ಅಜ್ಜಾ... ನಿನಗೆ ಹ್ಯಾಪಿ ಮ್ಯಾರೀಡ್ ಲೈಫ್ ಎಂದು ಮುಸುಮುಸು ನಕ್ಕ ನೆಟ್ಟಿಗರು....
ಭೋಪಾಲ್ ಜನವರಿ 30: ಇತ್ತೀಚೆಗೆ ಇಳಿ ವಯಸ್ಸಿನಲ್ಲಿ ಮದುವೆಯಾಗುವ ಘಟನೆಗಳು ಹೆಚ್ಚು ವೈರಲ್ ಆಗುತ್ತಿವೆ. ಹಲ್ಲು ಬೀಳುವ ಹಾಗೂ ಎದ್ದು ಓಡಾಡಲು ಶಕ್ತಿ ಇಲ್ಲದ ವಯಸ್ಸಿನಲ್ಲಿ ಕೆಲ ಜನ ದಾಂಪತ್ಯ ಜೀವನಕ್ಕೆ ಕಾಲಿಡುವುದು ಕಂಡು ಬರುತ್ತಿದೆ. ವಯಸ್ಸಿನ ಅಂತರದ ಬಗ್ಗೆ ತಲೆಕೆಡಿಸಿಕೊಳ್ಳದ ಕೆಲ ಮಂದಿ ತಮಗಿಂತ ಕಡಿಮೆ ವಯಸ್ಸಿನವರೊಂದಿಗೆ ಮದುವೆಯಾಗುತ್ತಿದ್ದಾರೆ. ಸದ್ಯ ಇಂಥಹದ್ದೇ ಘಟನೆಯೊಂದು ಭೋಪಾಲ್ನಲ್ಲಿ ನಡೆದಿದೆ.
103 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹಬೀಬ್ ನಜರ್ ಅವರು 49 ವರ್ಷದ ಫಿರೋಜ್ ಜಹಾನ್ ಅವರನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದು ಅವರ ಮೂರನೇ ಮದುವೆಯಾಗಿದೆ. 54 ವರ್ಷ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆ ಸಮಾರಂಭದ ನಂತರ ಹಬೀಬ್ ನಜರ್ ಅವರು ಆಟೋ ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿವಾಹ ಸಂಚಲನ ಮೂಡಿಸಿದೆ. ಹಬೀಬ್ ನಜರ್ ಅವರು ಭೋಪಾಲ್ನ ಇತ್ವಾರಾ ಪ್ರದೇಶದಲ್ಲಿ ಫಿರೋಜ್ ಜಹಾನ್ ಅವರನ್ನು ವಿವಾಹವಾಗಿದ್ದಾರೆ.
103 ವರ್ಷದ ವ್ಯಕ್ತಿಗೆ ಮದುವೆ
ಎರಡನೇ ಪತ್ನಿ ತೀರಿಕೊಂಡ ನಂತರ ಒಂಟಿತನ ಅನುಭವಿಸಿದ ನಾಜರ್ ಮೂರನೇ ಮದುವೆಯಾಗಲು ನಿರ್ಧರಿಸಿದ್ದರು. ಹೀಗಾಗಿ ತಮಗಿಂತ 54 ವರ್ಷ ವಯಸ್ಸಿನ ಅಂತರವಿರುವ ಮಹಿಳೆಯೊಂದಿಗೆ ಕಳೆದ ವರ್ಷ ಮಾತುಕತೆ ಮಾಡಿಕೊಂಡಿದ್ದರು. ಇತ್ತೀಚೆಗೆ ಅವರ ನಿಕಾಹ್ ಸಮಾರಂಭದ ನಂತರ ನಾಜರ್ ಮತ್ತು ಜಹಾನ್ ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗಿದ ವೀಡಿಯೊ ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ.
ವೈರಲ್ ವೀಡಿಯೊದಲ್ಲಿ ನಾಜರ್ ಮಾತನಾಡಿರುವುದನ್ನು ಕೇಳಬಹುದು. "ಕಿಸಿ ಚೀಜ್ ಕಿ ಕಾಮಿ ನಹೀ ಹೈ. ಕಾಮಿ ಹಮಾರೆ ದಿಲೋನ್ ಮೇ ಹೈ (ಯಾವುದಕ್ಕೂ ಕೊರತೆಯಿಲ್ಲ. ಕೊರತೆ ನಮ್ಮ ಹೃದಯದಲ್ಲಿದೆ)'' ಎಂದು ಅವರು ಹೇಳಿದ್ದಾರೆ. ದಂಪತಿಗಳ ಹೊಸ ಪ್ರಯಾಣಕ್ಕಾಗಿ ಜನರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಹಬೀಬ್ ನಜರ್ ಬಗ್ಗೆ
ನಾಜರ್ ಮೊದಲ ಬಾರಿಗೆ ನಾಸಿಕ್ನಲ್ಲಿ ವಿವಾಹವಾದರು. ಅವರ ಮೊದಲ ಪತ್ನಿ ನಿಧನರಾದ ನಂತರ, ಅವರು ಲಕ್ನೋದಲ್ಲಿ ಎರಡನೇ ಬಾರಿಗೆ ವಿವಾಹವಾದರು.
"ನನಗೆ 103 ವರ್ಷ, ಮತ್ತು ನನ್ನ ಹೆಂಡತಿಗೆ 49 ವರ್ಷ. ನಾನು ನಾಸಿಕ್ನಲ್ಲಿ ಮೊದಲ ಬಾರಿಗೆ ಮದುವೆಯಾದೆ. ಅವಳು ತೀರಿಕೊಂಡ ನಂತರ, ನಾನು ಮತ್ತೆ ಮದುವೆಯಾಗಲು ಲಕ್ನೋಗೆ ಹೋಗಿದ್ದೆ. ನನ್ನ ಎರಡನೇ ಹೆಂಡತಿಯೂ ಪರಲೋಕಕ್ಕೆ ಹೊರಟು ಹೋದಳು. ನನಗೆ ಒಂಟಿತನ ಕಾಡುತ್ತಿತ್ತು. ಹಾಗಾಗಿ ನಾನು ಮತ್ತೆ ಮದುವೆಯಾಗಿದ್ದೇನೆ'' ಎಂದು ನಾಜರ್ ಹೇಳಿದರು.
ಪತಿಯ ನಿಧನದ ನಂತರ ಜಹಾನ್ ಕೂಡ ಒಂಟಿಯಾಗಿ ವಾಸಿಸುತ್ತಿದ್ದಳು. 103 ವರ್ಷದ ನಾಜರ್ನನ್ನು ಮದುವೆಯಾಗುವುದು ತನ್ನ ನಿರ್ಧಾರವಾಗಿತ್ತು. ಅವರನ್ನು ಮದುವೆಯಾಗುವಂತೆ ಯಾರೂ ಒತ್ತಾಯಿಸಲಿಲ್ಲ ಎಂದು ಜಹಾನ್ ಅವರು ಹೇಳಿದರು. "ನನ್ನ ಪತಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಅವರಿಗೆ ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲ" ಎಂದು ಅವರು ಹೇಳಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications