ವಿ ಎಸ್ ಉಗ್ರಪ್ಪನವರಿಗೆ ಭಕ್ತರ ಬೆದರಿಕೆ: ಮಠದ ಸ್ಪಷ್ಟೀಕರಣ
ವಿ ಎಸ್ ಉಗ್ರಪ್ಪನವರಿಗೆ ರಾಮಚಂದ್ರಾಪುರ ಮಠದ ಭಕ್ತರು ಬೆದರಿಕೆ ಒಡ್ಡಿದ್ದಾರೆ, ಇದರ ಜೊತೆಗೆ ಫೇಸ್ಬುಕ್ನಲ್ಲಿ ಕೂಡಾ ವೈಯಕ್ತಿಕವಾಗಿ ದಾಖಲಿಸಿದ ಟೀಕೆ, ಟಿಪ್ಪಣಿಗಳಿಗೆ ಮಠ ಸ್ಪಷ್ಟೀಕರಣ ನೀಡಿದ್ದು ಇದೊಂದು ಆಧಾರ ರಹಿತ ಎಂದು ಹೇಳಿದೆ.
ಬೆಂಗಳೂರು, ಡಿ 22: ವಿ ಎಸ್ ಉಗ್ರಪ್ಪನವರಿಗೆ ರಾಮಚಂದ್ರಾಪುರ ಮಠದ ಭಕ್ತರು ಬೆದರಿಕೆ ಒಡ್ಡಿದ್ದಾರೆ ಎನ್ನುವ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗೆ ಮಠ ಗುರುವಾರ (ಡಿ 22) ಸ್ಪಷ್ಟೀಕರಣ ನೀಡಿದೆ.
ಇದರ ಜೊತೆಗೆ ಫೇಸ್ಬುಕ್ನಲ್ಲಿ ಕೂಡಾ ವೈಯಕ್ತಿಕವಾಗಿ ದಾಖಲಿಸಿದ ಟೀಕೆ, ಟಿಪ್ಪಣಿಗಳಿಗೆ ಮಠ ಸ್ಪಷ್ಟೀಕರಣ ನೀಡಿದ್ದು, ಶ್ರೀಮಠ ಹಾಗೂ ಶ್ರೀಮಠದ ಭಕ್ತರು ಯಾರಿಗೂ ಯಾವುದೇ ರೀತಿಯ ಜೀವಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಆ ರೀತಿ ಕೆಲಸಗಳಿಗೆ ಶ್ರೀಮಠವಾಗಲೀ, ಶ್ರೀಮಠದ ವ್ಯವಸ್ಥೆಗಳಾಗಲಿ ಯಾವತ್ತೂ ಪ್ರೇರಣೆಯನ್ನೂ ನೀಡಿರುವುದಿಲ್ಲ, ನೀಡುವುದೂ ಇಲ್ಲ. (ರಾಮಚಂದ್ರಾಪುರ ಮಠದ ಆಡಳಿತಕ್ಕೆ ಐಎಸ್ಓ)

ಶ್ರೀಗಳು, ಶ್ರೀಮಠ ಹಾಗೂ ಶ್ರೀಮಠದ ವ್ಯವಸ್ಥೆ ಮತ್ತು ಭಕ್ತರು - ಎಲ್ಲರೂ ಈ ದೇಶದ ಸಂವಿಧಾನ ಮತ್ತು ಕಾನೂನಿ ಚೌಕಟ್ಟಿನಲ್ಲಿಯೇ ವ್ಯವಹರಿಸುತ್ತಾರೆಯೇ ಹೊರತು, ಮೌಖಿಕವಾಗಿಯೋ, ಲಿಖಿತರೂಪದಲ್ಲಿಯೋ ಜೀವಬೆದರಿಕೆ ಒಡ್ಡುವ ಕೆಲಸವನ್ನು ಮಾಡುವುದಿಲ್ಲ ಎಂದು ಈ ಮಠ ಸ್ಪಷ್ಟನೆ ನೀಡಿದೆ.
ಈ ಹಿಂದೆಯೂ ಶ್ರೀಮಠದ ಭಕ್ತರ ಮೇಲೆ ಇಂತಹ ಆರೋಪಗಳು ಬಂದಿದ್ದವು. ಆದರೆ, ಅವೆಲ್ಲ ನಿರಾಧಾರ ಎಂಬುದು ಆನಂತರದ ದಿನಗಳಲ್ಲಿ ಸಾಬೀತಾಗಿದೆ.
ಈ ಪ್ರಕರಣದಲ್ಲೂ ಶ್ರೀಮಠದ ವಿರುದ್ಧದ ಸದರಿ ಆರೋಪವೂ ಸತ್ಯಕ್ಕೆ ದೂರವಾದುದು. ಮಾನ್ಯ ಉಗ್ರಪ್ಪ ಅವರಿಗೆ ಜೀವಬೆದರಿಕೆ ಒಡ್ಡಿದ ಪ್ರಕರಣದ ತನಿಖೆಗೆ ಸರಕಾರ ಆದೇಶಿಸುವುದಾದರೆ ಅದನ್ನೂ ಶ್ರೀಮಠ ಸ್ವಾಗತಿಸುತ್ತದೆ ಎಂದು ರಾಮಚಂದ್ರಾಪುರ ಮಠ, ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications