ಅಭಿಮಾನಿಗಳ ಡಿಕ್ಕಿಲೋನಕ್ಕೆ ದಿನಕರನ್ ಕಕ್ಕಾಬಿಕ್ಕಿ!
Recommended Video

ಚೆನ್ನೈ, ಡಿಸೆಂಬರ್ 06 : ಅಗ್ರಪಂಕ್ತಿಯ ನಾಯಕರಿಂದ ಹಿಡಿದುಕೊಂಡು ಕಡುಬಡವ ಶ್ರೀಸಾಮಾನ್ಯರವರೆಗೆ ಸಹಸ್ರಾರು ಜನರು, ಡಿಸೆಂಬರ್ 5ರಂದು ಜಯಲಲಿತಾ ಸಮಾಧಿಗೆ ಭಕ್ತಿಭಾವದಿಂದ ನಮಸ್ಕರಿಸಿದ್ದಾರೆ. ಭಾವುಕತೆಯನ್ನು ಹಿಡಿದಿಡಲಾರದೆ ಕೆಲವರು ಕಂಬನಿಯನ್ನೂ ಮಿಡಿದಿದ್ದಾರೆ.
ಅಂಥ ಸಹಸ್ರಾರು ಜನರಲ್ಲಿ ಎಐಎಡಿಎಂಕೆಯಲ್ಲಿ ಮೂಲೆಗುಂಪಾಗಿರುವ, ಶಶಿಕಲಾ ನಟರಾಜನ್ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಕೂಡ ಒಬ್ಬರು. ಅವರು ಹಾಗೆ ಬಂದು, ಪುಷ್ಪ ನಮನವನ್ನು ಸಲ್ಲಿಸಿ, ಹಾಗೆ ಹೋಗಿದ್ದರೆ ಅಂಥ ಸುದ್ದಿ ಆಗುತ್ತಲೇ ಇರಲಿಲ್ಲ.

ಟಿಟಿವಿ ದಿನಕರನ್ ಅಲ್ಲಿ ಬಂದಾಗ ಜಯಲಲಿತಾ ಸಮಾಧಿ ಬಳಿ ಡಿಸೆಂಬರ್ 5ರಂದು ನಡೆದಿರುವುದು ಭಾರೀ ಚರ್ಚೆಗೆ, ಅಪಹಾಸ್ಯಕ್ಕೆ, ವಿಡಂಬನೆಗೆ ಗ್ರಾಸವಾಗಿದೆ. ಅದನ್ನು ಜನಪ್ರಿಯ ತಮಿಳು ಸಿನೆಮಾದಲ್ಲಿ ಬರುವ ಹಾಸ್ಯಮಯ ಸನ್ನಿವೇಶದೊಡನೆ ಸಮೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ಮಾಡಲಾಗುತ್ತಿದೆ.
ಟಿಟಿವಿ ದಿನಕರನ್ ಅಂದ್ರೆ ಸುಮ್ನೇನಾ? ಜತೆಗೊಂದಿಷ್ಟು ಭಾರೀ ಸಂಖ್ಯೆಯನ್ನು ಅಭಿಮಾನಿಗಳನ್ನೂ ದಂಡುಕಟ್ಟಿಕೊಂಡು ಬಂದಿದ್ದರು. ಕೆಲವರು ಬಿಕ್ಕಿಬಿಕ್ಕಿ ಅಳುತ್ತಿದ್ದರೆ, ಹಲವರಿಗೆ ತಾವೇ ಮೊದಲು ಸಮನ ಸಲ್ಲಿಸಬೇಕೆಂಬ ಹಪಾಹಪಿ. ಗೌಜುಗದ್ದಲ, ನೂಕುನುಗ್ಗಲು, ತಳ್ಳಾಟದಲ್ಲಿ ಆಗಿದ್ದೇನೆಂದರೆ...
