ಪ್ರಿಯಾಂಕಾ 'ಸ್ವಾತಂತ್ರ್ಯ' ಫೋಟೋ ತಂದ ರಾದ್ಧಾಂತ!
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಕಿದ ಒಂದು ಫೋಟೋಕ್ಕೆ ನೆಗೆಟಿವ್ ಕಮೆಂಟ್ಸ್. ಇನ್ಸ್ಟಾ ಗ್ರಾಂ ನಲ್ಲಿ ಹಾಕಿದ ಫೋಟೋ ಬಗ್ಗೆ ಹಲವರ ಆಕ್ಷೇಪ. ಇದಕ್ಕೆ ಪ್ರಿಯಾಂಕಾ ಅಭಿಮಾನಿಗಳ ದಿಟ್ಟ ಉತ್ತರ.
ಮುಂಬೈ, ಆಗಸ್ಟ್ 17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಆಗಸ್ಟ್ 15ರಂದು, ಸ್ವಾತಂತ್ರ್ಯೋತ್ಸವದ ಸವಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಅವರು ಜನಪ್ರಿಯ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೋವೊಂದು ಅವರ ಅಭಿಮಾನಿಗಳು ಹಾಗೂ ಟೀಕಾಕಾರರ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಇತ್ತೀಚೆಗೆ, ಪ್ರಧಾನಿ ಮೋದಿಯವರ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಅವರು ವಿವಾದಕ್ಕೊಳಗಾಗಿದ್ದರು. ಇದೀಗ, ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮದೊಂದು ಪೋಸ್ಟ್ ನಿಂದ ವಿವಾದಕ್ಕೀಡಾಗಿದ್ದಾರೆ.

ಆಗಸ್ಟ್ 15ರಂದು ಪ್ರಿಯಾಂಕಾ ಚೋಪ್ರಾ ಹಾಕಿರುವ ಈ ಫೋಟೋದಲ್ಲಿ ಜೀನ್ಸ್ ಹಾಗೂ ಟಿ- ಶರ್ಟ್ ಧರಿಸಿರುವ ಅವರು, ತ್ರಿವರ್ಣವುಳ್ಳ ದುಪಟ್ಟಾವೊಂದನ್ನು ಹಿಡಿದು #MyHeartBelongsToIndia ಎಂಬ ಅಡಿಬರಹ ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನು ವಿರೋಧಿಸಿರುವ ಹಲವಾರು ಮಂದಿ, ಪಿಂಕಿಯವರ ಬಟ್ಟೆ ವಿಚಾರವಾಗಿ ಕಮೆಂಟ್ ಮಾಡಿದ್ದಾರೆ. 'ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರುವಾಗ ಸೀರೆಯುಡಲು ಆಗುವುದಿಲ್ಲವೇ, ಜೀನ್ಸ್ ಪ್ಯಾಂಟೇ ಬೇಕಿತ್ತೇ' ಎಂದು ಕೆಲವರು ಟೀಕಿಸಿದ್ದರೆ, ಮತ್ತೆ ಕೆಲವರು, ತ್ರಿವರ್ಣವುಳ್ಳ ದುಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡಿದ್ದನ್ನು ಪ್ರಶ್ನಿಸಿ 'ಸ್ಟುಪಿಡ್... ತ್ರಿವರ್ಣಕ್ಕೆ ಒಂದು ಮರ್ಯಾದೆ ಬೇಡವಾ, ಅದನ್ನು ಹೇಗೆ ಬೇಕೋ ಹಾಗೆ ಬಳಸಿದ್ದೀರಾ' ಎಂದು ಬೈಯ್ದಿದ್ದಾರೆ. ಹೀಗೆಯೇ ಅನೇಕ ಟೀಕೆಗಳ ಸುರಿಮಳೆಯೇ ಆಗಿದೆ.
Independence Day #Vibes 🇮🇳#MyHeartBelongsToIndia #happyindependencedayindia #jaihind
A post shared by Priyanka Chopra (@priyankachopra) on
ಆದರೆ, ಈ ಟೀಕೆಗಳಿಗೆ ಪ್ರಿಯಾಂಕಾ ಅವರ ಕೆಲವು ಅಭಿಮಾನಿಗಳು ತಕ್ಕದಾಗಿಯೇ ಉತ್ತರ ಕೊಟ್ಟಿದ್ದಾರೆ. 'ಪ್ರಿಯಾಂಕಾ ಅವರ ದೇಶಾಭಿಮಾನವನ್ನು ಮಾತ್ರ ಪರಿಗಣಿಸಿ, ಅವರ ಬಟ್ಟೆ ಮೇಲೆ ನಿಮ್ಮ ಕಣ್ಣೇಕೆ ?' ಎಂದು ಕೆಲವರು ಪ್ರಶ್ನಿಸಿದ್ದರೆ, ಮತ್ತೂ ಕೆಲವರು 'ತ್ರಿವರ್ಣವುಳ್ಳ ದುಪ್ಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡರೇನು ತಪ್ಪು? ಯೋಗ ದಿನಾಚರಣೆಯಂತೆ ಪ್ರಧಾನಿ ಮೋದಿ ಅವರು, ತಮ್ಮ ಬೆವರು ಒರೆಸಿಕೊಳ್ಳಲು ತ್ರಿವರ್ಣವುಳ್ಳ ಬಟ್ಟೆಯೊಂದನ್ನು ಬಳಸಿರಲಿಲ್ಲವೇ? ಅದು ತಪ್ಪಲ್ಲಎಂದಾದರೆ, ಇದೂ ತಪ್ಪಲ್ಲ' ಎಂದು ವಾದಿಸಿದ್ದಾರೆ.
ಹೀಗೇ, ಪರ- ವಿರೋಧ ಜಗಳ ಇನ್ಸ್ಟಾಗ್ರಾಂ ನಲ್ಲಿ ಮುಂದುವರಿದಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications