ವಿಧಾನಸೌಧ ಸೇರಿ ಉಗ್ರರ ಟಾರ್ಗೆಟ್ ಲಿಸ್ಟ್

ಭಾನುವಾರ ಮಧ್ಯಾಹ್ನದ ವೇಳೆಯ ಗಣತಿಯಂತೆ ಒಟ್ಟು 17 ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಸಂಚು ಹಾಗೂ ಟಾರ್ಗೆಟ್ ಅಸಮಗ್ರ ಪಟ್ಟಿ ಇಲ್ಲಿದೆ.
ಟಾರ್ಗೆಟ್ ಕಂಪನಿಗಳು, ಸೌಧಗಳು, ತಾಣಗಳು:
* ಡಿಆರ್ ಡಿಒ
* ಎಚ್ ಎಎಲ್
* ಇಸ್ರೋ
* ಐಐಎಸ್ ಇ
* ವಿಧಾನಸೌಧ
* ಬಿಐಎಎಲ್
* ವಿಕಾಸಸೌಧ
* ಚಿನ್ನಸ್ವಾಮಿ ಕ್ರೀಡಾಂಗಣ
* ಇಸ್ಕಾನ್
* ಎಲೆಕ್ಟ್ರಾನಿಕ್ಸ್ ಸಿಟಿ ಇನ್ಫೋಸಿಸ್
* ವಿಪ್ರೋ
* ಐಬಿಎಂ
ದೇಗುಲಗಳು:
* ಧರ್ಮಸ್ಥಳ ಮಂಜುನಾಥಸ್ವಾಮಿ ದೇಗುಲ
* ಕೊಲ್ಲೂರು ಮೂಕಾಂಬಿಕಾ ದೇಗುಲ
* ಉಡುಪಿ ಶ್ರೀಕೃಷ್ಣ ಮಠಗಳು
* ಮಂಗಳೂರಿನ ಗೋಕರ್ಣನಾಥೇಶ್ವರ ದೇಗುಲ, ಕುದ್ರೋಳಿ ದೇಗುಲ
* ಕೈಗಾ ಅಣು ವಿದ್ಯುತ್ ಸ್ಥಾವರ
* ಕಾರಾವಾರದ ಸೀ ಬರ್ಡ್ ನೌಕಾನೆಲೆ
* ಮೈಸೂರು ಅರಮನೆ, ಅಣೆಕಟ್ಟುಗಳು
ಎಷ್ಟು ಜನ ಇದ್ದಾರೆ?: ಸುಮಾರು 20 ಜನರ ತಂಡಕ್ಕೆ ತರಬೇತಿ ನೀಡಲಾಗಿದ್ದು, ಎಲ್ಲರೂ ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಸಂಪರ್ಕಿತರು. ಎಲ್ಲೆಲ್ಲಿ ಕಾರ್ಯಾಚರಣೆ: ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದಾರೆ.[ಬಂಧಿತ ಶಂಕಿತ ಉಗ್ರರ ಪಟ್ಟಿಗಾಗಿ ಕ್ಲಿಕ್ ಮಾಡಿ]
ಆರ್ಥಿಕ ನೆರವು : ಉಗ್ರರಿಗೆ ಬೇಕಾದ ಆರ್ಥಿಕ ನೆರವು ಒದಗಿಸಲು ಸಿಮಿ ಸಂಘಟನೆ ಸಂಪರ್ಕ ಹೊಂದಿರುವ ಹೋಟೆಲ್ ಉದ್ಯಮಿಯೊಬ್ಬರನ್ನು ಬಳಸಿಕೊಳ್ಳಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ನೆಲೆಸಿರುವ ಈತನ ಬಗ್ಗೆ ಸುಳಿವು ಇನ್ನೂ ಸಿಕ್ಕಿಲ್ಲ. ಬಂಧಿತ ಶಂಕಿತ ಉಗ್ರರಿಗೆ ಬೇಕಾದ ಸಕಲ ವ್ಯವಸ್ಥೆಯ ಜವಾಬ್ದಾರಿಯನ್ನು ಈ ವ್ಯಕ್ತಿ ಹೊತ್ತಿದ್ದ. ಶಸ್ತ್ರಾಸ್ತ್ರಗಳಿಂದ ಹಿಡಿದು ಕಾಲೇಜು ಸೀಟು ದೊರೆಕಿಸಿಕೊಡುವುದರ ತನಕ ಈತನ ಕೈಚಾಚಿದೆ ಎನ್ನಲಾಗಿದೆ.
ಅಲ್ ಖೈದಾ ಪ್ರೇರಣೆ: ಸಿಸಿಬಿ ಪೊಲೀಸರು, RAW ತಂಡದಿಂದ ವಿಚಾರಣೆಗೆ ಒಳಗಾಗಿರುವ 11 ಜನ ಶಂಕಿತರು ತಮ್ಮ ಈ ಕಾರ್ಯಾಚರಣೆಗೆ ಇಂಟರ್ನೆಟ್ ನಲ್ಲಿ ಲಭ್ಯವಿರುವ ಲಷ್ಕರ್ ಇ ಯೊಯ್ಬಾ, ಅಲ್ ಖೈದಾ ಸಂಘಟನೆಯ ಪ್ರಚೋದನಾಕಾರಿ ಭಾಷಣಗಳು ಪ್ರೇರಣೆ ನೀಡಿತು ಎಂದಿದ್ದಾರೆ. ಅಮೆರಿಕ, ಭಾರತ, ಇಸ್ರೇಲ್ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ಶಸ್ತ್ರ ಸಜ್ಜಿತ ಯುದ್ಧ ನಡೆಸುವುದು ಹೇಗೆ ಎಂಬುದು ಈ ವೆಬ್ ಮ್ಯಾಗಜೀನ್ ನಲ್ಲಿ ಇದೆ ಎಂದು ಸಿಕ್ಕಿ ಬಿದ್ದಿರುವ ಶಂಕಿತ ಉಗ್ರ ಬಾಯ್ಬಿಟ್ಟಿದ್ದಾನೆ.
ಯಾವ ಸಮಯ ನಿಗದಿ: ಪತ್ರಕರ್ತರು, ರಾಜಕಾರಣಿ ಹಾಗೂ ಹಿಂದೂ ಸಂಘಟನೆ ಮುಖಂಡರ ಹತ್ಯೆ ಆ.31ರೊಳಗೆ ಮುಗಿಯಲು ಸ್ಕೆಚ್ ಹಾಕಲಾಗಿತ್ತು. ಉಳಿದಂತೆ ಸರಣಿ ಸ್ಫೋಟ, ದೇಗುಲ ಧ್ವಂಸ, ಜನನಿಬಿಡ ಪ್ರದೇಶಗಳಲ್ಲಿ ಕೋಲಾಹಾಲ ಎಬ್ಬಿಸುವ ಕೃತ್ಯಕ್ಕೆ ಗಣೇಶ ಚತುರ್ಥಿ, ದೀಪಾವಳಿ ವೇಳೆ ಹಂತ ಹಂತವಾಗಿ ಕಾರ್ಯಚರಣೆ ಮಾಡಲು ಸಂಚು ರೂಪಿಸಲಾಗಿತ್ತು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications