ರೆಡ್ಡಿ ಕಾರು ರಿಜಿಸ್ಟರೇ ಆಗಿಲ್ಲ; ಹೆಲಿಕಾಪ್ಟರ್ ಠಾಣೆಯಲ್ಲಿ ಠಿಕಾಣಿ

ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಅವರ ವೈಭವೋಪೇತ, ಐಷಾರಾಮಿ ಕಾರುಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಆದರೆ ಅವುಗಳ ಒಳಗುಟ್ಟುಗಳು ಹೀಗೆ ಸಿಬಿಐ ತನಿಖೆಯಿಂದ ಒಂದೊಂದಾಗಿ ಹೊರಬಂದಿವೆ.
ಇಷ್ಟಕ್ಕೂ ರೆಡ್ಡಿ ವಿಚಾರಣಾಧೀನ ಕೈದಿಯಾಗಿ ಹೈದರಾಬಾದಿನ ಚಂಚಲಗೂಡ ಜೈಲು ಸೇರಿಕೊಂಡ ಬಳಿಕ ಅವೆಲ್ಲ ಯಾರ ಬಳಿಯಿವೆ? ಎಂದು ಸಹಜವಾಗಿಯೇ ಕುತೂಹಲಕಾರಿ ಪ್ರಶ್ನೆ ಏಳುತ್ತದೆ. ಸೆ. 5ರಂದು ರೆಡ್ಡಿಯನ್ನು ಬಂಧಿಸಿದ ಬಳಿಕ ಅವರ ಅನೇಕ ಐಷಾರಾಮಿ ಕಾರುಗಳು, ಹೆಲಿಕಾಪ್ಟರ್ ಸಿಬಿಐ ಸುಪರ್ದಿಯಲ್ಲಿವೆ.
ಇದೆಲ್ಲ ಸರಿ. ಆದರೆ ಸಿಬಿಐ ಕೋರ್ಟಿನಲ್ಲಿ ದಾಖಲಿಸಿರುವ ಚಾರ್ಜ್ ಷೀಟ್ ಪ್ರಕಾರ ರೆಡ್ಡಿ ಬಳಿಯಿದ್ದ ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಮತ್ತು ಮಸೇರಟಿ ವಿದೇಶಿ ಕಾರುಗಳನ್ನು ಜಫ್ತಿ ಮಾಡಲಾಗಿದೆ. ಕುತೂಹಲದ ಸಂಗತಿಯೆಂದರೆ ರೋಲ್ಸ್ ರಾಯ್ಸ್ ಕಾರಿಗೆ KA-34-C-01 ಬಳ್ಳಾರಿಯ ನೋಂದಣಿ ಸಂಖ್ಯೆ ತೂಗುಹಾಕಲಾಗಿದೆ. ಆದರೆ ಮೂರು ಕೋಟಿಯ ಮಸೇರಟಿ ಕಾರು ನೋಂದಣಿಯೇ ಆಗಿಲ್ಲ.
ಅದೇನು ಅದನ್ನು ಅವರು ಇನ್ನೂ ಬಳಸಿಯೇ ಇಲ್ಲವೋ ಅಥವಾ ನೋಂದಣಿ ಸಂಖ್ಯೆಯೇ ಇಲ್ಲದೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಿಸುತ್ತಿದ್ದರೋ ಆ ಭಗವಂತನೇ ಬಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ ಈ ಎರಡೂ ವೈಭವೋಪೇತ ಕಾರುಗಳನ್ನು ಸೆಕ್ಯುರಿಟಿ ಕಾರಣಗಳಿಂದಾಗಿ ಹೈದರಾಬಾದಿನಲ್ಲಿ ಕೋರ್ಟಿಗೆ ಹಾಜರುಪಡಿಸಲು ಸಾಧ್ಯವಾಗದು. ಆದ್ದರಿಂದ ಅವು ಬಳ್ಳಾರಿ ಪೊಲೀಸ್ ಠಾಣೆಯಲ್ಲಿಯೇ ಠಿಕಾಣಿ ಹೂಡಿವೆ ಎಂದು ಸಿಬಿಐ ಕೋರ್ಟಿಗೆ ತಿಳಿಸಿದೆ.
ತುಸು ಹೆಚ್ಚು ಎನಿಸುವಷ್ಟು ರೆಡ್ಡಿಗೆ ಕಾರ್ ಹುಚ್ಚು ಇತ್ತು ಎಂಬುದು ಲೋಕ ಚರ್ಚಿತ ವಿಷಯ. ಸಣ್ಣಪುಟ್ಟದ್ದು ಬಿಟ್ಟು ಹಡಗಿನಂತಹ ದೊಡ್ಡ ದೊಡ್ಡ ಕಾರುಗಳಾದ ರೋಲ್ಸ್ ರಾಯ್ಸ್ ಫ್ಯಾಂಟಮ್, ಮಸೇರಟಿ, ಕಾಂಟಿನೆಂಟಲ್ ಜಿಟಿ ಕುಪಿಯಾ, ರೇಂಜ್ ರೋವರ್ ಸ್ಪೋರ್ಟ್ಸ್ ಕಾರ್, ಮರ್ಸಿಡಿಸ್ ಬೆಂಜ್ ಲಿಮೊಸೈನ್, ಟೊಯೋಟಾ ಲ್ಯಾಂಡ್ ಕ್ರೂಯಿಸರ್, ಆಡಿ, ಜತೆಗಿರಲಿ ಅಂತ ಹತ್ತಾರು ಮಿತ್ಸುಬಿಷಿ ಪೇಜೇರೋಸ್.
ಮರೆತ ಮಾತು: ತಮ್ಮ ರಾಜಕೀಯ ಮಾರ್ಗದಲ್ಲಿ ಪಥಸಂಚಲನಕ್ಕಾಗಿ ಪಂಚ ಕೋಟಿ ರೂ.ಗಳ ಹಳೆಯ 'ರುಕ್ಮಿಣಿ' ವೋಲ್ವೊ ಬಸ್ ಇದೆ. ಇದಲ್ಲದೆ ಒಂದು ಡಜನ್ನಿಗೂ ಅಧಿಕ ಸಾಧಾರಣ ಬಸ್ ಗಳೂ ಇವೆ. ಅಂದಹಾಗೆ ಸಿಬಿಐ ಅಧಿಕಾರಿ ವಿವಿ ಲಕ್ಷಿನಾರಾಯಣ ಅವರು ರೆಡ್ಡಿಯನ್ನು ಬಂಧಿಸಿದ ದಿನ ಅವರ ಕುಠೀರ ಮನೆಯಿಂದ 57.89 ಕೆಜಿ ಚಿನ್ನದ ಸಾಮಾನುಗಳನ್ನು ಜಫ್ತಿ ಮಾಡಲಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications