ವಂದೇ ಭಾರತ್ನಲ್ಲಿ ಮೂತ್ರ ವಿಸರ್ಜನೆಗೆ ಹೋಗಿ 6,000 ಕಳೆದುಕೊಂಡ ವ್ಯಕ್ತಿ
ಭೋಪಾಲ್, ಜುಲೈ 21: ಹೈದರಾಬಾದ್ನ ವ್ಯಕ್ತಿಯೊಬ್ಬರು ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಶೌಚಾಲಯವನ್ನು ಬಳಸಿದ್ದಕ್ಕಾಗಿ ಬರೋಬ್ಬರಿ 6,000 ಕಳೆದುಕೊಂಡಿರುವ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಹೈದರಾಬಾದ್ ಮೂಲದ ಅಬ್ದುಲ್ ಖಾದಿರ್ ತನ್ನ ಪತ್ನಿ ಮತ್ತು ಎಂಟು ವರ್ಷದ ಮಗನೊಂದಿಗೆ ಮಧ್ಯಪ್ರದೇಶದ ಸಿಂಗ್ರೌಲಿಗೆ ತೆರಳುತ್ತಿದ್ದರು. ಘಟನೆ ನಡೆದ ದಿನ ಅವರು ಭೋಪಾಲ್ಗೆ ಆಗಮಿಸಿದ್ದರು ಮತ್ತು ಸಿಂಗ್ರೌಲಿಗೆ ರೈಲು ಹತ್ತಲು ಹೊರಟಿದ್ದರು.

ಖಾದಿರ್ ಅವರು ರೈಲ್ವೇ ಪ್ಲಾಟ್ಫಾರ್ಮ್ನಲ್ಲಿದ್ದಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಬಾತ್ ರೂಂ ಕಂಡು ಬರಲಿಲ್ಲ. ಆಗ ಆತ ಪಕ್ಕದಲ್ಲಿ ಇಂದೋರ್ಗೆ ಹೋಗುವ ವಂದೇ ಭಾರತ್ ರೈಲಿನಲ್ಲಿ ನಿಲ್ದಾಣದಲ್ಲಿ ನಿಂತಿದ್ದ ಕಂಡು ಅದರ ವಾಶ್ರೂಮ್ ಅನ್ನು ಬಳಸಲು ಹತ್ತಿದನು.
ಕೆಲಸ ಮುಗಿಸಿ ಅವರೇನೋ ವಂದೇ ಭಾರತ್ ರೈಲಿನ ಶೌಚಾಲಯದಿಂದ ಹೊರಬಂದರು. ಆದರೆ ಆ ವೇಳೆ ರೈಲಿನ ಬಾಗಿಲುಗಳು ಲಾಕ್ ಆಗಿದ್ದವು. ರೈಲು ಪ್ಲಾಟ್ಫಾರ್ಮ್ನಿಂದ ಚಲಿಸಲು ಪ್ರಾರಂಭಿಸಿರುವುದು ಗಮನಕ್ಕೆ ಬಂದಿತು, ಇದರಿಂದ ರೈಲಿನಿಂದ ಇಳಿಯಲಾಗದೆ ಪರದಾಡಿದರು. ಆತಂಕಗೊಂಡ ಖಾದಿರ್ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಕೋಚ್ಗಳಲ್ಲಿ ನಿಂತಿದ್ದ ಮೂವರು ಟಿಕೆಟ್ ಕಲೆಕ್ಟರ್ಗಳಿಂದ ಸಹಾಯ ಪಡೆಯಲು ಪ್ರಯತ್ನಿಸಿದರು, ಆದರೆ ಅವರೆಲ್ಲರೂ ಡ್ರೈವರ್ ಮಾತ್ರ ಬಾಗಿಲು ತೆರೆಯಬಹುದು ಎಂದು ಹೇಳಿದರು.
ಆದರೆ ಅವರು ಚಾಲಕನ ಬಳಿ ಹೋಗಲು ಯತ್ನಿಸಿದಾಗ ಖಾದಿರ್ನನ್ನು ತಡೆದರು. ಕೊನೆಗೆ ಸರಿಯಾದ ಟಿಕೆಟ್ ಇಲ್ಲದೆ ರೈಲು ಹತ್ತಿದ ಪರಿಣಾಮವಾಗಿ ಖಾದಿರ್ ₹ 1,020 ದಂಡವನ್ನು ಪಾವತಿಸಬೇಕಾಯಿತು. ರೈಲು ಉಜ್ಜಯಿನಿಗೆ ಬಂದಾಗ ಅವರು ತಮ್ಮ ಪತ್ನಿ, ಮಗುವಿನ ಬಳಿ ಹೋಗಲು ಈ ಕಡೆಯಿಂದ ಭೋಪಾಲ್ಗೆ ಬಸ್ ಟಿಕೆಟ್ಗಾಗಿ ₹ 750 ಪಾವತಿಸಿದರು.
ಇತ್ತ ಅವರ ಪತ್ನಿ ಪತಿ ಬಗ್ಗೆ ಚಿಂತಿತರಾಗಿ ಸಿಂಗ್ರೌಲಿ-ಬೌಂಡ್ ದಕ್ಷಿಣ್ ಎಕ್ಸ್ಪ್ರೆಸ್ ರೈಲನ್ನು ಹತ್ತದಿರಲು ನಿರ್ಧರಿಸಿದರು. ಅವರು ತಮ್ಮ ಪ್ರವಾಸಕ್ಕಾಗಿ ಕಾಯ್ದಿರಿಸಿದ ₹ 4,000 ಮೌಲ್ಯದ ಟಿಕೆಟ್ಗಳನ್ನು ಬಳಸಲಾಗಲಿಲ್ಲ. ಇದರ ಪರಿಣಾಮವಾಗಿ ಅಬ್ದುಲ್ ಖಾದಿರ್ ವಂದೇ ಭಾರತ್ ರೆಸ್ಟ್ ರೂಂ ಅನ್ನು ಬಳಸಿದ್ದಕ್ಕಾಗಿ ಸುಮಾರು ₹ 6,000 ಕಳೆದುಕೊಂಡರು ಎಂದು ವರದಿ ತಿಳಿಸಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಲ್ಲಿ ತುರ್ತು ವ್ಯವಸ್ಥೆ ಇಲ್ಲದಿರುವುದರಿಂದ ಅವರ ಕುಟುಂಬ ಆತಂಕಗೊಳ್ಳಬೇಕಾಯಿತು ಎಂದು ಖಾದಿರ್ ಆರೋಪಿಸಿದರು. ಖಾದಿರ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಭೋಪಾಲ್ ರೈಲ್ವೆ ವಿಭಾಗದ ಪಿಆರ್ಒ ಸುಬೇದಾರ್ ಸಿಂಗ್, ವಂದೇ ಭಾರತ್ ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಘೋಷಣೆ ಮಾಡಲಾಗುತ್ತದೆ.
ಯಾವ ದಿಕ್ಕಿನಲ್ಲಿ ಬಾಗಿಲು ತೆರೆಯುತ್ತದೆ ಮತ್ತು ಬಾಗಿಲುಗಳನ್ನು ಲಾಕ್ ಮಾಡಲಾಗುತ್ತಿದೆ ಎಂದು ಸೂಚಿಸಲಾಗುತ್ತದೆ. ಅಪಘಾತಗಳನ್ನು ತಡೆಗಟ್ಟಲು ಮತ್ತು ಪ್ರಯಾಣಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ರೈಲಿನಲ್ಲಿ ಈ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಉನ್ನತ ಅಧಿಕಾರಿಗಳಿಂದ ಆದೇಶವನ್ನು ಪಡೆದ ನಂತರವಷ್ಟೇ ವಂದೇ ಭಾರತ್ ರೈಲನ್ನು ನಿಲ್ಲಿಸಬಹುದು ಎಂದು ಸಿಂಗ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications