ಬುರ್ಖಾ ನಿಷೇಧ: ಫ್ರಾನ್ ನಂತರ ಕೆನಡಾ ಸರದಿ

ಮೊಂಟ್ರಿಯಲ್ನಲ್ಲಿನ ಫ್ರೆಂಚ್ ತರಗತಿಯಲ್ಲಿ ಈಜಿಪ್ಟ್ನಿಂದ ವಲಸೆ ಬಂದ ಮಹಿಳೆಯೊಬ್ಬಳು ಬುರ್ಖಾ ತೆಗೆಯಲು ನಿರಾಕರಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೆನಡಾ, ಯಾರು ಬುರ್ಖಾ ತೆಗೆಯಲು ಒಪ್ಪುವುದಿಲ್ಲವೋ ಅಂತಹವರಿಗೆ ಸರಕಾರಿ ಸೇವೆ, ಶಾಲೆ-ಕಾಲೇಜು, ಆರೋಗ್ಯ ಕೇಂದ್ರಗಳಲ್ಲಿ ಪ್ರವೇಶ ನೀಡಲಾಗದೆಂದು ಘೋಷಿಸಿದೆ.
ಕಳೆದ ವಾರಾಂತ್ಯಕ್ಕೆ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ ಬುರ್ಖಾ ನಿಷೇಧಕ್ಕೆ ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳು ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಬುರ್ಖಾ ಸಮಾಜದ ಉದಾರ ಮತ್ತು ಸೆಕ್ಯುಲರ್ ಮೌಲ್ಯಗಳಿಗೆ ವಿರುದ್ಧ ಎಂಬುದಾಗಿ ವಿವಾದ ಉಂಟಾದ ಕ್ಯೂಬೆಕ್ ಪ್ರಾಂತದ ಶೇ.95ಕ್ಕೂ ಅಧಿಕ ಮಂದಿ ಅಭಿಪ್ರಾಯಪಟ್ಟಿದ್ದರು.
10ಪ್ರಾಂತ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಕೆನಡಾದಲ್ಲಿ ಪ್ರತಿ 5ಮಂದಿಗೆ ನಾಲ್ವರಂತೆ ಬುರ್ಖಾ ನಿಷೇಧವನ್ನು ಸಮರ್ಥಿಸಿದ್ದು, ಯಾವುದೇ ವಿಷಯದಲ್ಲಿ ಶೇ.80ರಷ್ಟು ಕೂಡಾ ಸಹಮತ ತೋರದಿರುವ ಕೆನಡಿಯನ್ನರು ಈ ವಿಷಯದಲ್ಲಿ ಸರ್ವಾನುಮತ ಹೊಂದಿರುವುದು ಅಚ್ಚರಿ ತಂದಿದೆ ಎಂದು ಸಮೀಕ್ಷೆ ನಡೆಸಿದ ಮಾಂಟ್ರಿಯಲ್ ಗಜೆಟ್ ಪತ್ರಿಕೆಗಾಗಿ ಸಮೀಕ್ಷೆ ನಡೆಸಿದ ಆಂಗೂಸ್ ರೀಡ್ ವರದಿಯಲ್ಲಿ ಹೇಳಲಾಗಿದೆ.
ಆದರೆ ಮಾಂಟ್ರಿಯಲ್ನ ಮುಸ್ಲಿಂ ಕೌನ್ಸಿಲ್ನ ಸಲಾಮ್ ಏಳ್ಮೆನಿಯಾವಿ , ಸಮೀಕ್ಷೆಯ ಫಲಿತಾಂಶ ಬುರ್ಖಾ ವಿವಾದದಸುತ್ತ ಹೊಂದಿರುವ ಭಾವನಾತ್ಮಕ ವಾತಾವರಣವೊಂದರಲ್ಲಿ ಮೂಡಿಬಂದಿದೆ. ಇದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ. ಆದಾಗ್ಯೂ ಕೆನಡಾದಲ್ಲಿನ ಬಹುತೇಕ ಮುಸ್ಲಿಂ ಮಹಿಳೆಯರು ಬುರ್ಖಾ ಅಥವಾ ಶಿರವಸ್ತ್ರ ಧರಿಸುವುದಿಲ್ಲ.ಕೆನಡಾದಲ್ಲಿ 1 ಮಿಲಿಯನ್ ಗೂ ಅಧಿಕ ಮುಸ್ಲಿಮರಿದ್ದು ಅವರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳದಿಂದ ಜನಸಂಖ್ಯಾ ಸಮತೋಲನದಲ್ಲಿ ಏರುಪೇರಾಗುವ ಅಪಾಯವಿದೆ ಎಂದು ಹೇಳಲಾಗಿದೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications