Amarnath Yatra 2023 Rules: ಭಕ್ತರಿಗೆ ಪ್ರಯಾಣದಲ್ಲಿ ಹೆಲ್ಮೆಟ್ ಕಡ್ಡಾಯ, ಹೊಸ ಬದಲಾವಣೆಗಳನ್ನು ತಿಳಿದುಕೊಳ್ಳಿ
ಕಾಶ್ಮೀರದಿಂದ ವಾರ್ಷಿಕ ಅಮರನಾಥ ಯಾತ್ರೆಯು ಜುಲೈ 1 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಮೊದಲ ಬ್ಯಾಚ್ ಜೂನ್ 30 ರಂದು ಜಮ್ಮುವಿನ ಭಗವತಿ ನಗರದಿಂದ ಪಹಲ್ಗಾಮ್ಗೆ ಹೊರಡಲಿದೆ. ಇದಕ್ಕಾಗಿ ಭಕ್ತರು ಕೂಡ ಜಮ್ಮು ತಲುಪಲು ಆರಂಭಿಸಿದ್ದಾರೆ.
ಇದು ಅತ್ಯಂತ ಕಷ್ಟಕರ ಮತ್ತು ಅಪರೂಪದ ಪ್ರಯಾಣ. ಆದ್ದರಿಂದ ಇದಕ್ಕಾಗಿ ಅತ್ಯಂತ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಬಾರಿಯ ಯಾತ್ರೆಯು ಜುಲೈ 1 ರಿಂದ ಆಗಸ್ಟ್ 31 ರವರೆಗೆ ನಡೆಯಲಿದ್ದು ಹೊಸ ನಿಯಮಗಳು ಜಾರಿಗೆ ತರಲಾಗಿದೆ. ಅಮರನಾಥ ಯಾತ್ರೆ ಮಾಡುವವರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಈ ಬಾರಿ 3.04 ಲಕ್ಷ ಭಕ್ತರು ಈ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಇದು ಕಳೆದ ಬಾರಿಗಿಂತ ಶೇಕಡಾ ಹತ್ತರಷ್ಟು ಹೆಚ್ಚಾಗಿದೆ. ಈ ಬಾರಿ ಸುಮಾರು ಐದು ಲಕ್ಷ ಜನ ಈ ಯಾತ್ರೆ ಕೈಗೊಳ್ಳುವ ನಿರೀಕ್ಷೆ ಇದೆ. ಈ ಬಾರಿ ಯಾತ್ರೆಗಾಗಿ ಮಾರ್ಗಗಳನ್ನು ವಿಸ್ತರಿಸಲಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕರು ಅನುಸರಿಸಬೇಕಾದ ಕೆಲವು ನಿಯಮಗಳನ್ನು ಸ್ಥಳೀಯ ಆಡಳಿತ ಜಾರಿಗೆ ತಂದಿದೆ. ಯಾತ್ರೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಆ ನಿಯಮಗಳು ಮತ್ತು ಬದಲಾವಣೆಗಳು ಯಾವುವು?
ಈ ಬಾರಿ ಯಾವುದೇ ಪ್ರಯಾಣಿಕರು ಬಾಬಾ ಬರ್ಫಾನಿಯ ಗುಹೆಯ ಬಳಿ ರಾತ್ರಿ ತಂಗುವಂತಿಲ್ಲ. ಪ್ರಯಾಣದ ವೇಳೆ ಎಲ್ಲೋ ಭೂಕುಸಿತವಾದರೆ ಅಲ್ಲಿ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯ. ವಿಶೇಷವೆಂದರೆ ಅಮರನಾಥ ಜೀ ಪುಣ್ಯಕ್ಷೇತ್ರ ಮಂಡಳಿಯು ಈ ಹೆಲ್ಮೆಟ್ ಅನ್ನು ಭಕ್ತರಿಗೆ ಉಚಿತವಾಗಿ ನೀಡಲಿದೆ. ಕಥುವಾದಲ್ಲಿ ಐಸ್ ಗುಹೆಯವರೆಗೆ ಅನೇಕ ಶಿಬಿರಗಳನ್ನು ಸ್ಥಾಪಿಸಲಾಗಿದೆ.
ಯಾತ್ರಿಕರು ಅಲ್ಲಿಯೇ ಇರಬೇಕಾಗುತ್ತದೆ. ಈ ಬಾರಿ ಯಾತ್ರಾ ಮಾರ್ಗದಲ್ಲಿ ಹಲವೆಡೆ ಕಂಬಿಗಳನ್ನು ಅಳವಡಿಸಲಾಗಿದ್ದು, ಇದರಿಂದ ಪ್ರಯಾಣಿಕರ ಪ್ರಯಾಣ ಸುಲಭವಾಗಲಿದೆ. ಈ ಬಾರಿ ಪ್ರಯಾಣದ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿದ್ದು, ಈ ಬಾರಿ ಸಿಆರ್ಪಿಎಫ್ ಬದಲಿಗೆ ಐಟಿಬಿಪಿ ಜವಾನರು ಪ್ರಯಾಣಿಕರ ರಕ್ಷಣೆ ಮತ್ತು ಸೇವೆಯಲ್ಲಿ ತೊಡಗಲಿದ್ದಾರೆ. ಅಮರನಾಥ ಯಾತ್ರೆಯನ್ನು 'ತಂಬಾಕು ಮುಕ್ತ ಯಾತ್ರೆ' ಎಂದು ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ಯಾರೂ ತಂಬಾಕು ಸೇವಿಸುವಂತಿಲ್ಲ.

ಮಾರ್ಗಸೂಚಿಗಳೇನು?
ಮೊದಲನೆಯದಾಗಿ ಪ್ರಯಾಣಕ್ಕಾಗಿ ವ್ಯಕ್ತಿಯು ದೈಹಿಕವಾಗಿ ಸದೃಢವಾಗಿರಬೇಕು. ನಿಮಗೆ ಅಸ್ತಮಾ, ಅಲರ್ಜಿ ಅಥವಾ ಯಾವುದೇ ಕಾಯಿಲೆಗೆ ನೀವು ದಿನನಿತ್ಯದ ಔಷಧಿಯನ್ನು ಸೇವಿಸಿದರೆ, ನೀವು ಅದನ್ನು ನೋಂದಣಿ ರೂಪದಲ್ಲಿ ನಮೂದಿಸಬೇಕಾಗುತ್ತದೆ. ಈ ಪ್ರಯಾಣ ನಂಬಿಕೆಯ ಮಾನದಂಡವಾಗಿದೆ. ಆದ್ದರಿಂದ ನೀವು ಅಪರೂಪದ ಸಂದರ್ಭಗಳಲ್ಲಿ ಸಹ ತಾಳ್ಮೆ ಕಳೆದುಕೊಳ್ಳಬಾರದು. ಶಿಬಿರಗಳಲ್ಲಿ ನಿಮ್ಮ ಸರಿಯಾದ ವಿಳಾಸ, ದೂರವಾಣಿ ಸಂಖ್ಯೆ ನೀಡುವುದರೊಂದಿಗೆ ನಿಮ್ಮ ಕುಟುಂಬದ ಸದಸ್ಯರ ಬಗ್ಗೆಯೂ ಸರಿಯಾದ ಮಾಹಿತಿ ನೀಡಬೇಕು.
ಮೋಕ್ಷಕ್ಕಾಗಿ ಅಮರನಾಥ ಯಾತ್ರೆ
ಪ್ರಾಚೀನ ಕಾಲದಲ್ಲಿ ಈ ಗುಹೆಯನ್ನು ಅಮರೇಶ್ವರ ಎಂದು ಕರೆಯಲಾಗುತ್ತಿತ್ತು. ಇವರ ದರ್ಶನದಿಂದ ವ್ಯಕ್ತಿ ಮೋಕ್ಷ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಜನರು ಕಾಶಿ ವಿಷ್ಣನಾಥ ದರ್ಶನದಿಂದ ಪಡೆಯುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಪುಣ್ಯವನ್ನು 'ಬರ್ಫಾನಿ ಬಾಬಾ'ನ ಭೇಟಿಯಿಂದ ಪಡೆಯುತ್ತಾರೆ ಎಂದು ನಂಬಲಾಗುತ್ತದೆ.
ಈ ಗುಹೆಯ ಕಥೆಯೂ ತುಂಬಾ ಆಸಕ್ತಿದಾಯಕವಾಗಿದೆ. ಮಧ್ಯಕಾಲೀನ ಕಾಲದವರೆಗೂ ಈ ಗುಹೆಯ ಬಗ್ಗೆ ಎಲ್ಲರಿಗೂ ತಿಳಿದಿತ್ತು ಎಂದು ನಂಬಲಾಗಿದೆ. ಆದರೆ ನಂತರ ಜನರು ಅದನ್ನು ಮರೆತು ಇಲ್ಲಿಗೆ ಬರುವುದನ್ನು ನಿಲ್ಲಿಸಿದರು. ಆದರೆ 15 ನೇ ಶತಮಾನದಲ್ಲಿ ಕುರುಬ ಬುಟ್ಟಾ ಮಲಿಕ್ (ಮುಸ್ಲಿಂ) ಈ ಬಗ್ಗೆ ತಿಳಿದುಕೊಂಡರು ಮತ್ತು ನಂತರ ಅವರು ಈ ಪವಿತ್ರ ಗುಹೆಯ ಬಗ್ಗೆ ಜನರಿಗೆ ತಿಳಿಸಿದರು ಮತ್ತು ನಂತರ ಜನರು ಇಲ್ಲಿಗೆ ಭೇಟಿ ನೀಡಲು ಬರಲು ಪ್ರಾರಂಭಿಸಿದರು.

'ಬರ್ಫಾನಿ ಬಾಬಾ' ಪ್ರಥಮ ಬಾರಿಗೆ ದರ್ಶನ
ಒಂದು ದಿನ ಬುಟ್ಟಾ ಮಲಿಕ್ ತನ್ನ ಕುರಿಗಳೊಂದಿಗೆ ಪರ್ವತಗಳಲ್ಲಿ ಅಲೆದಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವರು ಮಹಾತ್ಮನನ್ನು ಭೇಟಿಯಾದನೆಂದು ಹೇಳಲಾಗುತ್ತದೆ. ಬುಟ್ಟಾ ಅವರಿಗೆ ಕುಡಿಯಲು ನೀರು ಕೊಟ್ಟರು, ನಂತರ ಅವರು ಕುರುಬನಿಗೆ ಚೀಲವನ್ನು ನೀಡಿದರು ಮತ್ತು ಅದನ್ನು ಮನೆಗೆ ತೆಗೆದುಕೊಂಡು ಹೋದ ನಂತರ ಮಾತ್ರ ತೆರೆಯಲು ಹೇಳಿದರು. ಮನೆಗೆ ಬಂದ ಬುಟ್ಟಾ ಮಲಿಕ್ ಚೀಲವನ್ನು ತೆರೆದಾಗ, ಆ ಚೀಲದಲ್ಲಿ ಚಿನ್ನದ ನಾಣ್ಯಗಳು ಇದ್ದವು. ಬುಟ್ಟಾ ಆಶ್ಚರ್ಯಗೊಂಡನು. ಆ ಮಹಾತ್ಮನನ್ನು ಕಾಣಲು ಸಂತೋಷದಿಂದ ಅಲ್ಲಿಗೆ ಪುನ: ಹೋದನು.
ಪವಿತ್ರ ಗುಹೆ
ಆದರೆ ಅವರು ಅಲ್ಲಿರಲಿಲ್ಲ. ಬುಟ್ಟಾ ಅವರ ಕಣ್ಣುಗಳು ಅಮರನಾಥ ಗುಹೆಯ ಮೇಲೆ ಬಿದ್ದವು ಮತ್ತು ಅವರು ಮೊದಲ ಬಾರಿಗೆ 'ಬರ್ಫಾನಿ ಬಾಬಾ' ಅವರನ್ನು ನೋಡಿದರು. ಅವರು ತಕ್ಷಣವೇ ಬಂದು ಈ ಪವಿತ್ರ ಗುಹೆಯ ಬಗ್ಗೆ ತಮ್ಮ ಗ್ರಾಮಸ್ಥರಿಗೆ ತಿಳಿಸಿದರು, ನಂತರ ಜನರು ಈ ಗುಹೆಯನ್ನು ಭೇಟಿ ಮಾಡಲು ಬರಲು ಪ್ರಾರಂಭಿಸಿದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications