ಬಳ್ಳಾರಿ ಗಣಿ ತನಿಖಾಧಿಕಾರಿಯೇ ಭ್ರಷ್ಟಾಚಾರದ ಆರೋಪಿ!

ಅಶೋಕ ಸದಲಗಿ ಅವರು ಆಗಸ್ಟ್ 28, 2008ರಂದು ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಂದರ್ಭದಲ್ಲೇ ಗಣಿ ಹಗರಣದ ವಿವಾದ ರಾಜ್ಯ - ರಾಷ್ಟ್ರಮಟ್ಟದಲ್ಲಿ ಬಿಸಿಯನ್ನು ಸೃಷ್ಟಿಸಿತ್ತು. ಪ್ರಸ್ತುತ ಅವರು ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಆಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋರಿಕೆಯಾಗಿರುವ ಗಣಿ ಹಗರಣದ ವರದಿಯಲ್ಲಿ ತಮ್ಮ ಹೆಸರು ನಮೂದಾಗಿರುವ ಕುರಿತು ಮಾತನಾಡಿದ ಅಶೋಕ ಸದಲಗಿ 'ಗಣಿ ಹಗರಣ ಕುರಿತು ಮೇಲಧಿಕಾರಿಗಳು ಕೋರಿದ ಎಲ್ಲಾ ಸಹಕಾರ ನೀಡಿರುವೆ. ಕಾಲಕಾಲಕ್ಕೆ ಅಗತ್ಯ ದಾಖಲಾತಿಗಳನ್ನೂ ನೀಡಲಾಗಿದೆ. ನನ್ನ ಹೆಸರು ಭ್ರಷ್ಟರ ಪಟ್ಟಿಯಲ್ಲಿ ಸೇರಿರುವುದು ವಿಷಾದನೀಯ" ಎನ್ನುತ್ತಾರೆ.
ವಾಸ್ತವದಲ್ಲಿ 2008ರ ಆಗಸ್ಟ್ನಿಂದಲೂ ಅಶೋಕ ಸದಲಗಿ ಬಳ್ಳಾರಿಯಲ್ಲೇ ಬೇರುಬಿಟ್ಟಿರುವುದಕ್ಕೆ ಅವರ ಸಹದ್ಯೋಗಿಗಳೇ ಸಾಕಷ್ಟು ಭಿನ್ನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಗಣಿ ಹಗರಣದಲ್ಲಿ ಅಶೋಕ ಸದಲಗಿ ಅವರ ಹೆಸರು ಪ್ರಸ್ತಾಪ ಆಗಿರುವುದಕ್ಕೆ 'ಸತ್ಯ ಬಯಲಾಗಿದೆ" ಎಂದು ಕೆಲವರು ಮೀಸೆಯಡಿಯಲ್ಲಿ ಮುಗುಳ್ನುಗುತ್ತಿದ್ದಾರೆ.
ಜಿಲ್ಲೆಯ ಗಣಿ ಹಗರಣದ ಕುರಿತು ಹೋರಾಟ ನಡೆಸುತ್ತಿರುವ ಟಪಾಲ್ ಗಣೇಶ್, 'ಎಂಬಿಟಿ ಗಣಿ ಸಿಬ್ಬಂದಿ ಅನಧಿಕೃತವಾಗಿ ಕಬ್ಬಿಣದ ಅದಿರನ್ನು ಹೊರತೆಗೆದು, ಸ್ಟಾಕ್ ಮಾಡಿ ರವಾನೆ ಮಾಡುತ್ತಿರುವ ಕುರಿತು ಅಧಿಕೃತ ದಾಖಲೆಗಳ ಸಮೇತ ಬಳ್ಳಾರಿ ಜಿಲ್ಲಾ ಲೋಕಾಯುಕ್ತ ಎಸ್ಪಿ ಅವರಿಗೆ ದೂರು ನೀಡಿದ್ದೆ. ಅವರು ಕೇವಲ ಕ್ಲರ್ಕ್ ಕೆಲಸ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಿಲ್ಲ. ತಪ್ಪಿತಸ್ಥರನ್ನು ಮಧ್ಯವರ್ತಿಗಳ ಮೂಲಕ ಖಾಸಗಿಯಾಗಿ ಭೇಟಿ ಮಾಡಿದರು" ಎಂದು ಆರೋಪಿಸುತ್ತಾರೆ.
ಗಣಿ - ಗಡಿ ವಿವಾದ ತೀವ್ರಗೊಂಡಾಗ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಇಚ್ಛಿಸದ ಅಶೋಕ ಸದಲಗಿ 'ಗಣಿ ವಿಷಯವೇ ತಮ್ಮ ವ್ಯಾಪ್ತಿಯಲ್ಲಿ ಇಲ್ಲ" ಎನ್ನುತ್ತಲೇ ದೂರು ನೀಡುವವರಿಂದ ಆರೋಪ ಕೇಳಿ, ದಾಖಲಾತಿಗಳನ್ನು ಪಡೆದು ಆರೋಪಿಗಳನ್ನು ಭೇಟಿ ಆಗುತ್ತಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications