ಎಂಸಿಡಿ ಚುನಾವಣೆ: ಕೇಜ್ರಿವಾಲ್ 'ಚೋಟಾ ರೀಚಾರ್ಜ್' ಎಂದ ಓವೈಸಿ
ದೆಹಲಿ ನವೆಂಬರ್ 28: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ತನ್ನ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಪಕ್ಷದ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಅಸಾದ್ದುದಿನ್ ಓವೈಸಿ, ಆಡಳಿತ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
'ಇಲ್ಲಿ ಹಲವಾರು ಎಂಸಿಡಿ ವಾರ್ಡ್ಗಳ ಬಗ್ಗೆ ಗಮನ ಹರಿಸಲಾಗಿಲ್ಲ ಮತ್ತು ಈ ಪ್ರದೇಶಗಳು ಅಭಿವೃದ್ಧಿಯಾಗಿಲ್ಲ. ಗುಜರಾತಿಗೆ ಹೋಗು, ದೆಹಲಿಯ ಸೀಲಾಂಪುರಕ್ಕೆ ಹೋಗು... ಅಂತ ಪಕ್ಷದ ನಾಯಕರು ಅಲೆದಾಡುತ್ತಿದ್ದಾರೆ. ಆದರೆ ಈ ಪ್ರದೇಶಗಳಲ್ಲಿ ಅಭಿವೃದ್ಧಿಯಾಗಲೀ ಅಥವಾ ಶಾಲೆಗಳ ನಿರ್ಮಾಣವಾಗಲಿ ಆಗಿಲ್ಲ' ಎಂದು ಓವೈಸಿ ದೂರಿದ್ದಾರೆ.
ದೆಹಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಅರವಿಂದ್ ಕೇಜ್ರಿವಾಲ್ 'ಚೋಟಾ ರೀಚಾರ್ಜ್' ಎಂದು ಕರೆದಿದ್ದಾರೆ. ಹಿಂದಿನ ಸರ್ಕಾರಗಳ ವಿರುದ್ಧ ಕೂಡ ವಾಗ್ದಾಳಿ ನಡೆಸಿದ ಅವರು, ದೆಹಲಿಯ ಅಭಿವೃದ್ಧಿಗೆ ಯಾರೂ ಶ್ರಮಿಸಲಿಲ್ಲ. ಶಾಲೆಗಳ ನಿರ್ಮಾಣವಾಗಲೀ, ಸ್ವಚ್ಛತೆ ಅನುಷ್ಠಾನವಾಗಲೀ ಆಗಿಲ್ಲ ಎಂದರು.

ದೆಹಲಿ ಸಿಎಂ ವಿರುದ್ಧ ಓವೈಸಿ ವಾಗ್ದಾಳಿ
ತಬ್ಲೀಘಿ ಜಮಾತ್ಗೆ ಮಾನಹಾನಿ ಮಾಡಿದ್ದಕ್ಕಾಗಿ ದೆಹಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ತಬ್ಲಿಘಿ ಜಮಾತ್ ಮೇಲೆ ಕೋವಿಡ್ -19 ಹರಡುವಿಕೆಯ ಹೊಣೆಗಾರಿಕೆಯನ್ನು ಕೇಜ್ರಿವಾಲ್ ಪಿನ್ ಮಾಡಿದ್ದಾರೆ. ನೀವು ತಬ್ಲೀಘಿ ಜಮಾತ್ಗೆ ಮಾನಹಾನಿ ಮಾಡಿದ್ದೀರಿ. ಕೊರೊನಾ ಹೆಚ್ಚಾದರೆ ಅದನ್ನು ಹರಡಲು ತಬ್ಲಿಘಿ ಜಮಾತ್ ಕಾರಣ ಎಂದು ಇಡೀ ಜಗತ್ತು ದೂಷಿಸುವಂತೆ ಮಾಡಿದ್ದೀರಿ" ಎಂದರು.

ಸಿಎಎ ವಿರೋಧಿ ಪ್ರತಿಭಟನೆ
ದೆಹಲಿಯ ಶಾಹೀನ್ ಬಾಗ್ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ವಿಷಯವನ್ನೂ ಅವರು ಪ್ರಸ್ತಾಪಿಸಿದರು. 2020ರ ದೆಹಲಿ ಗಲಭೆಯ ವಿಷಯವನ್ನು ಪ್ರಸ್ತಾಪಿಸಿದರು. ಜನರ ಮನೆಗಳು ಉರಿಯುತ್ತಲೇ ಇದ್ದವು. ಆದರೆ ಮುಖ್ಯಮಂತ್ರಿ ನಾಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ನನಗೆ ಒಂದು ದಿನ ರಕ್ಷಣೆಗೆ ಪೊಲೀಸರನ್ನು ನೀಡಲಿಲ್ಲ ಎಂದು ದೂರಿದರು.

ಬುರ್ಖಾ ವಿಚಾರದಲ್ಲಿ ಕೇಜ್ರಿವಾಲ್ ನಿಲುವೇನು?
ಓವೈಸಿ ಅವರು ಕೇಜ್ರಿವಾಲ್ ವಿರುದ್ಧ ಮತ್ತಷ್ಟು ವಾಕ್ ಸಮರ ಮುಂದುವರೆಸಿದರು. ಹಲವಾರು ವಿಷಯಗಳ ಬಗ್ಗೆ ಕೇಜ್ರಿವಾಲ್ ಅವರ ಮೌನವನ್ನು ಪ್ರಶ್ನಿಸಿದರು. ಬುರ್ಖಾ ವಿಚಾರದಲ್ಲಿ ಕೇಜ್ರಿವಾಲ್ ಏನು ಹೇಳಿದ್ದಾರೆ? ಏಕರೂಪ ನಾಗರಿಕ ಸಂಹಿತೆ ಬಗ್ಗೆ ಕೇಜ್ರಿವಾಲ್ ಅವರನ್ನು ಕೇಳಬೇಕು. ಬುರ್ಖಾ ಬಗ್ಗೆ ನಿಮ್ಮ ನಿಲುವೇನು ಎಂದು ಕೇಜ್ರಿವಾಲ್ ಅವರನ್ನು ಕೇಳಬೇಕು. ಬುರ್ಖಾ ಬಗ್ಗೆ ಕೇಜ್ರಿವಾಲ್ ಏನು ಹೇಳುತ್ತಾರೆ ಕೇಳಬೇಕಾಗಿದೆ? ಯಾಕೆಂದರೆ ಅವರು ಬಿಕ್ಲಿಸ್ ಬಾನೋ (11 ಅಪರಾಧಿಗಳ ಬಿಡುಗಡೆ) ಬಗ್ಗೆ ಮಾತನಾಡುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಎಂ ವಿರುದ್ಧ ಓವೈಸಿ ಕಿಡಿ
ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಗಳ ಸುತ್ತಲಿನ ಹಿಂಸಾಚಾರಕ್ಕಾಗಿ ಜೈಲು ಪಾಲಾದ ಉಮರ್ ಖಾಲಿದ್ ಅವರ ವಿಷಯವನ್ನೂ ಓವೈಸಿ ಅವರು ಪ್ರಸ್ತಾಪಿಸಿದರು. ತನ್ನ ಪತಿಗೆ ಆಹಾರ ನೀಡುವಂತೆ ಉಮರ್ ಖಾಲಿದ್ ಪತ್ನಿ ವಿಡಿಯೋಗಳ ಮೂಲಕ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾಳೆ. ಆದರೆ 'ಕೇಜ್ರಿವಾಲ್ ತನ್ನ ಸಚಿವರನ್ನು ಜೈಲಿನಲ್ಲಿ ಎಣ್ಣೆ ಹಾಕುತ್ತಿದ್ದಾರೆ' ಎಂದು ಓವೈಸಿ ಕಿಡಿ ಕಾರಿದರು.
ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ನ 250 ಸ್ಥಾನಗಳಿಗೆ ಡಿಸೆಂಬರ್ 4 ರಂದು ಚುನಾವಣೆ ನಡೆಯಲಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications