ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಸೋದರರ ಮಹಾಪತನಕ್ಕೆ ನಾಂದಿ: ಟಪಾಲ್ ಗಣೇಶ್

By Srinath
|
Google Oneindia Kannada News

cbi-raid-reddys-down-fall-tapal-ganesh
ಬಳ್ಳಾರಿ, ಸೆ.5: ಬಳ್ಳಾರಿ ಅಕ್ರಮ ಗಣಿಗಾರಿಕೆ ಸೂತ್ರಧಾರ ಎಂದೇ ಬಿಂಬಿತರಾದ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಭಾನುವಾರ ರಾತ್ರೋರಾತ್ರಿ ಬಂಧಿಸುವ ಮೂಲಕ ಬಳ್ಳಾರಿ ರೆಡ್ಡಿ ಸೋದರರ ಮಹಾಪತನಕ್ಕೆ ನಾಂದಿ ಹಾಡಲಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಟಪಾಲ್ ಗಣೇಶ್ ವಿಶ್ಲೇಷಿಸಿದ್ದಾರೆ.

ಈ ಮಧ್ಯೆ, ಸಿಬಿಐ ವಶದಲ್ಲಿರುವ ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿಗೆ ಗುಂತಕಲ್ಲಿನಲ್ಲಿ ಬೆಳಗಿನ ಉಪಹಾರ ನೀಡಲಾಗಿದ್ದು, ಸಿಬಿಐ ಮಹಾ ನಿರ್ದೇಶಕ ಲಕ್ಷ್ಮಿನಾರಾಯಣ್ ತಂಡ ಅವರಿಬ್ಬರನ್ನೂ ಹೈದರಾಬಾದಿಗೆ ಕರೆದೊಯ್ಯುತ್ತಿದೆ. ಅಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಅವರನ್ನೂ ಹಾಜರುಪಡಿಸಿ, ತಮ್ಮ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆಯನ್ನು ಮುಂದಿಟ್ಟುಕೊಂಡು ಈ ದಾಳಿಗಳು ನಡೆದಿವೆ. ಇತ್ತೀಚೆಗೆ, ಸುಪ್ರೀಂಕೋರ್ಟಿನ ಉನ್ನತಾಧಿಕಾರ ತಂಡ (cec) ರೆಡ್ಡಿಯ ಅಕ್ರಮ ಗಣಿಗಾರಿಕೆ ಮೇಲೆ ಹದ್ದಿನಕಣ್ಣಿಟ್ಟಿತ್ತು. ಅತ್ತ ಆಂಧ್ರ ಸರಕಾರ ಸಹ ಓಬಳಾಪುರಂ ಕಂಪನಿಯ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು.

ಈ ಸಂದರ್ಭದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ ವರದಿಯೂ ಸಿಬಿಐಗೆ ನೆರವಾಗಿ, ರೆಡ್ಡಿಗೆ ಮುಳುಗುನೀರು ತರುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಈ ಸಂದರ್ಭದಲ್ಲಿ ಹೈದರಾಬಾದ್ ಸಿಬಿಐ ದಾಳಿ ನಡೆಸಿರುವುದು ಸ್ವಾಗತಾರ್ಹ ಎಂದು ಕಳೆದ 50 ವರ್ಷಗಳಿಂದ ಗಣಿಗಾರಿಕೆ ನಡೆಸಿಕೊಂಡು ಬಂದಿರುವ, ರೆಡ್ಡಿ ಸೋದರರ ಕಡುವೈರಿ ಎಂದೇ ಹೆಸರಾಗಿರುವ ಟಪಾಲ್ ಗಣೇಶ್ ಪ್ರತಿಕ್ರಿಯಿಸಿದ್ದಾರೆ.

English summary
CBI Raid on Janardhan Reddy house in Bangalore house on Monday wee hours of (Sept 5). Janardhan Reddy taken to Hyderabad. Reddys bitter enemy Tapal Ganesh has said that it would be the down fall of Reddys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X