ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಬ್ಬ ಭಾರತೀಯ ಸೈನಿಕ, ನಾಗರಿಕರನ್ನು ಸಾಯಿಸಿ ಕ್ರೌರ್ಯ ಮೆರೆದ ಪಾಕ್
ಪೂಂಛ್ (ಜಮ್ಮು-ಕಾಶ್ಮೀರ), ಅಕ್ಟೋಬರ್ 12: ಜಮ್ಮು-ಕಾಶ್ಮೀರದ ಪೂಂಛ್ ನ ಕೃಷ್ಣ ಘಾಟಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ ಒಬ್ಬ ಭಾರತೀಯ ಸೈನಿಕ ಮತ್ತು ನಾಗರಿಕನನ್ನು ಸಾಯಿಸಿ, ಕ್ರೌರ್ಯ ಮೆರೆದಿದೆ.
ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: 2 ಸೈನಿಕರು ಹುತಾತ್ಮ, 2 ಉಗ್ರರ ಹತ್ಯೆ
ಇಂದು(ಅಕ್ಟೋಬರ್ 12) ಬೆಳಿಗ್ಗೆ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಡಿನ ದಾಳಿ ಆರಂಭಿಸಿ ಈ ಕ್ರೌರ್ಯ ನಡೆಸಿದೆ.
ಭಾರತೀಯ ಸೇನೆ ಪಾಕಿಸ್ತಾನೀ ಸೈನಿಕರು ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನಿನ್ನೆ(ಅ.11) ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರೆ, ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿತ್ತು.
English summary
A soldier and civilian were killed on Thursday in ceasefire violation by Pakistan in Poonch's Krishna Ghati's sector in Jammu and Kashmir.
Story first published: Thursday, October 12, 2017, 16:28 [IST]