ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಮನನ್ನು ಕಾಯಲು ಯುವಕರೇ ಸಜ್ಜಾಗಿ : ಪೇಜಾವರ ಶ್ರೀ
ಚಾತುರ್ಮಾಸ ವೃತದಲ್ಲಿರುವ ಶ್ರೀಗಳು ಮೈಸೂರಿನಲ್ಲಿ ಸೋಮವಾರ ಹನುಮಶಕ್ತಿ ಜಾಗರಣ ಅಭಿಯಾನ ಉದ್ಘಾಟಿಸಿ ಮಾತನಾಡುತ್ತಾ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಾದರೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ವಿಧೇಯಕ ತರಬೇಕು. ಎಲ್ಲಾ ಪಕ್ಷಗಳು ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ. ರಾಜಕೀಯ ಕಾರಣ ಮುಂದಿಟ್ಟುಕೊಂಡು ಮಂದಿರ ನಿರ್ಮಾಣ ವಿಚಾರವನ್ನು ಮುಂದೂಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪಿಗೆ ವರ್ಷಾನುಗಟ್ಟಲೆ ಕಾಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಯಾವ ಧರ್ಮದ ವಿರುದ್ಧವಾಗಲೀ ಅಥವಾ ಸಮಾಜದ ವಿರುದ್ದವಾಗಲೀ ನಾನು ಮಾತನಾಡುತ್ತಿಲ್ಲ. ಜನರು ಏಕಾಭಿಪ್ರಾಯಕ್ಕೆ ಬಂದರೆ ಯಾವುದೇ ಸರಕಾರ ಮಣಿಯಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ, ಜಾಗರಣೆ, ಸಂಘಟನೆ, ಅಭಿಯಾನ ಆಗಬೇಕು. ಭಕ್ತಿ ಮತ್ತು ಶಕ್ತಿಯ ಸಂಕೇತವಾಗಿರುವ ಹನುಮಂತನಂತೆ ಯುವಕರು ರಾಮನನ್ನು ಕಾಯಲು ಸಜ್ಜಾಗಬೇಕು. ಅಯೋಧ್ಯೆಯಲ್ಲಿ ಮಂದಿರ ಇದ್ದದ್ದು ಸ್ಪಷ್ಟ ಎಂದು ಪೇಜಾವರ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments
ಅಯೋಧ್ಯೆ ರಾಮಮಂದಿರ ವಿಶ್ವೇಶ ತೀರ್ಥ ಸ್ವಾಮೀಜಿ ಪೇಜಾವರ ಶ್ರೀಗಳು ಮೈಸೂರು ram mandir pejawar seer vishwesha teertha swamiji mysore udupi kannada news
Story first published: Tuesday, August 17, 2010, 15:52 [IST]