ಮೈಸೂರಿನಲ್ಲಿ ವಿಕಿಪೀಡಿಯ 10ರ ಸಂಭ್ರಮ

ಪ್ರಪಂಚಾದ್ಯಂತ ಮುಕ್ತಜ್ಞಾನಹಂಚಿಕೆಯ ವಿಕಿಪೀಡಿಯ ಬಳಕೆದಾರರು ಇದರ ಹತ್ತನೆಯ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲೂ ಕೆಲವು ನಗರಗಳಲ್ಲಿ ಈ ಆಚರಣೆ ನಡೆಯಲಿದೆ. ಮೈಸೂರು ನಗರವೂ ಈ ಪಟ್ಟಿಯಲ್ಲಿದೆ.
ಮೈಸೂರಿನ ಮಾನಸಗಂಗೋತ್ರಿಯ ಪಕ್ಕದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಜೆಎಸ್ಎಸ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಟ್ಟಡದಲ್ಲಿ ಜನವರಿ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ ಈ ಕಾರ್ಯಕ್ರಮ ಜರುಗಲಿದೆ. ವಿವಿಧ ಕ್ಷೇತ್ರಗಳ ಹಲವು ಮಂದಿ ವಿಕಿಪೀಡಿಯ ಮತ್ತು ಅದರ ಬಳಕೆ ಬಗ್ಗೆ ಮಾತನಾಡಲಿದ್ದಾರೆ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಕನ್ನಡ ವಿಕಿಪೀಡಿಯ ಬಗ್ಗೆ ಕೂಡ ಪ್ರತ್ಯೇಕ ಭಾಷಣ ಮತ್ತು ಪ್ರಾತ್ಯಕ್ಷಿಕೆ ಏರ್ಪಾಡು ಮಾಡಲಾಗಿದೆ.
ವಿಕಿಪೀಡಿಯಾ ಬಳಸುವುದು ಹೇಗೆ, ಅದಕ್ಕೆ ಮಾಹಿತಿ ಸೇರಿಸುವುದು ಹೇಗೆ, ಇತರರು ಸೇರಿಸಿದ ಮಾಹಿತಿಯನ್ನು ತಿದ್ದುವುದು ಹೇಗೆ, ಕನ್ನಡದಲ್ಲಿ ಮಾಹಿತಿ ಸೇರಿಸುವುದು ಹೇಗೆ - ಈ ಎಲ್ಲ ಪ್ರಶ್ನೆಗಳಿಗೆ ಪರಿಣತರು ಪ್ರಾತ್ಯಕ್ಷಿಕೆ ಮೂಲಕ ಉತ್ತರ ನೀಡಲಿದ್ದಾರೆ.
ಮೈಸೂರು ವಿಕಿ ಕಾರ್ಯಕ್ರಮ ವಿವರಗಳು:
ಸ್ಥಳ: ಜೆಎಸ್ಎಸ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಟ್ಟಡ, ಮಾನಸ ಗಂಗೋತ್ರಿ ಬಳಿ
ದಿನಾಂಕ : ಜನವರಿ 16, 2011
ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ನೋಂದಣಿಗಾಗಿ ಸಂಪರ್ಕಿಸಿ : ವಿನಯ್ (96320 44188) ಅಥವಾ ರಾಕೇಶ್ (93421 19667)
ಕಾರ್ಯಕ್ರಮದಲ್ಲಿ ಬಾಗವಹಿಸುವ ಖ್ಯಾತನಾಮರು: ಪ್ರೊ.ಚಿದಾನಂದ ಗೌಡ, ಪ್ರೊ. ಯೋಗಾನಂದ, ಪ್ರೊ. ಎಂ.ಎಸ್. ಶ್ರೀಧರ್, ಪ್ರೊ. ಓ.ಎಲ್.ಎನ್. ಸ್ವಾಮಿ, ಡಾ. ಯು.ಬಿ. ಪವನಜ
ಹೆಚ್ಚಿನ ವಿವರಗಳಿಗೆ ಮೈಸೂರು ವಿಕಿ ತಾಣ ವೀಕ್ಷಿಸಿ
ವಿಕಿಪೀಡಿಯ ಬಗ್ಗೆ :ವಿಕಿಮೀಡಿಯಾ ಫೌಂಡೇಶನ್ನ ಸಹಾಯದಿಂದ ನಡೆಯುತ್ತಿರುವ ವಿಕಿಪೀಡಿಯ ಒಂದು ಮುಕ್ತ ಸಹಯೋಗಿ ಬಹುಭಾಷಾ ವಿಶ್ವಕೋಶ. ಸುಮಾರು 17 ಮಿಲಿಯ ಲೇಖನಗಳು ಇದರಲ್ಲಿವೆ. ಇಂಗ್ಲಿಶ್ ಭಾಷೆ ಒಂದರಲ್ಲೇ ಸುಮಾರು 3.5 ಮಿಲಿಯ ಲೇಖನಗಳಿವೆ.
ಈ ಎಲ್ಲ ಲೇಖನಗಳನ್ನು ಪ್ರಪಂಚಾದ್ಯಂತ ಚೆದುರಿಹೋಗಿರುವ ಸ್ವಯಂಸೇವಕರು ಬರೆದಿರುವುದು ಮಾತ್ರವಲ್ಲ ಈ ಲೇಖನಗಳನ್ನು ಯಾರು ಬೇಕಾದರು ತಿದ್ದಬಹುದು ಮತ್ತು ನವೀಕರಿಸಬಹುದು. ವಿಕಿಪೀಡಿಯವನ್ನು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಾಂಗರ್ ಅವರುಗಳು 2001 ರಲ್ಲಿ ಪ್ರಾರಂಭಿಸಿದರು. ಈಗ ಇದು ಅಂತರಜಾಲದ ಎಲ್ಲ ತಾಣಗಳಲ್ಲಿ ಜನಬಳಕೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ. ಅಂತರಜಾಲದಲ್ಲಿರುವ ಮಾಹಿತಿ ಆಕರವಾಗಿ ಇದು ಪ್ರಥಮ ಸ್ಥಾನದಲ್ಲಿದೆ. [ಮೈಸೂರು]
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications