Get Updates
Get notified of breaking news, exclusive insights, and must-see stories!

EVM ನಲ್ಲಿ ಸಮಸ್ಯೆ ಇದ್ದಿದ್ದರೆ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ!: ಅಮರೀಂದರ್

ಮತಯಂತ್ರಗಳಲ್ಲಿ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಕಾಂಗ್ರೆಸ್ ನಾಯಕ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೆಲ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಚಂಡಿಘಡ, ಏಪ್ರಿಲ್ 13: ಇವಿಎಂ (Electoral Voting Machine) ನಲ್ಲಿ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಪಂಜಾಬಿನ ನೂತನ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಈ ಮೂಲಕ ಸೋಲಿಗೆ ಇವಿಎಂ ಹೊಣೆಯಲ್ಲ ಎಂದು ನಿನ್ನೆ ತಾನೇ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೋಯ್ಲಿ ಅವರ ಮಾತಿಗೆ ಅಮರೀಂದರ್ ಸಹ ಬೆಂಬಲ ನೀಡಿದ್ದಾರೆ.

ಮತಯಂತ್ರಗಳಲ್ಲಿ ದೋಷವಿದೆ ಎಂಬ ಮಾತಿಗೆ ಅರ್ಥವಿಲ್ಲ. ಹಾಗೊಮ್ಮೆ ದೋಷವಿದ್ದಿದ್ದರೆ ಕಾಂಗ್ರೆಸ್ ಬದಲು ಅಕಾಲಿದಳ ಅಧಿಕಾರಕ್ಕೆ ಬರುತ್ತಿತ್ತು ಎಂದು ಅಮರೀಂದರ್ ಸಿಂಗ್ ಕೆಲ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.[ಸೋಲಿಗೆ ಇವಿಎಂ ಹೊಣೆಯಲ್ಲ: ವೀರಪ್ಪ ಮೋಯ್ಲಿ]

Amarinder Singh

ಪಂಚರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಇವಿಎಂ ಕಾರ್ಯದಕ್ಷತೆಯ ಬಗ್ಗೆ ಸೋತ ಪಕ್ಷಗಳು ತಕರಾರೆತ್ತಿದ್ದವು. ಸೋಲಿಗೆ ಮತಯಂತ್ರದ ದೋಷವೇ ಕಾರಣ ಎಂದು ದೂರಿದವರಿಗೆ ಚುನಾವಣಾ ಆಯೋಗವೂ ಛೀಮಾರಿ ಹಾಕಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+