ಕಾಶ್ಮೀರದಲ್ಲಿ ಯೋಧ ನಾಪತ್ತೆ: ಅಪಹರಣ ಎಂದ ಕುಟುಂಬ, ಶೋಧ ಆರಂಭಿಸಿದ ಭದ್ರತಾ ಪಡೆ
ಶ್ರೀನಗರ, ಜುಲೈ. 30: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಭಾರತೀಯ ಸೇನೆಯ ಯೋಧ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿ ಜಾವೇದ್ ಅಹ್ಮದ್ ವಾನಿ (25) ಶನಿವಾರ ಸಂಜೆ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Acc to the family,25-year-old soldier,who had come back home on leave, was kidnapped from his vehicle in J&K's Kulgam ;they are appealing to set him free.
— DD NEWS SRINAGAR (@ddnewsSrinagar) July 30, 2023
Acc to reports,Javed Ahmad Wani, an Indian Army personnel,was posted in Leh (Ladakh) and went missing around 8 pm on Saturday pic.twitter.com/VnHw3LNFHQ
ಲಡಾಖ್ ಪ್ರದೇಶದಲ್ಲಿ ನೇಮಕಗೊಂಡಿದ್ದ ಜಾವೇದ್ ಅಹ್ಮದ್ ವಾನಿ ರಜೆಯಲ್ಲಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರನ್ಹಾಲ್ನಲ್ಲಿ ಅವರ ಕಾರು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಯೋಧನ ಪತ್ತೆಗೆ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿವೆ. ಕೆಲವು ವರದಿಗಳು, ಅವರ ಕುಟುಂಬವನ್ನು ಉಲ್ಲೇಖಿಸಿ, ಕುಲ್ಗಾಮ್ ಜಿಲ್ಲೆಯಲ್ಲಿ ಜಾವೇದ್ ಅಹ್ಮದ್ ವಾನಿಯನ್ನು ಅವರ ವಾಹನದಿಂದ ಅಪಹರಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಅಪಹರಣದ ಬಗ್ಗೆ ಪೊಲೀಸರು ಇನ್ನೂ ಏನು ಹೇಳಿಲ್ಲ.

ಜಾವೇದ್ ಅಹ್ಮದ್ ವಾನಿ ಅವರು ದಿನಸಿ ವಸ್ತುಗಳನ್ನು ಖರೀದಿಸಲು ಚೋವಲ್ಗಾಮ್ಗೆ ಹೋಗಿದ್ದರು ಎಂದು ವರದಿಗಳು ಹೇಳಿವೆ. ಎಷ್ಟು ಹೊತ್ತಾದರೂ ಅವರು ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬವು ಅವನನ್ನು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಲು ಪ್ರಾರಂಭಿಸಿದೆ. ಹುಡುಕಾಟದ ವೇಳೆ ಪರಾನ್ಹಾಲ್ ಗ್ರಾಮದಲ್ಲಿ ಅವರ ಕಾರಿನಲ್ಲಿ ಅವರ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ.
ಯೋಧ ಸಮೀರ್ ಅಹ್ಮದ್ ಮಲ್ಲಾ ಅಪಹರಣ, ಕೊಲೆ
ಕಳೆದ ವರ್ಷ, ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಸೇನಾ ಯೋಧ ಸಮೀರ್ ಅಹ್ಮದ್ ಮಲ್ಲಾನನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಅವರ ಮೃತದೇಹ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಹಣ್ಣಿನ ತೋಟದಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸೇನಾ ಯೋಧ ಸಮೀರ್ ಅಹ್ಮದ್ ಮಲ್ಲಾ ತನ್ನ ತಾಯಿಗೆ ಮಾಡಿದ ಕೊನೆಯ ಕರೆ ಯೂಸುಫ್ ಕಾಂಟೂ ನೇತೃತ್ವದ ಲಷ್ಕರ್-ಎ-ತೈಬಾದ ವಶದಲ್ಲಿದ್ದಾಗ ಮಾಡಲಾಗಿತ್ತು.
ಅತ್ಯಂತ ಹಳೆಯ ಭಯೋತ್ಪಾದಕರಲ್ಲಿ ಒಬ್ಬರಾದ ಯೂಸುಫ್ ಕಾಂಟೂ ಅವರನ್ನು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಕಾಶ್ಮೀರ ಶ್ರೇಣಿ) ವಿಜಯ್ ಕುಮಾರ್ ಅವರು "ಸೇನಾ ಯೋಧನ ಹತ್ಯೆಯ ಹಿಂದಿನ ಮಾಸ್ಟರ್ಮೈಂಡ್" ಎಂದು ಕರೆದಿದ್ದಾರೆ. ಪೋಲೀಸರ ಪ್ರಕಾರ, ಯೂಸುಫ್ ಮಲ್ಲರನ್ನು ಸಭೆಗೆ ಕರೆದಿದ್ದ ಸ್ಥಳೀಯ ಗ್ರಾಮಸ್ಥ ಅಥೆರ್ ಇಲ್ಲಾಹಿ ಶೇಖ್ ಮೇಲೆ ತನಿಖೆ ನಡೆಯುತ್ತಿತ್ತು. ಆರೋಪಿ ನಿಷೇಧಿತ ಭಯೋತ್ಪಾದಕ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಥೆರ್ ಇಲ್ಲಾಹಿ ಶೇಖ್ನೊಂದಿಗಿನ ಸಭೆಯ ಸ್ಥಳವನ್ನು ತಲುಪಿದ ಯೋಧರಿಗೆ, ಭಯೋತ್ಪಾದಕ ಯೂಸಫ್ ಕಾಂಟೂ ಸೇರಿದಂತೆ ಇತರ ಮೂವರು ಕಾಣಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆರೋಪಿ ಶೇಖ್ ಮಾರ್ಚ್ 6 ರಂದು, ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಮೂವರು ಭಯೋತ್ಪಾದಕರು ತನ್ನ ಮನೆಗೆ ಬಂದು ರಾತ್ರಿ ಅಲ್ಲಿಯೇ ಇದ್ದರು ಎಂದು ಒಪ್ಪಿಕೊಂಡಿದ್ದಾರೆ. ಮರುದಿನ, ಪಿತೂರಿಯ ಪ್ರಕಾರ ಸೇನಾ ಜವಾನ ಸಮೀರ್ ಅಹ್ಮದ್ ಮಲ್ಲಾ ಅವರನ್ನು ಭಯೋತ್ಪಾದಕ ಸಹಚರ ಅಥರ್ ಇಲ್ಲಾಹಿ ಶೇಖ್ ಅವರ ನಿವಾಸಕ್ಕೆ ಕರೆದು, ಅಲ್ಲಿ ಅವರನ್ನು ನಾಲ್ವರೂ ಅಪಹರಿಸಿ, ಹತ್ಯೆ ಮಾಡಿ ಮೃತದೇಹ ಎಸೆದಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications