ರಾಜ್ ಕೋಟ್ ನಲ್ಲಿ ಅಗ್ನಿ ಆಕಸ್ಮಿಕ: ಮೂವರ ದುರಂತ ಅಂತ್ಯ
ರಾಜ್ ಕೋಟ್, ಜನವರಿ 13: ಇತ್ತೀಚೆಗೆ ಬೆಂಕಿ ಅವಘಡಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು(ಜ.13) ಬೆಳಗ್ಗಿನ ಜಾವ ಗುಜರಾತಿನ ರಾಜ್ ಕೋಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ರಾಜ್ ಕೋಟ್ನ ಪ್ರಾನ್ಸ್ಲಾ ಎಂಬ ಹಳ್ಳಿಯಲ್ಲಿ ನಡೆಯುತ್ತಿದ್ದ ಶಿಬಿರವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ. ಆದರೆ ಬೆಂಕಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ಕೆ.ಆರ್.ಮಾರ್ಕೇಟ್ ಬಳಿಯ ಕೈಲಾಶ್ ಬಾರಿನಲ್ಲಿ ಬೆಂಕ ಅವಘಡ ಸಂಭವಿಸಿದ ಪರಿಣಾಮ 5 ಜನ ಮೃತರಾಗಿದ್ದರು. ಮುಂಬೈಯ ಕಮಲಾಮಿಲ್ ನಲ್ಲಿ ಹೊಸ ವರ್ಷಕ್ಕೂ ಎರಡು ದಿನ ಮೊದಲು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 14 ಜನ ಮೃತರಾಗಿದ್ದರು.












Click it and Unblock the Notifications