ಹೋಟೆಲ್ ಉದ್ಯಮ ಆರಂಭಿಸಲು ಅವಕಾಶ ನೀಡುವಂತೆ ಸಿಎಂಗೆ ಮನವಿ
ಬೆಂಗಳೂರು, ಮೇ 16: ಲಾಕ್ಡೌನ್ನಿಂದ ಹೋಟೆಲ್ ಉದ್ಯಮಗಳು ಬಂದ್ ಆಗಿದ್ದು, ಅವುಗಳ ಆರಂಭಕ್ಕೆ ಅವಕಾಶ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ.
ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ನಿಂದ ಯಡಿಯೂರಪ್ಪಗೆ ಹೋಟೆಲ್ ಉದ್ಯಮ ಆರಂಭಿಸಲು ಅವಕಾಶ ನೀಡುವಂತೆ ವಿನಂತಿಸಲಾಗಿದೆ.
ಮಾಸ್ಕ್ ಇಲ್ಲದಿದ್ದರೆ ಮೈಸೂರಿನ ಈ ಹೋಟೆಲ್ನಲ್ಲಿ ಪಾರ್ಸಲ್ ಸಿಗಲ್ಲ
ಲಾಕ್ ಡೌನ್ ನಿಂದ ಹೋಟೆಲ್ ಉದ್ಯಮ ಮುಳುಗಿದಂತಾಗಿದೆ. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆಯಾಗಿದೆ ಎಂದು ಸಿಎಂಗೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಸ್. ರಾವ್ ಮನವಿ ಮಾಡಿಕೊಂಡಿದ್ದಾರೆ.
ಸದ್ಯ, ಹೋಟೆಲ್ಗಳು ಪಾರ್ಸಲ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೂ, ಅನೇಕ ಹೋಟೆಲ್ಗಳು ಖಾಲಿ ಹೊಡೆಯುತ್ತಿದೆ. ಕೊರೊನಾ ಬೀತಿ ನಡುವೆ ಜನರು ಹೋಟೆಲ್ಗೆ ಬರುವುದು ಕಡಿಮೆಯಾಗಿದೆ.
ಅನೇಕ ಹೋಟೆಲ್ಗಳಲ್ಲಿ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಪಾರ್ಸಲ್ ನೀಡಿತ್ತಿದ್ದು, ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ಪಾಲನೆ ಮಾಡಲಾಗುತ್ತಿದೆ.
English summary
Hotel owners association requested to chief minister BS Yediyurappa to give permission for reopen hotels.