ಎಸಿಗೆ ಜನನ, ಮರಣ ನೋಂದಣಿ ವ್ಯಾಜ್ಯ ಇತ್ಯರ್ಥ ಅಧಿಕಾರಕ್ಕೆ ಹೈಕೋರ್ಟ್ ಬ್ರೇಕ್
ಬೆಂಗಳೂರು, ಆ.25: ನ್ಯಾಯಾಂಗದ ಅಧಿಕಾರ ಕಸಿದುಕೊಂಡು ಜನನ ಮತ್ತು ಮರಣ ನೋಂದಣಿ ವ್ಯಾಜ್ಯಗಳ ತೀರ್ಮಾನ ಅಧಿಕಾರವನ್ನು ಎಸಿಗೆ ನೀಡಿದ್ದ ಸರ್ಕಾರ ಆದೇಶಕ್ಕೆ ಹಿನ್ನಡೆಯಾಗಿದೆ.
ಏಕೆಂದರೆ ಉಪವಿಭಾಗಾಧಿಕಾರಿಗೆ ಅಧಿಕಾರ ನೀಡಿ ಸರ್ಕಾರ ಮಾಡಿದ್ದ ತಿದ್ದುಪಡಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಲ್ಲದೆ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಯೋಜನೆ ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖಿಕ ಇಲಾಖೆ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಬೀದರ್ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದರ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ಮಾಡಿ, ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು.
ಕಾನೂನು ಬಾಹಿರ: ಅರ್ಜಿದಾರರ ಪರ ವಕೀಲರು, ವಿಭಾಗಾಧಿಕಾರಿಗೆ ನ್ಯಾಯಾಂಗದ ಅಧಿಕಾರ ನೀಡಿರುವುದು ಕಾನೂನುಬಾಹಿರ. ಇದರಿಂದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವುದಲ್ಲದೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಹಾಗಾಗಿ ಸಂವಿಧಾನಬಾಹಿರವಾದ ಕ್ರಮಕ್ಕೆ ತಡೆ ನೀಡಬೇಕು ಎಂದು ನ್ಯಾಯಾಲಯವನ್ನು ಎಂದರು.
ಅಲ್ಲದೆ,
ಕೇಂದ್ರದ
ಕಾಯ್ದೆಗೆ
ವಿರುದ್ಧವಾಗಿ
ನಿಯಮಕ್ಕೆ
ತಿದ್ದುಪಡಿ
ಮಾಡುವ
ಮೂಲಕ
ಕೋರ್ಟ್ಗಳ
ಅಧಿಕಾರ
ಮೊಟಕುಗೊಳಿಸಿ
ಎಸಿಗೆ
ನೀಡಲಾಗಿದೆ.ಇದು
ಕಾನೂನು
ಬಾಹಿರ
ಹಾಗೂ
ಸಂವಿಧಾನದ
ಮೂಲಭೂತ
ತತ್ವಗಳಿಗೆ
ವಿರುದ್ಧವಾದುದು.
ಸಂವಿಧಾನದ
ಪ್ರಕಾರ,
ಜನನ
ಮತ್ತು
ಮರಣ
ವ್ಯಾಜ್ಯಗಳನ್ನು
ಇತ್ಯರ್ಥಪಡಿಸುವ
ಅಧಿಕಾರ
ಜೆಎಂಎಫ್ಸಿ
ನ್ಯಾಯಾಲಯಕ್ಕೆ
ಮಾತ್ರವಿದೆ.
ರಾಜ್ಯ
ಸರ್ಕಾರಕ್ಕೆ
ತಿದ್ದುಪಡಿ
ಮಾಡುವ
ಅಧಿಕಾರವೇ
ಇಲ್ಲ
ಎಂದು
ಹೇಳಿದರು.
ವಕೀಲರ
ಪ್ರಬಲ
ವಿರೋಧ:
ಜನನ
ಮತ್ತು
ಮರಣ
ನೋಂದಣಿ
ಪ್ರಕರಣಗಳನ್ನು
ನ್ಯಾಯಾಲಯಗಳಿಂದ
ಉಪವಿಭಾಗಾಧಿಕಾರಿಗೆ
ವರ್ಗಾಯಿಸುವ
ಸರಕಾರದ
ಕ್ರಮ
ಕಾನೂನಬಾಹಿರವಾಗಿದೆ.
ಜತೆಗೆ
ಕರ್ನಾಟಕ
ಜನನ
ಮತ್ತು
ಮರಣ
(ತಿದ್ದುಪಡಿ)
ನಿಯಮ-2022
ತಿದ್ದುಪಡಿ
ಮೂಲ
ಕಾಯಿದೆಗೆ
ವಿರುದ್ಧವಾಗಿದೆ.
ಈ
ಕುರಿತು
ಜು.18ರಂದು
ಹೊರಡಿಸಿರುವ
ತಿದ್ದುಪಡಿ
ಅಧಿಸೂಚನೆ
ಕೂಡಲೇ
ವಾಪಸ್
ಪಡೆಯಬೇಕು
ಎಂದು
ಆಗ್ರಹಿಸಿದ್ದರು.
ತಿದ್ದುಪಡಿಯಿಂದ ವೃತ್ತಿಪರ ವಕೀಲರಿಗೆ ತೊಂದರೆಯಾಗಲಿದ್ದು, ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷ ನ್ 13(3)ರಡಿ ಪ್ರಥಮ ದರ್ಜೆ ಮ್ಯಾಜಿಸ್ಪ್ರೇಟ್ ಅಥವಾ ಪ್ರೆಸಿಡೆನ್ಸಿ ಮ್ಯಾಜಿಸ್ಪ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರವಿಲ್ಲ. ಕಾಯಿದೆ ಸೆಕ್ಷ ನ್ 13(3) ರ ಅನ್ವಯ ಪ್ರೆಸಿಡೆನ್ಸ್ ಮ್ಯಾಜಿಸ್ಪ್ರೇಟ್ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಪ್ರೇಟ್ಗೆ ಮಾತ್ರ ಅಧಿಕಾರವಿತ್ತು. ಮೂಲ ಕಾಯಿದೆಗೆ ವಿರುದ್ಧವಾಗಿ ತಿದ್ದುಪಡಿ ಮಾಡಿ ಈಗ ಆ ಅಧಿಕಾರವನ್ನು ಉಪವಿಭಾಗಾಧಿಕಾರಿ ಅಥವಾ ಉಪ ಪ್ರಾದೇಶಿಕ ಮ್ಯಾಜಿಸ್ಪ್ರೇಟ್ಗೆ ನೀಡಲಾಗಿದೆ. ಈ ತಿದ್ದುಪಡಿ ಕಾಯಿದೆಯು ಕಾನೂನು ಬಾಹಿರವಾಗಿರುವುದರಿಂದ ಕೂಡಲೇ ಅದನ್ನು ವಾಪಸ್ ಪಡೆಯಬೇಕು ಎಂದು ವಕೀಲರ ಸಂಘ ಕಾನೂನು ಕಾರ್ಯದರ್ಶಿಗೆ ಪತ್ರ ಬರೆದಿತ್ತು.
ತಿದ್ದುಪಡಿಯನ್ನು ಬೆಂಗಳೂರು ವಕೀಲರ ಸಂಘ ಸೇರಿ ರಾಜ್ಯದ ಎಲ್ಲವಕೀಲ ಸಂಘಟನೆಗಳು ವಿರೋಧಿಸಿ, ಪ್ರತಿಭಟನೆ ನಡೆಸಿದ್ದವು.