ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಖಂಡದಲ್ಲಿ ಭೀಕರ ಬಸ್ ದುರಂತಕ್ಕೆ 22 ಬಲಿ
ಇಂದು ಸಂಜೆ ಉತ್ತರಾಖಂಡದ ಉತ್ತರಕಾಶಿ ಎಂಬಲ್ಲಿ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದ ಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಅಸುನೀಗಿದ್ದಾರೆ. 8 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಉತ್ತರಕಾಶಿ, ಮೇ 23: ಉತ್ತರಖಂಡದ ಉತ್ತರಕಾಶಿಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 22 ಜನ ಅಸುನೀಗಿದ್ದಾರೆ. ಇಂದು ಸಂಜೆ ವೇಳೆಗೆ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ.
ಇನ್ನು ಘಟನೆಯಲ್ಲಿ 8 ಜನ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿಗೀಡಾದವರೆಲ್ಲಾ ಮಧ್ಯಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಸಾವಿಗೀಡಾದವರ ಕುಟುಂಬಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ 1 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ಇನ್ನು ಸಾವಿಗೀಡಾದವರು ಮಧ್ಯಪ್ರದೇಶಕ್ಕೆ ಸೇರಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾವಿಗೀಡಾದವರ ಕುಟಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
English summary
A bus carrying 29 people from Uttarkashi to Gangotri falls into river on Tuesday. According to sources, so far 22 bodies have been recovered and 8 other who were injured were admitted to hospital. All were residents of Madhya Pradesh.
Story first published: Tuesday, May 23, 2017, 22:32 [IST]