ಸಂಚಾರಿ ಪೊಲೀಸರ ಜೊತೆ ಕಾಂಗ್ರೆಸ್ ನಾಯಕನ ಜಟಾಪಟಿ
Recommended Video

ಧಾರವಾಡ, ಡಿಸೆಂಬರ್ 19 : ಕಾಂಗ್ರೆಸ್ ನಾಯಕನೊಬ್ಬ ಸಂಚಾರಿ ನಿಯಮವನ್ನು ಉಲ್ಲಂಘಿಸಿ, ಸಂಚಾರಿ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಬಿಎಂಡಬ್ಲ್ಯೂ ಕಾರಿನಲ್ಲಿ ಸಂಚರಿಸುವಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇರ್ಮಾನ್ ಕಳ್ಳಿಮನಿ ಪೊಲೀಸರ ಜೊತೆ ರಾದ್ದಾಂತ ಮಾಡಿಕೊಂಡಿದ್ದಾನೆ.
ಮಂಗಳವಾರ ಮಧ್ಯಾಹ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಕಚೇರಿ ಮುಂಭಾಗದಲ್ಲಿ ಈ ರಂಪಾಟ ನಡೆದಿದೆ. ಇದಕ್ಕೆ ನೂರಾರು ಜನರು ಮೂಕ ಸಾಕ್ಷಿಯಾಗಿದ್ದರು.

ಧಾರವಾಡ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಘೇಶ ಚನ್ನಣ್ಣವರ ಅವರೊಂದಿಗೆ ವಾಗ್ವದ ಮಾಡಿಕೊಂಡಿದ್ದಾರೆ. ಅರ್ಧಗಂಟೆಗೂ ಅಧಿಕ ಕಾಲ ವಾದ-ವಿವಾದ ನಡೆದಿದೆ.
ಪೊಲೀಸ್ ಅಧಿಕಾರಿಯ ಜೊತೆ ಏಕವಚನಲ್ಲಿ ಇರ್ಮಾನ್ ಗಲಾಟೆ ಮಾಡಿದ್ದರಿಂದ ಮುರುಘೇಶ ಚನ್ನಣ್ಣನವರ್ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದರು. ಇದರಿಂದ ಇನ್ನಷ್ಟು ಕುಪಿತಗೊಂಡ ಇರ್ಮಾನ್ ಕಳ್ಳಿಮನಿ, ನಿಮ್ಮ ವಾಹನ ಚಾಲಕ ಕೂಡ ಬೆಲ್ಟ್ ಹಾಕಿರಲಿಲ್ಲ. ಅವರ ಮೇಲೆ ಕೇಸ್ ಹಾಕಿ, ಅಲ್ಲದೆ, ಅವರಿಗೆ ಮೊದಲು ಚೆನ್ನಾಗಿ ಮಾತನಾಡಲು ಕಲಿಸಿ ಎಂದು ಸಲಹೆ ನೀಡಿದರು.
ಸ್ಥಳೀಯರು ಇಬ್ಬರನ್ನು ಸಮಾಧಾನಮಾಡಿ ಪ್ರಕರಣಕ್ಕೆ ತೆರೆ ಎಳೆಯಲು ಮುಂದಾದರು. ಇರ್ಮಾನ್ ಕಳ್ಳಿಮನಿಗೆ ಕಾರು ಚಾಲನೆ ಮಾಡುವಾಗ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಪಾವತಿಸುವಂತೆ ಪೊಲೀಸರು ಸೂಚಿಸಿದರು.
ಸಂಚಾರ ನಿಯಮ ಉಲ್ಲಂಘನೆ, ಸೀಟ್ ಬೆಲ್ಟ್ ಧರಿಸದಿರುವುದು, ಎಮಿಶನ್ ಟೆಸ್ಟ್ ಪ್ರಮಾಣ ಪತ್ರ ಹಾಜರು ಪಡಿಸದ ಹಿನ್ನಲೆಯಲ್ಲಿ ದಂಡ ಕಟ್ಟಲು ಸೂಚಿಸಿದರು. ಆದರೆ, ನನ್ನ ಬಳಿ ಹಣವಿಲ್ಲ ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಮಾಡುತ್ತಿದೆ. ಹೀಗಾಗಿ ನೀವು ಕಾರ್ಡ್ ಸ್ವೈಪ್ ಮಾಡಿಕೊಳ್ಳಿ ಮಾಡಿಕೊಳ್ಳಿ ಎಂದು ಮತ್ತೆ ತಗಾದೆ ತೆಗೆದದರು.
ಇದರಿಂದ ಇನ್ನಷ್ಟು ಕಂಗಾಲಾದ ಪೊಲೀಸರು, ಕೋರ್ಟಿಗೆ ಹೋಗಿ ದಂಡ ಕಟ್ಟುವಂತೆ ಸೂಚಿಸಿ ರಶೀದಿ ನೀಡಿದರು.











Click it and Unblock the Notifications