ಭೋಪಾಲ್: ಆಶ್ರಮ ಸೆಟ್ ಮೇಲಿನ ದಾಳಿಯ ಹಿಂದೆ ಕೊಲೆ ಆರೋಪಿ
ಭೋಪಾಲ್ ನವೆಂಬರ್ 12: ಕಳೆದ ತಿಂಗಳು ಭೋಪಾಲ್ನಲ್ಲಿ ನಿರ್ದೇಶಕ ಪ್ರಕಾಶ್ ಝಾ ಮತ್ತು ಅವರ ಸಿಬ್ಬಂದಿಯ ಮೇಲೆ ವೆಬ್ ಸೀರೀಸ್ "ಆಶ್ರಮ" ಸೆಟ್ನಲ್ಲಿ ನಡೆದ ದಾಳಿಯ ಹಿಂದೆ ಕೊಲೆಯ ಆರೋಪಿ ಇದ್ದಾನೆ ಎಂದು ಎನ್ಡಿಟಿವಿ ಪತ್ತೆ ಮಾಡಿದೆ. "ಆಶ್ರಮ" ಸೆಟ್ಗಳ ಮೇಲಿನ ದಾಳಿಗಾಗಿ ಪೊಲೀಸರು ಬಂಧಿಸಿದ ಏಳು ಮಂದಿಯಲ್ಲಿ ಬಲಪಂಥೀಯ ಸಂಘಟನೆಯ ಭೋಪಾಲ್ ಘಟಕದ ಪ್ರಾಂತೀಯ ಮುಖ್ಯಸ್ಥ ಸುರೇಶ್ ಸುಡೇಲೆ ಸೇರಿದ್ದಾರೆ. ಬಂಧಿಯಾದ ಒಂದು ದಿನದ ನಂತರ ಸುರೇಶ್ ಸುಡೇಲೆ ಸೇರಿದಂತೆ ಏಳು ಮಂದಿಗೆ ಜಾಮೀನು ಸಿಕ್ಕಿತು. ಆಶ್ರಮದ ತಂಡವು ದೂರು ದಾಖಲಿಸಲು ಉತ್ಸುಕವಾಗಿಲ್ಲದ ಕಾರಣ ಅವರು ತಪ್ಪಿತಸ್ಥರಲ್ಲ ಎಂದು ಪೊಲೀಸರು ಹೇಳುತ್ತಾರೆ. ಪೊಲೀಸರು ಸುರೇಶ್ ಸುಡೇಲೆ ಮತ್ತು ಇತರರನ್ನು ಕಾನೂನಿನ ತುಲನಾತ್ಮಕವಾಗಿ ಚಿಕ್ಕ ಸೆಕ್ಷನ್ ಅಡಿಯಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಅವರು ತಕ್ಷಣವೇ ಜಾಮೀನು ಪಡೆಯಲು ಸಾಧ್ಯವಾಯಿತು. ಆದರೆ ಸುರೇಶ್ ಸುಡೇಲೆ ಹಿಂಸಾತ್ಮಕ ಹಿನ್ನೆಲೆಯನ್ನು ಹೊಂದಿದ್ದು ಅದು ಪೊಲೀಸರ ಗಮನದಿಂದ ತಪ್ಪಿಸಿಕೊಂಡಂತೆ ಕಂಡುಬರುತ್ತದೆ. 2011 ರಲ್ಲಿ ಭೋಪಾಲ್ ಮೂಲದ ಉದ್ಯಮಿ ಭಾಗ್ಚಂದ್ ಹತ್ಯೆಗೆ ಶಿಕ್ಷೆಗೊಳಗಾದ ಸುರೇಶ್ ಸುಡೇಲೆ ನಾಲ್ಕು ವರ್ಷಗಳ ನಂತರ ಜಾಮೀನು ಪಡೆದಿದ್ದರು ಎನ್ನುವ ವಿಚಾರ ಗಮನಾರ್ಹವಾಗಿದೆ.
ಸುರೇಶ್ ಸುಡೇಲೆ ಅವರ ಜಾಮೀನು ರದ್ದು
ಪ್ರಕಾಶ್ ಝಾ ಅವರ ಮೇಲಿನ ಹಲ್ಲೆಯ ನಂತರ ಕೊಲೆ ಪ್ರಕರಣದಲ್ಲಿ ಸುರೇಶ್ ಸುಡೇಲೆ ಅವರ ಜಾಮೀನು ರದ್ದುಗೊಳಿಸಲು ಪೊಲೀಸರು ತಕ್ಷಣ ನ್ಯಾಯಾಲಯಕ್ಕೆ ಹೋಗಬೇಕಿತ್ತು. ಆದರೆ ಪೊಲೀಸರು ಹೋಗಲಿಲ್ಲ ಎಂದು ಕಾನೂನು ತಜ್ಞರು ಸೂಚಿಸುತ್ತಾರೆ. ಈ ಕುರಿತ ಪ್ರಶ್ನೆಗೆ ರಾಜ್ಯ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಗೃಹ ಸಚಿವ ನರೋತ್ತಮ್ ಮಿಶ್ರಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರೊಂದಿಗಿರುವ ಅನೇಕ ಚಿತ್ರಗಳಲ್ಲಿ ಸುರೇಶ್ ಸುಡೇಲೆ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಆಡಳಿತಾರೂಢ ಬಿಜೆಪಿಯು ಕ್ರಿಮಿನಲ್ಗಳಿಗೆ ಆಶ್ರಯ ನೀಡುತ್ತಿದೆ. ಸುರೇಶ್ ಸುಡೇಲೆ ಅವರ ರಾಜಕೀಯ ಸಂಪರ್ಕವನ್ನು ಬಿಜೆಪಿ ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
"ಸುರೇಶ್ ಸುಡೇಲೆ ದಾಳಿಕೋರರನ್ನು ಸಂಘಟಿಸುತ್ತಾನೆ ಮತ್ತು ರಾಜ್ಯ ಗೃಹ ಸಚಿವರು ಸೇರಿದಂತೆ ಹಲವರು ಅವನನ್ನು ಹೊಗಳುತ್ತಾರೆ. ಅವರು ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾನೂನು ಉಲ್ಲಂಘಿಸಿದ ಅಂತಹ ಜನರಿಗೆ ಸರ್ಕಾರ ಆಶ್ರಯ ನೀಡಿದರೆ ನಾವು ಚಲನಚಿತ್ರ ನಗರವನ್ನು ನಿರ್ಮಿಸಿ ಹೆಚ್ಚಿನ ಉದ್ಯೋಗವನ್ನು ಹೇಗೆ ಸೃಷ್ಟಿಸುತ್ತೇವೆ? ಕೂಡಲೇ ಅವರನ್ನು ಜೈಲಿಗೆ ಕಳುಹಿಸಬೇಕು. ರಾಜ್ಯ ಸರ್ಕಾರ ಅವರಿಗೆ ಆಶ್ರಯ ನೀಡುತ್ತಿರುವುದು ದುರದೃಷ್ಟಕರ,'' ಎಂದು ರಾಜ್ಯದ ಮಾಜಿ ಕಾನೂನು ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಪಿ.ಸಿ.ಶರ್ಮಾ ಹೇಳಿದ್ದಾರೆ.
ವೆಬ್ ಸರಣಿಯ ಹೆಸರನ್ನು ಬದಲಾಯಿಸುವ ಬಲಪಂಥೀಯ ಗುಂಪಿನ ಬೇಡಿಕೆ
ದಾಳಿಯ ನಂತರ ನರೋತ್ತಮ್ ಮಿಶ್ರಾ ಅವರು ವೆಬ್ ಸರಣಿಯ ಸೆಟ್ಗಳಲ್ಲಿ ಬಜರಂಗದಳದ ಪುರುಷರ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ವೆಬ್ ಸರಣಿಯ ಹೆಸರನ್ನು ಬದಲಾಯಿಸುವ ಬಲಪಂಥೀಯ ಗುಂಪಿನ ಬೇಡಿಕೆಯನ್ನು ಅವರು ಬೆಂಬಲಿಸಿದರು. ಟ್ವೀಟ್ನಲ್ಲಿ, ಅಂತಹ ದೂರದರ್ಶನ ವಿಷಯವು "ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಸುವ ಪ್ರಯತ್ನ" ಎಂದು ಹೇಳಿದರು.
"ನಾನೂ ಇದನ್ನು ಬೆಂಬಲಿಸುತ್ತೇನೆ. ವೆಬ್ ಸರಣಿಗೆ ಆಶ್ರಮ ಎಂದು ಏಕೆ ಹೆಸರಿಸಲಾಗಿದೆ? ಎಂದು ಪ್ರಶ್ನಿಸಿದರು. ನಾವು ದಾಳಿಯನ್ನು ತಪ್ಪು ಎಂದು ಪರಿಗಣಿಸುತ್ತೇವೆ. ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದೆ. ಜೊತೆಗೆ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆದರೆ ಝಾ ಸಾಹೇಬ್ (ಪ್ರಕಾಶ್ ಝಾ), ನಿಮ್ಮ ತಪ್ಪುಗಳ ಬಗ್ಗೆಯೂ ಯೋಚಿಸಿ" ಎಂದು ವೆಬ್ ಸರಣಿಯನ್ನು ಉಲ್ಲೇಖಿಸಿ ಮಿಶ್ರಾ ಹೇಳಿದ್ದಾರೆ.
ಜಾಮೀನು ರದ್ದುಪಡಿಸುವ ಬೇಡಿಕೆಗಳ ಬಗ್ಗೆ ಎನ್ಡಿಟಿವಿ ಪ್ರಶ್ನೆ
ಸುರ್ಹೆಲೆ ಅವರ ಹಿಂದಿನ ಬಗ್ಗೆ ಮತ್ತು ಅವರ ಜಾಮೀನು ರದ್ದುಪಡಿಸುವ ಬೇಡಿಕೆಗಳ ಬಗ್ಗೆ ಎನ್ಡಿಟಿವಿ ಪ್ರಶ್ನಿಸಿದಾಗ ಅವರು ತಪ್ಪಿಸಿಕೊಳ್ಳುತ್ತಿದ್ದರು. "ನಾವು ಪ್ರಕಾಶ್ ಝಾ ಅವರಿಗೆ ಬೆದರಿಕೆ ಹಾಕಿಲ್ಲ, ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ಭೋಪಾಲ್ನಿಂದ ಅವರ ಬೌನ್ಸರ್ಗಳು ಮೊದಲು ನಮ್ಮ ಮೇಲೆ ದಾಳಿ ಮಾಡಿದರು ನಂತರ ಈ ಘಟನೆ ಸಂಭವಿಸಿದೆ" ಎಂದು ಅವರು ಹೇಳಿದರು. ಆದರೆ ಸುದೇಲೆ ಜಾಮೀನಿನ ಮೇಲಿನ ನಿರ್ದಿಷ್ಟ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲಿಲ್ಲ. ವೆಬ್ ಸೀರೀಸ್ ಸೆಟ್ನಲ್ಲಿ ಬಜರಂಗದಳದ ಸದಸ್ಯರ ಗುಂಪು ಹಲ್ಲೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಹಿಂದೂಗಳ ಧಾರ್ಮಿಕ ಗುರುಗಳನ್ನು ಅವಮಾನಕರ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಆಶ್ರಮ್-3 ವೆಬ್ ಸೀರೀಸ್ ಚಿತ್ರೀಕರಣದ ಸೆಟ್ ಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಸೆಟ್ ನ್ನು ಧ್ವಂಸ ಮಾಡಿದ್ದರು. ಭೋಪಾಲ್ ನಲ್ಲಿ ಈ ವೆಬ್ ಸೀರೀಸ್ನ ಚಿತ್ರೀಕರಣ ನಡೆಯುತ್ತಿತ್ತು. ವೆಬ್ ಸೀರೀಸ್ ನಿರ್ದೇಶಕ ಪ್ರಕಾಶ್ ಝಾ ವಿರುದ್ಧ ಹಿಂದೂಗಳನ್ನು ತಪ್ಪಾಗಿ ಚಿತ್ರೀಕರಿಸಿರುವ ಆರೋಪ ಮಾಡಿರುವ ಬಜರಂಗದಳ ಕಾರ್ಯಕರ್ತರು ಆತನ ವಿರುದ್ಧ ಮಸಿ ಎರಚಿ ಪ್ರತಿಭಟನೆ ನಡೆಸಿದ್ದರು. ವೆಬ್ ಸೀರೀಶ್ ತಂಡಕ್ಕೆ ಸೇರಿದ ಎರಡು ಬಸ್ ಗಳ ಗಾಜುಗಳು ಬಜರಂಗದಳ ಕಾರ್ಯಕರ್ತರ ಆಕ್ರೋಶಕ್ಕೆ ಪುಡಿಯಾಗಿದ್ದು ಈ ವೆಬ್ ಸೀರೀಸ್ ನ ಚಿತ್ರೀಕರಣ ಮುಂದುವರೆಯುವುದಕ್ಕೆ ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಕಾರ್ಯಕರ್ತರು ರವಾನಿಸಿದ್ದರು. ಅರೇರಾ ಹಿಲ್ಸ್ ನ ಪ್ರದೇಶದಲ್ಲಿರುವ ಹಳೆಯ ಜೈಲಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ನಡೆದಿತ್ತು. ಹಿಂದೂಗಳನ್ನು ಅವಮಾನಿಸುವ, ಮಹಿಳೆಯರನ್ನು ಧಾರ್ಮಿಕ ಗುರುಗಳು ವಂಚಿಸುವ ಅಶ್ಲೀಲ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಲಾಗಿದ್ದು ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬುದು ಸಂಘಟನೆಯ ಪ್ರಮುಖ ಆರೋಪವಾಗಿದೆ.
Recommended Video
ಆಶ್ರಮ್ನ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ
ವೆಬ್ ಸೀರೀಸ್ ಬಗ್ಗೆ ಮಾತನಾಡಿರುವ ಬಜರಂಗದಳದ ರಾಜ್ಯ ಸಂಚಾಲಕರು, ಭೋಪಾಲ್ನಲ್ಲಿ ಆಶ್ರಮ್ನ ಚಿತ್ರೀಕರಣಕ್ಕೆ ಅವಕಾಶ ನೀಡುವುದಿಲ್ಲ. ಪ್ರಕಾಶ್ ಝಾ ಹಿಂದೂಗಳ ಆಶ್ರಮದಲ್ಲಿನ ಪದ್ಧತಿಗಳನ್ನು ತಪ್ಪಾಗಿ ಚಿತ್ರೀಕರಿಸಿದ್ದಾರೆ. ಆಶ್ರಮದಲ್ಲಿನ ಗುರುಗಳು ಮಳೆಯರನ್ನು ವಂಚಿಸುವ ದೃಶ್ಯಗಳನ್ನು ವೆಬ್ ಸೀರೀಸ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳಿಂದ ಸಾಮಾಜಿಕ ಮೌಲ್ಯಗಳನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಆಶ್ರಮಗಳಿವೆ. ವೆಬ್ ಸೀರೀಸ್ ನಲ್ಲಿ ತೋರಿಸಿರುವುದರಲ್ಲಿ ಯಾವುದೇ ಸತ್ಯವೂ ಇಲ್ಲ.ಇದೇ ರೀತಿಯ ವೆಬ್ ಸೀರೀಸ್ ಗಳನ್ನು ಬೇರೆ ಧರ್ಮದ ಬಗ್ಗೆ ಮಾಡಲು ಝಾಗೆ ಧೈರ್ಯ ಇದೆಯೇ? ಎಂದು ಪ್ರಶ್ನಿಸಿದ್ದಾರೆ.