Get Updates
Get notified of breaking news, exclusive insights, and must-see stories!

ನಗರ ನಕ್ಸಲರ ಜೊತೆಯಲ್ಲಿರುವ ಕಾಂಗ್ರೆಸ್ ಪಕ್ಷ ಕಂಪನಿಯಂತೆ ಕಾರ್ಯನಿರ್ವಹಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

ಭೋಪಾಲ್‌, ಸೆಪ್ಟೆಂಬರ್‌ 25: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಲವು ವರ್ಷಗಳ ಕಾಲ ಭಾರತದ ಜನರನ್ನು ಬಡವರನ್ನಾಗಿ ಕಾಂಗ್ರೆಸ್‌ ಇರಿಸಿದೆ. ಈಗ ಇದೇ ಪಕ್ಷವು ನಗರ ನಕ್ಸಲರ ಜೊತೆಯಲ್ಲಿದೆ. ಇದು ಕಂಪನಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, 'ಕಾಂಗ್ರೆಸ್ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಬಯಸುವುದಿಲ್ಲ. ದೇಶವನ್ನು ಬದಲಾಯಿಸಲೂ ಬಯಸುವುದಿಲ್ಲ' ಎಂದು ಟೀಕಿಸಿದ್ದಾರೆ.

‘Congress with urban Naxalites, party run like a company’: PM Narendra Modi in Bhopal

'ಕಾಂಗ್ರೆಸ್ ಪಕ್ಷವು ಒಂದೇ ಕುಟುಂಬವನ್ನು ವೈಭವೀಕರಿಸುವಲ್ಲಿ ನಿರತವಾಗಿದೆ. ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವವನ್ನು ಕುಟುಂಬ ವ್ಯವಸ್ಥೆಯಾಗಿ ಪರಿವರ್ತಿಸಿದೆ. ಇದು ಭಾರತದಲ್ಲಿ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಲೇ ಇದೆ. ಬಡವರು ಯಾವಾಗಲೂ ಸಹಾಯ ಹಸ್ತ ಚಾಚಬೇಕು ಎನ್ನುವಂತಹ ವ್ಯವಸ್ಥೆಯನ್ನು ಕಾಂಗ್ರೆಸ್ ಹುಟ್ಟು ಹಾಕಿದೆ. ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ದೇಶದ ಜನರನ್ನು ಬಡವರನ್ನಾಗಿ ಮಾಡಿದೆ' ಎಂದು ಮೋದಿ ಹೇಳಿದ್ದಾರೆ.

'ಕಾಂಗ್ರೆಸ್‌ಗೆ ದೇಶದ ಹಿತಾಸಕ್ತಿಯನ್ನು ನೋಡುವ ಅಥವಾ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಅದಕ್ಕಾಗಿಯೇ ಅಭಿವೃದ್ಧಿ ಹೊಂದಿದ ಭಾರತಕ್ಕೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯನ್ನು ಅದು ಟೀಕಿಸುತ್ತಿದೆ' ಎಂದು ತಿಳಿಸಿದ್ದಾರೆ.

‘Congress with urban Naxalites, party run like a company’: PM Narendra Modi in Bhopal

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವಕರು, ಬಡವರು, ಮಹಿಳೆಯರು ಹಾಗೂ ಮೊದಲ ಬಾರಿಯ ಮತದಾರರು ಕಾಂಗ್ರೆಸ್‌ ಮತಹಾಕದಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ.

'50 ವರ್ಷಗಳ ಹಿಂದೆ ಗರೀಬಿ ಹಠಾವೋ ಎಂಬ ಘೋಷಣೆಯನ್ನು ಮಾಡಿದವರು ಯಾರು? ಕಾಂಗ್ರೆಸ್ ತನ್ನ ಭರವಸೆಯನ್ನು ಈಡೇರಿಸಿದೆಯೇ?' ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ನಾನು ನಿಮಗೆ ಇನ್ನೊಂದು ಅಂಕಿಅಂಶವನ್ನು ಹೇಳಲು ಬಯಸುತ್ತೇನೆ. ಕೇವಲ 5 ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ 130 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

‘Congress with urban Naxalites, party run like a company’: PM Narendra Modi in Bhopal

'ಇದು ಮೋದಿಯ ಭರವಸೆಯ ಫಲಿತಾಂಶ. ಮೋದಿ ಭರವಸೆ ನೀಡಿದಾಗ ಮತ್ತು ಬಿಜೆಪಿ ಭರವಸೆ ನೀಡಿದಾಗ ಅದು ಪ್ರತಿ ಮನೆ ಮತ್ತು ಪ್ರತಿ ಫಲಾನುಭವಿಗೆ ತಲುಪುತ್ತದೆ. ನೆನಪಿಡಿ, ಮೋದಿ ಎಂದರೆ ಪ್ರತಿಯೊಂದು ಗ್ಯಾರಂಟಿ ಈಡೇರಿಸುವ ಗ್ಯಾರಂಟಿ' ಎಂದು ಅವರು ತಿಳಿಸಿದ್ದಾರೆ.

'ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಎರಡು ದಶಕಗಳನ್ನು ಪೂರೈಸಿದೆ. ಪ್ರಥಮ ಬಾರಿಗೆ ಮತ ಹಾಕಲಿರುವ ಯುವಕರು ಬಿಜೆಪಿ ಸರಕಾರವನ್ನು ಮಾತ್ರ ನೋಡಿದ್ದಾರೆ. ಈ ಯುವಕರು ಕಾಂಗ್ರೆಸ್‌ನ ಕೆಟ್ಟ ಆಡಳಿತ ಮತ್ತು ದುಷ್ಕೃತ್ಯಗಳನ್ನು ನೋಡದಿರುವುದು ಅದೃಷ್ಟ' ಎಂದೂ ಅವರು ಪ್ರತಿಪಾದಿಸಿದ್ದಾರೆ.

'ಸ್ವಾತಂತ್ರ್ಯದ ನಂತರ, ಮಧ್ಯಪ್ರದೇಶವನ್ನು ಕಾಂಗ್ರೆಸ್ ದೀರ್ಘಕಾಲ ಆಳಿತು. ಆದರೆ, ಇದು ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಮಧ್ಯಪ್ರದೇಶವನ್ನು ಬಿಮಾರು ಮಧ್ಯಪ್ರದೇಶವನ್ನಾಗಿ ಪರಿವರ್ತಿಸಿತು' ಎಂದು ಅವರು ಆರೋಪಿಸಿದ್ದಾರೆ.

'ರಾಜಸ್ಥಾನದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಕಾಂಗ್ರೆಸ್ ಅಲ್ಲಿ ಹೇಗೆ ವಿನಾಶವನ್ನು ತಂದಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ.

'ಕಾಂಗ್ರೆಸ್‌ ವಂಶಾಡಳಿತ ಪಕ್ಷ, ಸಾವಿರಾರು ಕೋಟಿ ಹಗರಣಗಳ ಇತಿಹಾಸವನ್ನು ಸೃಷ್ಟಿಸಿದ ಪಕ್ಷ, ವೋಟ್ ಬ್ಯಾಂಕ್ ಅನ್ನು ಸಮಾಧಾನಪಡಿಸುವ ಪಕ್ಷವಾಗಿದೆ. ಅದಕ್ಕೆ ಸಣ್ಣದೊಂದು ಅವಕಾಶ ಸಿಕ್ಕರೆ ಮಧ್ಯಪ್ರದೇಶವು ದೊಡ್ಡ ನಷ್ಟವನ್ನು ಅನುಭವಿಸುತ್ತದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+