ಕೈತುಂಬ ಹಿಡಿದಿದ್ದ ಸುವಾಸನೆ ಭರಿತ ಗುಲಾಬಿ ಹೂವುಗಳ ಪಕಳೆಗಳನ್ನು ಟಿಟಿವಿ ದಿನಕರನ್ ಅವರು, ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಯ ಮೇಲೆ ಇನ್ನೇನು ಚೆಲ್ಲಬೇಕು, ಆಗ ಇದ್ದಕ್ಕಿದ್ದಂತೆ ಅಭಿಮಾನಿಗಳ ನಡುವೆ 'ಡಿಕ್ಕಿಲೋನ' ಆಟ ಶುರುವಾಗಿದೆ. ಇಟ್ಟರು ನೋಡಿ ಒಂದು ಡಿಕ್ಕಿ, ಟಿಟಿವಿ ದಿನಕರನ್ ಆಯತಪ್ಪಿ ಸಮಾಧಿ ಮೇಲೆ ಹತ್ತಿಯೇಬಿಟ್ಟರು.
ಅಂದ ಹಾಗೆ, ಡಿಕ್ಕಿಲೋನ ಆಟವೇನೆಂದರೆ, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ, ಕನ್ನಡದ ನಟ ಅರ್ಜುನ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿದ್ದ 'ಜಂಟನ್ಮನ್' ಚಿತ್ರದಲ್ಲಿ ಬರುವ ಒಂದು ಹಾಸ್ಯಮಯ ಸನ್ನಿವೇಶ. ಅದರಲ್ಲಿ ಗೌಂಡಮಣಿ ಮತ್ತು ಸೆಂಥಿಲ್ ಪೃಷ್ಟವನ್ನು ಹಿಂಬದಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದು ಆಡುವ ತಮಾಷೆಯ ಸನ್ನಿವೇಶ.
ಕೋಟಿಗಟ್ಟಲೆ ಆಸ್ತಿಯನ್ನು ಬಿಟ್ಟು ಇಹಲೋಕ ತ್ಯಜಿಸಿದ ಜಯಲಲಿತಾ ಸಮಾಧಿಯ ಬಳಿಯೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು 'ಡಿಕ್ಕಿಲೋನ' ಆಟ ಶುರುಹಚ್ಚಿಕೊಂಡಿದ್ದಾರೆ. ನೂಕುನುಗ್ಗಲು ಜಾಸ್ತಿಯಾಗಿ ಒಬ್ಬರಿಗೊಬ್ಬರು ತಳ್ಳಾಡಿ, ಭಕ್ತಿಭಾವುಕತೆಯಿಂದ ಹೂಪಕಳೆಗಳನ್ನು ಅರ್ಚಿಸುತ್ತಿದ್ದ ದಿನಕರನ್ ಗೂ ಅಭಿಮಾನಿಗಳು ಡಿಕ್ಕಿ ಹೊಡೆದಿದ್ದಾರೆ.
ದಿನಕರನ್ ಅವರು ಆಯತಪ್ಪಿ ಒಂದು ಹೆಜ್ಜೆ ಜಯಲಲಿತಾ ಸಮಾಧಿಯ ಮೇಲೂ ಇಟ್ಟುಬಿಟ್ಟಿದ್ದಾರೆ. ಇನ್ನೇನು ಸಮಾಧಿಯ ಮೇಲೆ ಬಿದ್ದೇಬಿಡಬೇಕು, ಅಷ್ಟರಲ್ಲಿ ಅವರ ಹಿಂದೆ ನಿಂತಿದ್ದ ಕಳೈಮಾಮರನ್ ಅವರು ದಿನಕರನ್ ಅವರ ಹೊಟ್ಟೆಯನ್ನು ಹಿಡಿದುಕೊಂಡು, ಮುಂದೆ ಆಗಬಾರದ ಅನಾಹುತವನ್ನು ಮತ್ತು ಮುಜುಗರವನ್ನು ಸಕಾಲದಲ್ಲಿ ತಪ್ಪಿಸಿದ್ದಾರೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications