ಪ್ರಿಯಾಂಕಾ 'ಸ್ವಾತಂತ್ರ್ಯ' ಫೋಟೋ ತಂದ ರಾದ್ಧಾಂತ!
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಕಿದ ಒಂದು ಫೋಟೋಕ್ಕೆ ನೆಗೆಟಿವ್ ಕಮೆಂಟ್ಸ್. ಇನ್ಸ್ಟಾ ಗ್ರಾಂ ನಲ್ಲಿ ಹಾಕಿದ ಫೋಟೋ ಬಗ್ಗೆ ಹಲವರ ಆಕ್ಷೇಪ. ಇದಕ್ಕೆ ಪ್ರಿಯಾಂಕಾ ಅಭಿಮಾನಿಗಳ ದಿಟ್ಟ ಉತ್ತರ.
ಮುಂಬೈ, ಆಗಸ್ಟ್ 17: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಆಗಸ್ಟ್ 15ರಂದು, ಸ್ವಾತಂತ್ರ್ಯೋತ್ಸವದ ಸವಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಅವರು ಜನಪ್ರಿಯ ಜಾಲತಾಣವಾದ ಇನ್ ಸ್ಟಾಗ್ರಾಂ ನಲ್ಲಿ ಹಾಕಿದ ಫೋಟೋವೊಂದು ಅವರ ಅಭಿಮಾನಿಗಳು ಹಾಗೂ ಟೀಕಾಕಾರರ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಇತ್ತೀಚೆಗೆ, ಪ್ರಧಾನಿ ಮೋದಿಯವರ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಅವರು ವಿವಾದಕ್ಕೊಳಗಾಗಿದ್ದರು. ಇದೀಗ, ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿನ ತಮ್ಮದೊಂದು ಪೋಸ್ಟ್ ನಿಂದ ವಿವಾದಕ್ಕೀಡಾಗಿದ್ದಾರೆ.

ಆಗಸ್ಟ್ 15ರಂದು ಪ್ರಿಯಾಂಕಾ ಚೋಪ್ರಾ ಹಾಕಿರುವ ಈ ಫೋಟೋದಲ್ಲಿ ಜೀನ್ಸ್ ಹಾಗೂ ಟಿ- ಶರ್ಟ್ ಧರಿಸಿರುವ ಅವರು, ತ್ರಿವರ್ಣವುಳ್ಳ ದುಪಟ್ಟಾವೊಂದನ್ನು ಹಿಡಿದು #MyHeartBelongsToIndia ಎಂಬ ಅಡಿಬರಹ ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನು ವಿರೋಧಿಸಿರುವ ಹಲವಾರು ಮಂದಿ, ಪಿಂಕಿಯವರ ಬಟ್ಟೆ ವಿಚಾರವಾಗಿ ಕಮೆಂಟ್ ಮಾಡಿದ್ದಾರೆ. 'ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರುವಾಗ ಸೀರೆಯುಡಲು ಆಗುವುದಿಲ್ಲವೇ, ಜೀನ್ಸ್ ಪ್ಯಾಂಟೇ ಬೇಕಿತ್ತೇ' ಎಂದು ಕೆಲವರು ಟೀಕಿಸಿದ್ದರೆ, ಮತ್ತೆ ಕೆಲವರು, ತ್ರಿವರ್ಣವುಳ್ಳ ದುಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡಿದ್ದನ್ನು ಪ್ರಶ್ನಿಸಿ 'ಸ್ಟುಪಿಡ್... ತ್ರಿವರ್ಣಕ್ಕೆ ಒಂದು ಮರ್ಯಾದೆ ಬೇಡವಾ, ಅದನ್ನು ಹೇಗೆ ಬೇಕೋ ಹಾಗೆ ಬಳಸಿದ್ದೀರಾ' ಎಂದು ಬೈಯ್ದಿದ್ದಾರೆ. ಹೀಗೆಯೇ ಅನೇಕ ಟೀಕೆಗಳ ಸುರಿಮಳೆಯೇ ಆಗಿದೆ.
Independence Day #Vibes 🇮🇳#MyHeartBelongsToIndia #happyindependencedayindia #jaihind
A post shared by Priyanka Chopra (@priyankachopra) on
ಆದರೆ, ಈ ಟೀಕೆಗಳಿಗೆ ಪ್ರಿಯಾಂಕಾ ಅವರ ಕೆಲವು ಅಭಿಮಾನಿಗಳು ತಕ್ಕದಾಗಿಯೇ ಉತ್ತರ ಕೊಟ್ಟಿದ್ದಾರೆ. 'ಪ್ರಿಯಾಂಕಾ ಅವರ ದೇಶಾಭಿಮಾನವನ್ನು ಮಾತ್ರ ಪರಿಗಣಿಸಿ, ಅವರ ಬಟ್ಟೆ ಮೇಲೆ ನಿಮ್ಮ ಕಣ್ಣೇಕೆ ?' ಎಂದು ಕೆಲವರು ಪ್ರಶ್ನಿಸಿದ್ದರೆ, ಮತ್ತೂ ಕೆಲವರು 'ತ್ರಿವರ್ಣವುಳ್ಳ ದುಪ್ಪಟ್ಟಾವನ್ನು ಕೊರಳಿಗೆ ಸುತ್ತಿಕೊಂಡರೇನು ತಪ್ಪು? ಯೋಗ ದಿನಾಚರಣೆಯಂತೆ ಪ್ರಧಾನಿ ಮೋದಿ ಅವರು, ತಮ್ಮ ಬೆವರು ಒರೆಸಿಕೊಳ್ಳಲು ತ್ರಿವರ್ಣವುಳ್ಳ ಬಟ್ಟೆಯೊಂದನ್ನು ಬಳಸಿರಲಿಲ್ಲವೇ? ಅದು ತಪ್ಪಲ್ಲಎಂದಾದರೆ, ಇದೂ ತಪ್ಪಲ್ಲ' ಎಂದು ವಾದಿಸಿದ್ದಾರೆ.
ಹೀಗೇ, ಪರ- ವಿರೋಧ ಜಗಳ ಇನ್ಸ್ಟಾಗ್ರಾಂ ನಲ್ಲಿ ಮುಂದುವರಿದಿದೆ.
-
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್












Click it and Unblock the Notifications