ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿ ವೇದಿಕೆಯಲ್ಲಿ ಯಡಿಯೂರಪ್ಪ ಬ್ರಹ್ಮಾಸ್ತ್ರ

By Srinath
|
Google Oneindia Kannada News

bs-yeddyurappa-gets-angry-at-woman-gubbi-tumkur
ತುಮಕೂರು,ಜ.31: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ತಾಳ್ಮೆ ಕಳೆದುಕೊಂಡ ಪ್ರಸಂಗ ಮತ್ತೆ ನಡೆದಿದೆ. ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಜೀರ್ಣೋದ್ಧಾರಗೊಂಡಿರುವ ಗೋಸಲು ಚನ್ನಬಸವೇಶ್ವರರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ಸೋಮವಾರ ಸಂಭವಿಸಿದೆ.

ಏನಾಯಿತಪಾ ಅಂದರೆ ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ದೇವರಂತೆ ಎದುರಿಗೆ ಬಂದಿದ್ದಾರೆ. ಸರಕಾರಿ ಸೌಲಭ್ಯ ಕೇಳಲು ಇದು ಸುಸಮಯ ಎಂದು ಮಹಿಳೆಯೊಬ್ಬರು ಅಮಾಯಕವಾಗಿ ಭಾವಿಸಿದ್ದೇ ಯಡವಟ್ಟಾಯಿತು. ಆಕೆ ತನ್ನ ಮಗಳೊಂದಿಗೆ ವೇದಿಕೆ ಹತ್ತಿ ನಾಡಿನ ಮಾಜಿ ದೊರೆಗೆ ಅರ್ಜಿ ನೀಡಿ ಕಾಲಿಗೆ ಬಿದ್ದರು.

ಇದನ್ನು ಕಂಡು ಮಾಜಿ ಮುಖ್ಯಮಂತ್ರಿಗಳು ಕೆಂಡಮಂಡಲವಾದರು. ಅಲ್ಲೇ ನಿಂತಿದ್ದ ಮಹಿಳಾ ಡಿವೈಎಸ್ಪಿಯನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು. ಸಾಲದು ಅಂತ ಕೂಡಲೇ ಮಹಿಳೆಯನ್ನು ವೇದಿಕೆಯಿಂದ ಕೆಳಗೆ ಕಳುಹಿಸಿಯೇ ಬಿಟ್ಟರು. ಅರ್ಜಿ ಗತಿಯೇನಾಯಿತೋ ಆ ಚನ್ನಬಸವೇಶ್ವರನೇ ಬಲ್ಲ!

ಚನ್ನಬಸವೇಶ್ವರ ಆಣೆಗೂ ತಪ್ಪುಮಾಡಿಲ್ಲ: ಗುಬ್ಬಿ ಚನ್ನಬಸವೇಶ್ವರರ ಆಣೆಗೂ ನಾನು ಯಾವುದೇ ತಪ್ಪುಮಾಡಿಲ್ಲ. ಕಳೆದ ಮೂರು ವರ್ಷಗಳಲ್ಲಿ ವಿರೋಧಿಗಳ ಕಣ್ಣು ಕುಕ್ಕುವಂತಹ ಕೆಲಸ ಮಾಡಿದ್ದರಿಂದ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ವೇದಿಕೆಯಲ್ಲಿ ವಿಷಾದ ವ್ಯಕ್ತಪಡಿಸಿದರು.

English summary
Karnataka ex Chief Minister BS Yeddyurappa gets angry at woman in Gubbi, Tumkur. All that woman did was she tried to hand over an application seeking some govt help. This happened on Jan 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X