ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಬ್ಬಿ ವೇದಿಕೆಯಲ್ಲಿ ಯಡಿಯೂರಪ್ಪ ಬ್ರಹ್ಮಾಸ್ತ್ರ
ಏನಾಯಿತಪಾ ಅಂದರೆ ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ದೇವರಂತೆ ಎದುರಿಗೆ ಬಂದಿದ್ದಾರೆ. ಸರಕಾರಿ ಸೌಲಭ್ಯ ಕೇಳಲು ಇದು ಸುಸಮಯ ಎಂದು ಮಹಿಳೆಯೊಬ್ಬರು ಅಮಾಯಕವಾಗಿ ಭಾವಿಸಿದ್ದೇ ಯಡವಟ್ಟಾಯಿತು. ಆಕೆ ತನ್ನ ಮಗಳೊಂದಿಗೆ ವೇದಿಕೆ ಹತ್ತಿ ನಾಡಿನ ಮಾಜಿ ದೊರೆಗೆ ಅರ್ಜಿ ನೀಡಿ ಕಾಲಿಗೆ ಬಿದ್ದರು.
ಇದನ್ನು ಕಂಡು ಮಾಜಿ ಮುಖ್ಯಮಂತ್ರಿಗಳು ಕೆಂಡಮಂಡಲವಾದರು. ಅಲ್ಲೇ ನಿಂತಿದ್ದ ಮಹಿಳಾ ಡಿವೈಎಸ್ಪಿಯನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಸಾಲದು ಅಂತ ಕೂಡಲೇ ಮಹಿಳೆಯನ್ನು ವೇದಿಕೆಯಿಂದ ಕೆಳಗೆ ಕಳುಹಿಸಿಯೇ ಬಿಟ್ಟರು. ಅರ್ಜಿ ಗತಿಯೇನಾಯಿತೋ ಆ ಚನ್ನಬಸವೇಶ್ವರನೇ ಬಲ್ಲ!
ಚನ್ನಬಸವೇಶ್ವರ ಆಣೆಗೂ ತಪ್ಪುಮಾಡಿಲ್ಲ: ಗುಬ್ಬಿ ಚನ್ನಬಸವೇಶ್ವರರ ಆಣೆಗೂ ನಾನು ಯಾವುದೇ ತಪ್ಪುಮಾಡಿಲ್ಲ. ಕಳೆದ ಮೂರು ವರ್ಷಗಳಲ್ಲಿ ವಿರೋಧಿಗಳ ಕಣ್ಣು ಕುಕ್ಕುವಂತಹ ಕೆಲಸ ಮಾಡಿದ್ದರಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ವೇದಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಯಡಿಯೂರಪ್ಪ ತುಮಕೂರು ಬೆಂಗಳೂರು ಭದ್ರಾ ಮೇಲ್ದಂಡೆ ಯೋಜನೆ ಬಂಧನ ಭೂ ಹಗರಣ ಡಿನೋಟಿಫಿಕೇಶನ್ ಜಿಲ್ಲಾಸುದ್ದಿ ಬಿಜೆಪಿ ವಿವಾದ ಲೋಕಾಯುಕ್ತ yediyurappa tumakuru arrest lokayukta bjp bangalore
English summary
Karnataka ex Chief Minister BS Yeddyurappa gets angry at woman in Gubbi, Tumkur. All that woman did was she tried to hand over an application seeking some govt help. This happened on Jan 30.
Story first published: Tuesday, January 31, 2012, 15:11 [IST]