಅಲ್ಲಿಯೇ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ನಾಲ್ಕು ಮರಿಗಳ ಪೈಕಿ ಮೂರು ಮರಿಗಳು ಎಲ್ಲ ಮೇಕೆ ಮರಿಗಳಂತಿದ್ದರೆ ಒಂದು ಮಾತ್ರ ವಿಚಿತ್ರವಾಗಿತ್ತು. ಹತ್ತಿರ ಹೋಗಿ ನೋಡಿದ ನಂಜುಂಡಶೆಟ್ಟಿ ಅವರಿಗೆ ಅಚ್ಚರಿ ಕಾದಿತ್ತು. ಮರಿಗೆ ಒಂದೇ ದೇಹ, ತಲೆ ಇತ್ತಾದರೂ ಎಂಟು ಕಾಲು ನಾಲ್ಕು ಕಿವಿ ಕಾಣುತ್ತಿತ್ತು. ಆದರೆ ಮರಿ ಮಾತ್ರ ಅದಾಗಲೇ ಸತ್ತು ಹೋಗಿತ್ತು. [ಪ್ರತಿ ಶವಸಂಸ್ಕಾರಕ್ಕೆ ಹಾಜರಾಗುವ ಮೇಕೆಯ ವಿಶಿಷ್ಟ ಕಥೆ]
ತಾನು ಜನ್ಮ ನೀಡುತ್ತಲೇ ಮರಿ ಸತ್ತು ಹೋಗಿದೆ ಎಂಬ ಅರಿವಿಲ್ಲದ ತಾಯಿಮೇಕೆ ಅದನ್ನು ಮುದ್ದಿಸುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಜನ ಅಲ್ಲಿಗೆ ಕುತೂಹಲದಿಂದ ಬರತೊಡಗಿದರು. ಕೆಲವರು ಕಲಿಗಾಲ ಏನು ಬೇಕಾದರೂ ನಡೆಯಬಹುದು ಎಂದು ಮಾತಾಡಿಕೊಂಡರು. ಒಟ್ಟಿನಲ್ಲಿ ಪ್ರಕೃತಿ ವೈಚಿತ್ರ್ಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ವಿಚಿತ್ರ ಮೇಕೆ ಮರಿ ಸಾಕ್ಷಿ ಎಂದರೆ ತಪ್ಪಾಗಲಾರದು. [ಸ್ಟಾರ್ ಬಕರಾ ಮಾಲಿಕರ ಖುಲಾಯಿಸಿದ ಅದೃಷ್ಟ]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications