ಹಾಸನಾಂಬೆ ದೇವಾಲಯದ ಹುಂಡಿ ಲೆಕ್ಕಾಚಾರ!
ಹಾಸನ, ಅಕ್ಟೋಬರ್ 23 : ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವೂ ಮುಕ್ತಾಯವಾಗಿದೆ. 4 ಕೋಟಿ ಆದಾಯ ಬಂದಿದ್ದು, ಹುಂಡಿಯಲ್ಲಿ ಪ್ರೇಮಪತ್ರ, ಎಟಿಎಂ ಕಾರ್ಡ್ ಪತ್ತೆಯಾಗಿದೆ...!
ಶನಿವಾರ ಹಾಸನಾಂಬೆ ದೇವಾಲಯ ಬಾಗಿಲು ಮುಚ್ಚಲಾಗಿದೆ. ಭಾನುವಾರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಒಟ್ಟು 4,14,63,997 ರೂ. ಆದಾಯ ದೇವಾಲಯಕ್ಕೆ ಬಂದಿದೆ. ಕಳೆದ ಬಾರಿಗಿಂತ ಒಂದೂವರೆ ಕೋಟಿ ರೂ. ಹೆಚ್ಚು ಆದಾಯ ಈ ಬಾರಿ ಬಂದಿದೆ.
ಹುಂಡಿಯಲ್ಲಿ ಪ್ರೇಮಪತ್ರ, ವಿದೇಶಿ ಕರೆನ್ಸಿ, ನಿಷೇಧಿತ 500 ರೂ. ನೋಟು, ನಾನು ಪ್ರೀತಿಸಿದ ಹುಡುಗಿ ನನಗೆ ಸಿಗುವಂತೆ ಮಾಡು ಎಂಬ ಪ್ರೇಮಪತ್ರ, ಮಗನ ಆರೋಗ್ಯದ ಸಮಸ್ಯೆ ಬಗೆಹರಿಸು ಎಂಬ ಮನವಿ ಪತ್ರಗಳು ಸಿಕ್ಕಿವೆ.
ಅಕ್ಟೋಬರ್ 12ರಂದು ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಅಕ್ಟೋಬರ್ 12ರಿಂದ 21ರ ತನಕ ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಲಕ್ಷಾಂತರ ಜನರು ದೇವಿಯ ದರ್ಶನ ಪಡೆದು ಪುನೀತರಾದರು.

ಹುಂಡಿಯಿಂದ ಬಂದ ಆದಾಯ
ಹಾಸನಾಂಬೆ ದೇವಿಯ ಹುಂಡಿಯಲ್ಲಿ 1,10,91,383 ರೂ. ಸಂಗ್ರಹವಾಗಿದೆ. ಸಿದ್ದೇಶ್ವರ ದೇವಿಯ ಹುಂಡಿಯಲ್ಲಿ 7,80,090 ರೂ. ಸಂಗ್ರಹವಾಗಿದೆ. ವಿಐಪಿ ದರ್ಶನದ ಟಿಕೆಟ್ ಮಾರಾಟ ಸೇರಿದಂತೆ ಇತರ ಮೂಲಗಳಿಂದ 2,96,04,494 ರೂ. ಆದಾಯ ಬಂದಿದೆ.

'ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು'
ಹುಂಡಿಯಲ್ಲಿನ ಹಣ ಎಣಿಸುತ್ತಿದ್ದ ಸಿಬ್ಬಂದಿಗೆ ಪ್ರೇಮ ಪತ್ರವೂ ಸಿಕ್ಕಿದೆ. 'ಶ್ರೀ ಹಾಸನಾಂಬೆ ದೇವಿ ಎಂದು ಆರಂಭವಾಗುವ ಪ್ರೇಮ ಪತ್ರದಲ್ಲಿ ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೋ. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ನನಗೆ ಸಿಗುವಂತೆ ಮಾಡು' ಎಂದು ಮನವಿ ಮಾಡಲಾಗಿದೆ.

500 ರೂ. ನೋಟು ಪತ್ತೆ
ಹುಂಡಿಯಲ್ಲಿ ನಿಷೇಧಿತ 500 ರೂ. ನೋಟುಗಳು, 500 ರೂ. ನೋಟುಗಳು ಪತ್ತೆಯಾಗಿವೆ. ವಿದೇಶಿ ಕರೆನ್ಸಿ, ಚಿನ್ನದ ಆಭರಣಗಳು ಪತ್ತೆಯಾಗಿವೆ. 'ಮಗನ ಆರೋಗ್ಯ ಸರಿಪಡಿಸು' ಎಂದು ತಾಯಿಯು ಬರೆದ ಪತ್ರವೂ ಸಿಕ್ಕಿದೆ.

ದೇವಾಲಯಕ್ಕೆ ಬೀಗ
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಆಧಿದೇವತೆ ಹಾಸನಾಂಬೆ ದೇವಿಗೆ ಧಾರ್ಮಿಕ ನಿಯಮಗಳಂತೆ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 1.39 ಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರ ಉಪಸ್ಥಿತಿಯಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.
-
BREAKING: ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ; ಮಠದ ಟ್ರಸ್ಟಿಗಳಿಂದ ನಿರ್ಧಾರ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಏಪ್ರಿಲ್ 12ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 11ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ramya: ಬೀದಿ ನಾಯಿಗಳ ಮೇಲಿನ ಕ್ರೌರ್ಯಕ್ಕೆ ನಟಿ ರಮ್ಯಾ ಕಣ್ಣೀರು: ಬೆಂಗಳೂರಿನ ಫ್ರೀಡಂಪಾರ್ಕ್ ಪ್ರತಿಭಟನೆಯಲ್ಲಿ ಭಾಗಿ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ











Click it and Unblock the Notifications