ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಜೀವಕ್ಕೆ ಕುತ್ತು!
ಮೆಕ್ಸಿಕೋ, ಆಗಸ್ಟ್ 30: ಮುತ್ತಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಮತ್ತೂ ಮುಂದುವರಿದರೆ ಜೀವಕ್ಕೆ ಕುತ್ತು. ಅರೇ ಇದೇನು? ಹೀಗೆ ಹೇಳ್ತಾ ಇದ್ದಾರಲ್ಲಾ ಎಂದು ಆಶ್ಚರ್ಯಪಡಬೇಕಿಲ್ಲ.
ಮೆಕ್ಸಿಕೋದ ಹದಿಹರೆಯದ ಯುವಕನೊಬ್ಬ 'ಲವ್ ಬೈಟ್' ಗೆ ಬಲಿಯಾಗಿದ್ದಾನೆ. ತನ್ನ ಗೆಳತಿಯಿಂದ ಪಡೆದುಕೊಂಡ ದೀರ್ಘ ಚುಂಬನ ಪರಿಣಾಮ ಮೆದುಳಿಗೆ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ.[ಮಲಗಿದ್ದ ಮಹಿಳೆ ಕೆನ್ನೆ ಕಚ್ಚಿ ಪರಾರಿಯಾದವ ಸಿಕ್ಕಿಬಿದ್ದ]

ಬ್ರಿಟನ್ ಪತ್ರಿಕೆ ಒಂದು ವರದಿ ಮಾಡಿರುವಂತೆ, 17 ವರ್ಷದ ಜುಲಿಯೋ ಮಿಕಾಸ್ ಗೆಳತಿಯೊಂದಿಗೆ ಸಂಜೆ ಕಳೆದಿದ್ದಾನೆ. ಇದಾದ ಮೇಲೆ ತನ್ನ ಕುಟುಂಬದವರೊಂದಿಗೆ ಊಟ ಮಾಡಲು ಕುಳಿತಿದ್ದಾನೆ.[ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ']
ಇದ್ದಕ್ಕಿದ್ದಂತೆ ಆತನ ಆರೋಗ್ಯದಲ್ಲಿ ಏರು ಪೇರಾಗಿದೆ. ಕುತ್ತಿಗೆ ಭಾಗದಲ್ಲಿ ಸೆಳೆತ ಆರಂಭವಾಗಿದೆ. ತಕ್ಷಣ ವೈದ್ಯಕೀಯ ಪರೀಕ್ಷೆಗೆ ಕ್ರಮ ತೆಗೆದುಕೊಂಡರು ಯುವಕ ಸಾವನ್ನಪ್ಪಿದ.[ಮಾತು ಮನೆ ಕೆಡಿಸಿತು, ಮುತ್ತು ಮದುವೆಯನ್ನೇ ಕೆಡಿಸಿತು!]
ಯುವಕನ ಸಾವಿಗೆ ಹುಡುಗಿ ಸ್ವಲ್ಪ ಅತಿಯಾದ ಪ್ರೀತಿಯಿಂದ ಕುತ್ತಿಗೆ ಮೇಲೆ ಕಚ್ಚಿದ್ದೆ ಕಾರಣ. ಕಚ್ಚುವಿಕೆಯ ಪರಿಣಾಮವೇ ಮೆದುಳಿನ ರಕ್ತ ಸಂಚಾರದಲ್ಲಿ ಹೆಚ್ಚು ಕಡಿಮೆ ಆಗಿದೆ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.[ಕಿಸ್ ಮಾಡುವುದು ಹೇಗೆ? ತಗೊಳ್ಳಿ ಟಿಪ್ಸ್..]
ಯುವಕನ ಸಾವಿನ ನಂತರ ಆತನ 24 ವರ್ಷದ ಗೆಳತಿ ನಾಪತ್ತೆಯಾಗಿದ್ದಾಳೆ. ಹುಡುಗನ ಸಾವಿಗೆ ಹುಡುಗಿಯೇ ಕಾರಣ ಎಂದು ಯುವಕನ ಪಾಲಕರು ಆರೋಪ ಮಾಡಿದ್ದಾರೆ.[ಕಿಸ್ ಆಫ್ ಕಿಲೋ ಗಟ್ಟಲೇ ಬ್ಯಾಕ್ಟೀರಿಯಾ...]
ಇಂಥದ್ದೆ ಒಂದು ಉದ್ರೇಕಕಾರಿ ಕಚ್ಚುವಿಕೆಯಿಂದ 2011 ರಲ್ಲಿ ನ್ಯೂಜಿಲೆಂಡ್ ನ 44 ವರ್ಷದ ಮಹಿಳೆ ಮೃತಪಟ್ಟಿದ್ದಳು. ಸದ್ಯ ಈ ಘಟನೆ ಎಲ್ಲ ಯುವ ಪ್ರೇಮಿಗಳಿಗೆ ಒಂದು ಎಚ್ಚರಿಕೆ ಘಂಟೆಯಾಗಿ ಪರಿಣಮಿಸಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications